ಎಸ್‌.ನಾರಾಯಣ್‌ಗೆ ಮಾತೃ ವಿಯೋಗ

By Web DeskFirst Published Dec 20, 2018, 8:45 AM IST
Highlights

ನಿರ್ದೇಶಕ, ನಿರ್ಮಾಪಕ ಎಸ್‌. ನಾರಾಯಣ್‌ರವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಭದ್ರಾವತಿ[ಡಿ.20]: ನಿರ್ದೇಶಕ, ನಿರ್ಮಾಪಕ ಎಸ್‌. ನಾರಾಯಣ್‌ ಅವರ ಮಾತೃಶ್ರೀ ಕಮಲಮ್ಮ(84) ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದರು.

ಮೃತರಿಗೆ ಪುತ್ರರಾದ ಎಸ್‌.ನಾರಾಯಣ್‌, ನಿರ್ಮಾಪಕ ಎಸ್‌.ಗೋವಿಂದ್‌ ಇದ್ದಾರೆ. 25 ದಿನಗಳಿಂದ ಮೆದುಳು ಸಂಬಂಧಿ ​ಕಾಯಿಲೆಯಿಂದ ಬಳಲುತ್ತಿದ್ದ ಕಮಲಮ್ಮ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಂಧಿ ​ನಗರದಲ್ಲಿರುವ ನಿವಾಸದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

Latest Videos

ಬುಧವಾರ ಸಂಜೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

click me!