ನಿರ್ಮಾಪಕರಾಗಲು ಹೋಗಿ ಸಂಸಾರ ಹಾಳುಮಾಡಿಕೊಂಡ್ರಾ ನಟ ಅಜಯ್ ರಾವ್? ಹಿಂದೆ ಇರೋ ಸ್ಟೋರಿ...!

Published : Aug 16, 2025, 03:56 PM IST
Ajay Rao

ಸಾರಾಂಶ

'ದುಡ್ಡೇ ದೊಡ್ಡಪ್ಪ' ಎಂಬುದು ಈಗಿನ ಕಾಲದಲ್ಲಿ ಎಲ್ಲರ ವಿಷಯದಲ್ಲೂ ನಿಜವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಸೆಲೆಬ್ರಿಟಿಗಳ ವಿಷಯದಲ್ಲಿ ಇದು ತುಂಬಾ ಬೇಗ ನಿಜವಾಗುವ ಸಂದರ್ಭ ಹೆಚ್ಚು. ಕಾರಣ, ಅವರ ಲೈಫ್‌ಸ್ಟೈಲ್, ಸಾಧನೆ ಹಂಬಲ ಹಾಗು ಅತಿಯಾದ ನಿರೀಕ್ಷೆಗಳು ಎನ್ನಬಹುದೇನೋ. ಆದರೆ..

ಕನ್ನಡ ಚಿತ್ರರಂಗದ ನಟ ಅಜಯ್ ರಾವ್ (Ajay Rao) ಹಾಗೂ ಪತ್ನಿ ಸ್ವಪ್ನ ರಾವ್ ಮಧ್ಯೆ ದಾಂಪತ್ಯದಲ್ಲಿ ಬಿರುಕು ಮೂಡಿದೆ. 2014ರಲ್ಲಿ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಜಯ್ ರಾವ್ ಹಾಗೂ ಸ್ವಪ್ನ ರಾವ್ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ಈ ಕೇಸ್ ನಿಜವಾಗಿಯೂ ಯಾವತ್ತು ದಾಖಲಾಗಿದೆ, ಎಂದಿನಿಂದ ಈ ದಂಪತಿಗಳ ಮಧ್ಯೆ ಬಿರುಕು ಮೂಡಿದೆ? ಈ ಎಲ್ಲಾ ಸಂಗತಿಗಳೂ ಇನ್ಮುಂದೆ ಬಯಲಾಗಬೇಕಿದೆ.

ಆದರೆ, ಸಿಕ್ಕ ಒಂದು ಮಾಹಿತಿ ಪ್ರಕಾರ, ಅಜಯ್ ರಾವ್ ಅವರು ನಿರ್ಮಾಪಕರಾಗಲು ಹೋಗಿದ್ದೇ ಈ ಕೌಟುಂಬಿಕ ಕಲಹಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದು ಮೂಲದ ಪ್ರಕಾರ, ತಮ್ಮ ನಟನೆಯ 'ಎಕ್ಸ್‌ಕ್ಯೂಸ್‌ ಮೀ' ಚಿತ್ರದಿಂದಲೂ ಕನ್ನಡ ಚಿತ್ರರಂಗದಲ್ಲಿ ನಟರಾಗಿದ್ದ ಅಜಯ್ ರಾವ್ ಅವರು ಇತ್ತೀಚೆಗೆ ನಿರ್ಮಾಪಕ ಕಂ ನಟರಾಗಿದ್ದರು. 'ಯುದ್ಧಕಾಂಡ' ಚಿತ್ರವನ್ನು ನಿರ್ಮಾಣ ಮಾಡಿ, ನಾಯಕರಾಗಿ ನಟನೆಯನ್ನೂ ಮಾಡಿದ್ದ ಅಜಯ್ ರಾವ್ ಆ ಚಿತ್ರದಿಂದ ನಷ್ಟ ಅನುಭವಿಸಿದ್ದರು. ಇದೇ ಅವರಿಬ್ಬರ ದಾಂಪತ್ಯದಲ್ಲಿ ವಿರಸ ಮೂಡಲು ಕಾರಣ ಎನ್ನಲಾಗುತ್ತಿದೆ.

