ರಿಷಬ್ ಶೆಟ್ರ ಮುಂದಿನ ಸಿನಿಮಾ ಟೈಟಲ್ಲೇ ಡಿಫರೆಂಟ್! ಏನಿದು ‘ರುದ್ರಪ್ರಯಾಗ’?

Published : Jul 08, 2019, 10:23 AM IST
ರಿಷಬ್ ಶೆಟ್ರ ಮುಂದಿನ ಸಿನಿಮಾ ಟೈಟಲ್ಲೇ ಡಿಫರೆಂಟ್! ಏನಿದು ‘ರುದ್ರಪ್ರಯಾಗ’?

ಸಾರಾಂಶ

ಬೆಲ್ ಬಾಟಂ ನಂತರ ನಿರ್ದೇಶನಕ್ಕೆ ರಿಷಬ್ ಶೆಟ್ಟಿ ವಾಪಸ್ | ರುದ್ರಪ್ರಯಾಗ ಮುಂದಿನ ಸಿನಿಮಾ | ಕುತೂಹಲ ಮೂಡಿಸಿದೆ ಸಿನಿಮಾ ಟೈಟಲ್  

ರಿಷಬ್ ಶೆಟ್ಟಿ ಸಿನಿಮಾವೆಂದರೆ ಅಲ್ಲಿ ಏನೋ ಒಂದು ವಿಶೇಷವಿರುತ್ತದೆ. ಕ್ರೊಯೆಟಿವಿಟಿ ಇರುತ್ತದೆ. ಹೊಸತನ ಇರುತ್ತದೆ ಎಂಬ ಟ್ರೆಂಡನ್ನು ಹುಟ್ಟು ಹಾಕಿದ ಅಪರೂಪದ ನಿರ್ದೇಶಕ. ಸರ್ಕಾರಿ ಶಾಲೆ ಕಾಸರಗೋಡು ಡೈರಕ್ಟರ್ ಕ್ಯಾಪ್ ಬಿಟ್ಟು  ಬೆಲ್ ಬಾಟಂನಲ್ಲಿ ನಾಯಕನಾಗಿ ನಟಿಸಿದ್ದರು. 

ಇದೀಗ ಮತ್ತೆ ನಿರ್ದೇಶನಕ್ಕೆ ವಾಪಸ್ಸಾಗಿದ್ದಾರೆ. ಇವರ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ಜುಲೈ 7 ರಂದು ಹುಟ್ಟುಹಬ್ಬ ಆಚರಿಸಿಕೊಂಡ ರಿಷಬ್ ಹೊಸ ಸಿನಿಮಾ ‘ರುದ್ರ ಪ್ರಯೋಗ’ದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 

 

ರುದ್ರಪ್ರಯಾಗ ಟೈಟಲ್ಲೇ ಡಿಫರೆಂಟಾಗಿದೆ. ಇದು ಉತ್ತರ ಖಂಡ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಅಲಕಾನಂದ ಹಹಾಗೂ ಮಂದಾಕಿನಿ ನದಿಗ ಸಂಗಮ. . ರುದ್ರಪ್ರಯಾಗವು ಹಿಮಾಲಯದ ಪವಿತ್ರನದಿಗಳ ೫ ಸಂಗಮಕ್ಷೇತ್ರಗಳ ಪೈಕಿ ಒಂದು. 

ಇನ್ನೊಂದು ರೀತಿಯಲ್ಲಿ ನೋಡುವುದಾದರೆ  ಸುಮಾರು 425 ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆಂದು ಹೇಳಲಾದ ರುದ್ರಪ್ರಯಾಗದ ನರಭಕ್ಷಕ ಎಂದೇ ಖ್ಯಾತಿ ಹೊಂದಿದ ಒಂದು ಚಿರತೆಯ ಬಗ್ಗೆ ಇಂಗ್ಲಿಷಿನಲ್ಲಿ ಬಂದ Man Eating Leopard of Rudraprayag ಎಂಬ ರೋಚಕ ಕತೆಯನ್ನು ಅನುವಾದಿಸಿ ರುದ್ರಪ್ರಯಾಗದ ಭಯಾನಕ ನರಭಕ್ಷಕ ಎನ್ನುವ ಹೆಸರಿನ ಪುಸ್ತಕವನ್ನು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದಿದ್ದಾರೆ.  

ಒಟ್ಟಿನಲ್ಲಿ ಈ ಶೀರ್ಷಿಕೆಯ ಹಿಂದಿನ ಕುತೂಹಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ ಶೆಟ್ರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಂಗಾಂಗ ತೋರಿಸೋ ಬಟ್ಟೆ ಹಾಕಿದ್ರೆ ನಿಮ್ಮನ್ನು ದರಿದ್ರ ಅಂತ ಅಂದುಕೊಳ್ತಾರೆ ಹೇಳಿಕೆಗೆ ನಟ ಶಿವಾಜಿ ಕ್ಷಮೆಯಾಚನೆ
ಸಿನಿ ಸ್ನೇಹಿತೆಯರ ಜೊತೆ ಭರ್ಜರಿಯಾಗಿ ಕ್ರಿಸ್‌ಮಸ್‌ ಆಚರಿಸಿದ ಮೇಘನಾ ರಾಜ್‌!