ಕೀನ್ಯಾದ ಕಾಡಲ್ಲಿ ಗಜರಾಜನೊಂದಿಗೆ ದಿನ ಕಳೆದ ಡಿ-ಬಾಸ್!

Published : Sep 27, 2019, 02:29 PM IST
ಕೀನ್ಯಾದ ಕಾಡಲ್ಲಿ ಗಜರಾಜನೊಂದಿಗೆ ದಿನ ಕಳೆದ ಡಿ-ಬಾಸ್!

ಸಾರಾಂಶ

ರಾಬರ್ಟ್ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ್ ಕೀನ್ಯಾದ ಪ್ರಸಿದ್ದ ಕಾಡೊಂದರಲ್ಲಿ ವೈಲ್ಡ್ ಲೈಫ್ ಫೋಟೋ ಶೂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ

ಪ್ರಾಣಿಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ದರ್ಶನ್ ಸಮಯ ಸಿಕ್ಕಾಗೆಲ್ಲಾ ಫೋಟೋಶೂಟ್ ಗೆಂದು ಸ್ನೇಹಿತರೊಂದಿಗೆ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಸೆರೆ ಹಿಡಿದ ಫೋಟೋಗಳಿಗೆ ಫ್ರೇಮ್ ಹಾಕಿಸಿ ಪ್ರದರ್ಶನ ವೇಳೆ ಮಾರಾಟ ಮಾಡಿ ಅದರಿಂದ ಗಳಿಸಿದ ಹಣವನ್ನು ಸಮಾಜದ ಸಹಾಯಕ್ಕೆಂದು ಬಳಸುತ್ತಾರೆ.

ಕುರುಕ್ಷೇತ್ರ ಚಿತ್ರದ ಹಿಟ್ ನಂತರ ಬಿಡುವಿಲ್ಲದೆ ರಾಬರ್ಟ್ ಶೂಟಿಂಗ್ ಗೆ ಹಾಜರಾದ ದರ್ಶನ್ ಕೊಂಚ ಬ್ರೇಕ್ ಬೇಕೆಂದು ಸ್ನೇಹಿತರೊಂದಿಗೆ ಕ್ಯಾಮೆರಾ ಹಿಡಿದು ಕೀನ್ಯಾದ ಮಾಸಿಯಾ ಮಾರಾ (Maasai Mara)ದತ್ತ ಹೊರಟಿದ್ದಾರೆ. ನಟನೆಯಷ್ಟೇ ಪೋಟೋಗ್ರಫಿಯನ್ನು ಇಷ್ಟಪಡುವ ದರ್ಶನ್ ಪ್ರೋಫೆಷನಲ್ ಕ್ಯಾಮೆರಾ ಬಳಸುತ್ತಾರೆ. ದರ್ಶನ್ ಫೋಟೋ ಸೆರೆ ಹಿಡಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವೇಳೆ ಹಾಟ್ ಏರ್ ಬಲೂನ್ ನಲ್ಲಿ ಕಾಣಿಸಿಕೊಂಡ ದರ್ಶನ್ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.

 

ಇನ್ನು ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾದ ದರ್ಶನ್ ಬೇರೆ ದೇಶಗಳಿಗೆ ತರಳಿ ಪ್ರಾಣಿಗಳ ಬಗ್ಗೆ ತೋರಿಸುತ್ತಿರುವ ಕಾಳಜಿ ಅಭಿಮಾನಿಗಳ ಮನಸ್ಸು ಗೆದ್ದಿದೆ. ಈ ಹಿಂದೆ ದರ್ಶನ್ ಕ್ಲಿಕ್ಕಿಸಿದ ಆನೆ ಫೋಟೋವನ್ನು ಹಾಸ್ಯ ನಟ ಚಿಕ್ಕಣ್ಣ 1 ಲಕ್ಷ ರೂಪಾಯಿ ಕೊಟ್ಟ ಪಡೆದುಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!