ರಾಜ್ಯ ಪ್ರಶಸ್ತಿ ಘೋಷಣೆ; ರಕ್ಷಿತ್ ಶ್ರೇಷ್ಠ ನಟ-ಅರ್ಚನಾ ಶ್ರೇಷ್ಠ ನಟಿ; ಪುನೀತ್ ಚಿತ್ರಕ್ಕೆ ಬಂತು ಬಹುಮಾನ!

Published : Oct 03, 2025, 11:02 PM IST
Puneeth Rakshit Archana

ಸಾರಾಂಶ

2021ನೇ ಸಾಲಿನ ಶ್ರೇಷ್ಠ ನಟ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಪಡೆದಿದ್ದು, ಶ್ರೇಷ್ಟ ನಟಿ ಪ್ರಶಸ್ತಿಯನ್ನು 'ಮ್ಯೂಟ್' ಚಿತ್ರಕ್ಕಾಗಿ ನಟಿ ಅರ್ಚನಾ ಜೋಯಿಸ್ ಪಡೆದುಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ‘ಯುವರತ್ನ’ಕ್ಕೆ ಶ್ರೇಷ್ಠ ಮನರಂಜನಾ ಚಿತ್ರ ಪಶಸ್ತಿ ಸಿಕ್ಕಿದೆ.

ಕರ್ನಾಟಕ ಸರ್ಕಾರದ 2021ನೇ ಸಾಲಿನ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರದ 2021ನೇ ಸಾಲಿನ ಕನ್ನಡ ಚಲನಚಿತ್ರ ರಾಜ್ಯ ಪ್ರಶಸ್ತಿ (State Award- 2021) ಘೋಷಣೆ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಪ್ರಶಸ್ತಿಗಳು ತಡವಾಗಿ ಘೋಷಣೆ ಆಗುತ್ತಿರುವುದು ಹೊಸ ವಿಷಯವೇನಲ್ಲ. ಇದೀಗ 2021ರ ಸಾಲಿನ ಪ್ರಶಸ್ತಿ ಘೋಷಿಸಲಾಗಿದ್ದು, ಈ ಪ್ರಶಸ್ತಿ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ನೋಡಿ..

ಅತ್ಯುತ್ತಮ ನಟ ರಕ್ಷಿತ್ ಶೆಟ್ಟಿ - ಚಾರ್ಲಿ 777

ಅತ್ಯುತ್ತಮ ನಟಿ ಅರ್ಚನಾ ಜೋಯಿಷ್ - ಮ್ಯೂಟ್

ಅತ್ಯುತ್ತಮ ಮೊದಲ ಚಿತ್ರ- ದೊಡ್ಡಹಟ್ಟಿ ಬೈರೇಗೌಡ

ಅತ್ಯುತ್ತಮ ಮನರಂಜನಾ ಚಿತ್ರ - ಯುವರತ್ನ

ನಟ ರಕ್ಷಿತ್ ಶೆಟ್ಟಿ

ಹೀಗೇ ಪ್ರಶಸ್ತಿ ಪಟ್ಟಿ ಸಾಗುತ್ತಿದೆ. ಅನೇಕ ಯುವ ಪ್ರತಿಭೆಗೆ ಆ ಸಾಲಿನ ಪ್ರಶಸ್ತಿಗಳು ಲಭ್ಯವಾಗಿವೆ. ಅದರಲ್ಲಿ ಮುಖ್ಯವಾಗಿ ನಟ ರಕ್ಷಿತ್ ಶೆಟ್ಟಿ ಅವರಿಗೆ 'ಚಾರ್ಲಿ 777' ಸಿನಿಮಾಗೆ ನಿರೀಕ್ಷೆಯಂತೆಯೇ'ಶ್ರೇಷ್ಠ ನಟ' ಪ್ರಶಸ್ತಿ ಲಭ್ಯವಾಗಿದೆ. ಇನ್ನು ದಿವಂಗತ ಪುನೀತ್ ರಾಜ್‌ಕುಮಾರ್ ನಟಿಸಿರುವ 'ಯುವರತ್ನ' ಸಿನಿಮಾಗೆ 'ಶ್ರೇಷ್ಠ ಮನರಂಜನಾ ಚಿತ್ರ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ಶ್ರೇಷ್ಟ ನಟಿ ಪ್ರಶಸ್ತಿಯನ್ನು 'ಮ್ಯೂಟ್' ಚಿತ್ರಕ್ಕಾಗಿ ನಟಿ ಅರ್ಚನಾ ಜೋಯಿಸ್ ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಪಟ್ಟಿಯ ಸಂಪೂರ್ಣ ವಿವರಗಳು

ಕರ್ನಾಟಕ ಸರ್ಕಾರ ಪ್ರತಿವರ್ಷ ಕನ್ನಡ ಸಿನಿಮಾಗಳಿಗಾಗಿ ಕೊಡುವ ರಾಜ್ಯ ಪ್ರಶಸ್ತಿಯಿದು. ಆದರೆ, ಈಗ ಬಂದಿರುವ ಈ ಪಟ್ಟಿ 2021ರ ರಾಜ್ಯ ಪ್ರಶಸ್ತಿಯದು ಎಂಬುದು ಗಮನಸಿಬೇಕಾದ ಸಂಗತಿ. ಈ ಸ್ಟೋರಿಯಲ್ಲಿ ಕೆಳಗೆ ರಾಜ್ಯ ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ ಲಭ್ಯವಿರುವ ಪಟ್ಟಿ ಲಭ್ಯವಿದೆ, ನೋಡಿ ಆನಂದಿಸಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?