
ಶ್ರೀಸಾಮಾನ್ಯನ ಜೀವನ ಅರಿಯಲು, ಅವರಿಗೆ ನೆರವಾಗಲು ಉದಯ ಟಿವಿಯಲ್ಲಿ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಬಿತ್ತರಗೊಳ್ಳುತ್ತಿದೆ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ, ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ವಿಜಯ ರಾಘವೇಂದ್ರ, ಶ್ರೀ ಮುರಳಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೂವು, ಹಣ್ಣು, ಜ್ಯೂಸ್ ಮಾರಿಯಾಗಿದೆ. ಇವರೊಂದಿಗೆ ಇದೀಗ ಸೇರ್ಪಡೆಯಾಗಿದ್ದು ಪ್ರಜ್ವಲ್ ದೇವರಾಜ್.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಟೀ ವ್ಯಾಪಾರಿ ಸತೀಶ್ ಮಗಳಿಗೆ ಸಹಾಯ ಮಾಡಲಿದ್ದಾರೆ. ಈಕೆಗೆ ಶ್ರವಣ ದೋಷವಿದೆ. ಶಸ್ರ್ತಚಿಕಿತ್ಸೆಗೆ ಹಣದೂಗಿಸಲು ಪ್ರಜ್ವಲ್ ಬಾದಾಮಿ ಹಾಲು ಮಾರಿದ್ದಾರೆ. ಇದರಿಂದ ಬಂದ ಹಣವಲ್ಲದೇ, ವೈಯಕ್ತಿಕವಾಗಿಯೂ ಬಡ ಬಾಲಕಿಗೆ ನೆರವಾಗಿ, ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಹಾಲು ಮಾರಿ ಎಷ್ಟು ಹಣ ಸಂಗ್ರಹವಾಯಿತೆಂಬುದನ್ನು ಭಾನುವಾರ ರಾತ್ರಿ ಪ್ರಸಾರವಾಗೋ ಕಾರ್ಯಕ್ರಮದಲ್ಲಿ ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.