'ದುಡ್ಡೇ ದೊಡ್ಡಪ್ಪ' ಎಂಬುದು ಈಗಿನ ಕಾಲದಲ್ಲಿ ಎಲ್ಲರ ವಿಷಯದಲ್ಲೂ ನಿಜವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಸೆಲೆಬ್ರಿಟಿಗಳ ವಿಷಯದಲ್ಲಿ ಇದು ತುಂಬಾ ಬೇಗ ನಿಜವಾಗುವ ಸಂದರ್ಭ ಹೆಚ್ಚು. ಕಾರಣ, ಅವರ ಲೈಫ್‌ಸ್ಟೈಲ್ ಹಾಗು ಅತಿಯಾದ ನಿರೀಕ್ಷೆಗಳು ಎನ್ನಬಹುದೇನೋ. ಆದರೆ, ನಿರ್ಧಿಷ್ವವಾಗಿ ಅಜಯ್ ರಾವ್-ಸ್ವಪ್ನಾ ರಾವ್ ದಾಂಪತ್ಯದ ವಿಷಯದಲ್ಲಿ ಏನಾಗಿದೆ ಎಂಬುದು ಇನ್ನಷ್ಟೇ ತಿಳುದುಬರಬೇಕಿದೆ.

ನಟ ಅಜಯ್ ರಾವ್ ಅವರು ಯುದ್ಧಕಾಂಡ ಸಿನಿಮಾಗೆ ಸಾಕಷ್ಟು ಬಂಡವಾಳ ಹೂಡಿದ್ದರು. ಈಗಂತೂ ಸಹಜವಾಗಿಯೇ ಅದು 4-5 ಕೋಟಿಗಳ ಲೆಕ್ಕದಲ್ಲೇ ಇರುತ್ತದೆ. ಆದರೆ ಸಿನಿಮಾ ಚೆನ್ನಾಗಿದೆ ಎಂವ ವಿಮರ್ಶೆ ಬಂದರೂ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಆಗಲಿಲ್ಲ. ಈ ಚಿತ್ರದಿಂದ ನಟ-ನಿರ್ಮಾಪಕ ಅಜಯ್ ರಾವ್ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಜೊತೆಗೆ, ಸಿನಿಮಾ ನಿರ್ಮಾಣಕ್ಕೆ ತಮ್ಮ ಬಿಎಂಡಬ್ಲೂ ಕಾರನ್ನು ಸಹ ಮಾರಾಟ ಮಾಡಿದ್ದರು. ಸಿನಿಮಾದಿಂದ ಆದ ನಷ್ಟವೇ ಈ ದಂಪತಿಗಳ ಡಿವೋರ್ಸ್‌ಗೆ ಕಾರಣ ಆಯ್ತಾ? ಅಥವಾ ಬೇರೆ ಇನ್ನೇನೋ ಸೃಷ್ಟಿಯಾಯ್ತಾ? ಈ ಬಗ್ಗೆ ನಿಖರ ಕಾರಣ ಇನ್ನಷ್ಟೇ ಖಾರ್ಥೃಈ ಆಗಬೇಕಿದೆ!

ನಟ ಅಜಯ್ ರಾವ್ ಹಾಗೂ ಸ್ವಪ್ನಾ ರಾವ್ ಮಧ್ಯೆ ಹೊಂದಾಣಿಕೆ ಕೊರತೆಯೋ ಅಥವಾ ಬೇರೆ ಇನ್ನೇನು ಕಾರಣವೋ ಗೊತ್ತಿಲ್ಲ. ಒಟ್ಟಿನಲ್ಲಿ 10 ವರ್ಷಗಳಿಗೂ ಮೊದಲು ಪ್ರೀತಿಸಿ ಮದುವೆ ಆಗಿ ಸಂಸಾರ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಬೇರೆಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇವರಿಬ್ಬರ ದಾಂಪತ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿರುವ ಇವರೀಗ ಕೋರ್ಟ್ ಮೆಟ್ಟಿಲೇರಿರುವ ಸಂಗತಿ ಬಯಲಾಗಿದೆ.

