ಅರೆರೆ... ರಾಮ್ ಚರಣ್‌ಗೆ ಏನಾಯ್ತು? ಇದ್ದಕ್ಕಿದ್ದಂತೆ ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿಗೆ ಹಾರಿದ 'ಪೆದ್ದಿ'

Published : Jul 26, 2026, 06:44 PM IST
Ram Charan

ಸಾರಾಂಶ

ನಟ ರಾಮ್ ಚರಣ್‌ ಅವರ ಕೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಕೊಯಮತ್ತೂರಿನಲ್ಲಿ ನಡೆಯಲಿದೆ. 'ಪೆದ್ದಿ' ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಗಾಯವಾಗಿತ್ತು. ಪ್ರಮೋಷನ್ ವೇಳೆ ಕೂಡ ಗಾಯದ ನೋವಿನಲ್ಲೇ ಕಾಣಿಸಿಕೊಂಡಿದ್ದರು. ಈ ಸರ್ಜರಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಕೊಯಮತ್ತೂರಿನ ಪ್ರಸಿದ್ಧ ಗಂಗಾ ಆಸ್ಪತ್ರೆಯಲ್ಲಿ ತಮ್ಮ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. 'ಪೆದ್ದಿ' ಸಿನಿಮಾ ಶೂಟಿಂಗ್ ವೇಳೆ ಗಾಯವಾಗಿದ್ದರೂ, ಸಿನಿಮಾ ಪ್ರಚಾರ ಮುಗಿದ ನಂತರವೇ ಚಿಕಿತ್ಸೆ ಪಡೆಯಲು ಅವರು ನಿರ್ಧರಿಸಿದ್ದರು.

ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ರಾಮ್ ಚರಣ್‌ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆಗಾ ಕುಟುಂಬ ಇಂದು ಕೊಯಮತ್ತೂರಿಗೆ ಪ್ರಯಾಣ ಬೆಳೆಸಿದೆ. ಮೆಗಾಸ್ಟಾರ್ ಚಿರಂಜೀವಿ, ಸುರೇಖಾ, ಉಪಾಸನಾ ಸೇರಿದಂತೆ ಕುಟುಂಬ ಸದಸ್ಯರು ರಾಮ್ ಚರಣ್‌ಗೆ ಬೆಂಬಲವಾಗಿ ನಿಂತಿದ್ದಾರೆ.

ಖ್ಯಾತ ವೈದ್ಯ ಡಾ. ಪ್ರವೀಣ್ ಮತ್ತು ಹಿರಿಯ ಮೂಳೆ ತಜ್ಞ ಡಾ. ರಾಜಶೇಖರ್ ಅವರ ಮೇಲ್ವಿಚಾರಣೆಯಲ್ಲಿ ಈ ಸರ್ಜರಿ ನಡೆಯಲಿದೆ. ಅತ್ಯಾಧುನಿಕ ಮೂಳೆ ಚಿಕಿತ್ಸೆಗೆ ಹೆಸರುವಾಸಿಯಾದ ಗಂಗಾ ಆಸ್ಪತ್ರೆಯ ಅನುಭವಿ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಲಿದೆ. ಆಪರೇಷನ್ ಯಶಸ್ವಿಯಾಗಿ ಪೂರ್ಣಗೊಂಡು, ರಾಮ್ ಚರಣ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಮ್ ಚರಣ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇಶಾದ್ಯಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದಾರೆ. ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಿ ಉತ್ತಮ ಯಶಸ್ಸು ಕಂಡಿತ್ತು. ತೆಲುಗು ಮಾರುಕಟ್ಟೆಯಲ್ಲಿ ವಿತರಕರಿಗೆ ಲಾಭ ತಂದುಕೊಟ್ಟಿತ್ತು. ಆದರೆ, ಓವರ್‌ಸೀಸ್‌ನಲ್ಲಿ ನಿರಾಸೆ ಮೂಡಿಸಿತ್ತು.

ರಾಮ್ ಚರಣ್ ನಟನೆಗೆ ಪ್ರಶಂಸೆ

ಈ ಚಿತ್ರದಲ್ಲಿ ರಾಮ್ ಚರಣ್ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ನಟನಾಗಿ ರಾಮ್ ಚರಣ್ ತೋರಿದ ಪ್ರಬುದ್ಧತೆಯನ್ನು ಪ್ರೇಕ್ಷಕರು ಕೊಂಡಾಡಿದ್ದರು. ಎಮೋಷನಲ್ ಆ್ಯಕ್ಷನ್ ಸ್ಪೋರ್ಟ್ಸ್ ಡ್ರಾಮಾ ಆಗಿದ್ದ 'ಪೆದ್ದಿ' ಚಿತ್ರಕ್ಕಾಗಿ ಚರಣ್ ಸಾಕಷ್ಟು ಶ್ರಮಿಸಿದ್ದರು. ಈ ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಹಲವು ಗಾಯಗಳಾಗಿದ್ದು, ಈ ಮಣಿಕಟ್ಟು ಗಾಯವೂ ಅದರಲ್ಲಿ ಒಂದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

National Crush: ಸೋಶಿಯಲ್ ಮೀಡಿಯಾ ಟ್ರೆಂಡ್‌ನಿಂದ ಸಿಕ್ಕಿತು ಈ ಪಟ್ಟ: ನಟಿ ಗಿರಿಜಾ ಓಕ್ ಹೇಳಿದ್ದೇನು?
ಎಲ್ಲಾ ಹೀರೋಗಳು ಯಶ್ ಆಗಲು ಹೋಗಬಾರದು: ನಿರ್ಮಾಪಕ ಉದಯ್ ಕೆ. ಮೆಹ್ತಾ ಹೇಳಿದ್ದೇನು?