ಒಟ್ಟಿನಲ್ಲಿ, ಸಾಂಡಲ್‌ವುಡ್‌ನಲ್ಲೂ ಇದೀಗ ಹಲವು ಡಿವೋರ್ಸ್ ಕೇಸ್‌ಗಳು ಸದ್ದು ಮಾಡತೊಡಗಿವೆ, ಮುಂದೇನು ಎಂಬ ಕುತೂಹಲ ಸಹಜವಾಗಿಯೇ ಸೃಷ್ಟಿಯಾಗಿದೆ. ಕಳೆದ ವರ್ಷವಷ್ಟೇ ಈ ಜೋಡಿ ನೂತನ ಗೃಹ ಪ್ರವೇಶ ಮಾಡಿ, ಇಡೀ ಚಿತ್ರರಂಗವೂ ಸೇರಿದಂತೆ, ಬಂಧು-ಬಾಧವರೊಂದಿಗೆ ಖುಚಿ ಹಂಚಿಕೊಂಡಿದ್ದರು. ಆದರೆ, ಇದೀಗ ಈ ಜೋಡಿ ಬೇರೆಯಾಗಲು ಹೊರಟಿದ್ದಾರಾ? ಈಗಾಗಲೇ ಡಿವೋರ್ಸ್ಗೆ ಅರ್ಜಿ ಸಲ್ಲಿಸಿರೋ ಕಾರಣಕ್ಕೆ ‘ಹೌದು’ ಪರಸ್ಪರ ನಿರ್ಧಾರ ಮಾಡಿಯೇ ಬೇರೆ ಆಗಲು ಈ ದಂಪತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

'ಎಕ್ಸ್‌ಕ್ಯೂಸ್ ಮಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಅವರು ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪೂಜಾ ಗಾಧಿಯ ಜೊತೆ ‘ತಾಜ್‌ ಮಹಲ್’ ಚಿತ್ರದಲ್ಲಿ ಸಹ ಅಜಯ್ ರಾವ್ ಅವರು ನಾಯಕನಟರಾಗಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಕೃಷ್ಣ ಸೇರಿದಂತೆ ಅಜಯ್ ರಾವ್ ಅಚರ ನಟಿಸಿದ ಕನ್ನಡ ಚಿತ್ರಗಳ ಲಿಸ್ಟ್ ಸಾಕಷ್ಟು ದೊಡ್ಡದಿದೆ. ಇತ್ತೀಚೆಗಷ್ಟೇ ಅಜಯ್ ರಾವ್ ನಿರ್ಮಾಣ ಹಾಗೂ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆ ಆಗಿತ್ತು.

ನಟ-ನಿರ್ಮಾಪಕ ಅಜಯ್ ರಾವ್ ಅವರು ಹೆಚ್ಚಾಗಿ ಕೃಷ್ಣ ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದರಿಂದ ಅವರಿಗೆ ‘ಕೃಷ್ಣ ಅಜಯ್ ರಾವ್’ ಎಂಬ ಮರುನಾಮಕರಣವೂ ಅನ್‌ಆಫೀಸಿಯಲ್ ಎಂಬಂತೆ ಆಗಿತ್ತು. ಅದೆಷ್ಟೋ ಜನರಿಗೆ ಕೃಷ್ಣ ಆಜಯ್ ರಾವ್ ಎಂದರೇನೇ ಗೊತ್ತಾಗೋದು ಎಂಬಷ್ಟರ ಮಟ್ಟಿಗೆ ನಟ ಅಜಯ್ ರಾವ್ ಅವರು ಕೃಷ್ಣನ ಪಾತ್ರದ ಮೂಲಕ ಪ್ರಸಿದ್ಧರಾಗಿದ್ದಾರೆ. ಇದೀಗ, ದಾಂಪತ್ಯದಲ್ಲಿ ಮೂಡಿದ ಬಿರುಕು ಹಾಗೂ ವಿಚ್ಛೇದನಕ್ಕೆ ಅರ್ಜಿ ಮತ್ತೊಮ್ಮೆ ಸುದ್ದಿಯಲ್ಲಿ ಬೀಳುವಂತೆ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