ರಜನಿಕಾಂತ್ ರಾಜಕೀಯಕ್ಕೆ ಬರ್ತಾರಾ..? ರಜಿನಿ ಅಣ್ಣ ಹೇಳಿದ ಉತ್ತರ ಇಲ್ಲಿದೆ..!

By Internet DeskFirst Published Sep 28, 2016, 5:34 AM IST
Highlights

ರಾಮೇಶ್ವರಂ(ಸೆ.28): ಸೂಪರ್ ಸ್ಟಾರ್ ರಜನಿಕಾಂತ್ ಯಾವತ್ತು ರಾಜಕೀಯಕ್ಕೆ ಬರಲ್ಲ. ಹೀಗಾಂತ ಹೇಳಿದ್ದು ಸ್ವತಃ ರಜನಿ ಸಹೋದರ ಸತ್ಯನಾರಾಯಣ.

ತಮಿಳುನಾಡಿನ ರಾಮೇಶ್ವರಂನಲ್ಲಿನ ರಾಮನಾಥಸ್ವಾಮಿ ದೇಗುಲಕ್ಕೆ ಪತ್ನಿ ಜೊತೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸತ್ಯನಾರಾಯಣ, ರಜನಿಕಾಂತ್ ಎಂದಿಗೂ ರಾಜಕೀಯವನ್ನು ಪ್ರವೇಶ ಮಾಡುವುದಿಲ್ಲ ಎಂದಿದ್ದಾರೆ. 

ಕಾವೇರಿ ನದಿ ವಿವಾದ ಬೇಗನೆ ಬಗೆಹರಿಯಲಿ ಎಂಬ ಆಕಾಂಕ್ಷೆಯಲ್ಲಿ ರಾಮನಾಥಸ್ವಾಮಿಯ ದರ್ಶನ ಪಡೆದು ಕಳಶಾಭಿಷೇಕ ಪೂಜೆ ನೆರವೇರಿಸಿದ್ದಾಗಿ ಸತ್ಯನಾರಾಯಣ ತಿಳಿಸಿದ್ದಾರೆ. 

ಇದೇ ವೇಳೆ, ರಜನಿಗೆ ರಾಜಕೀಯ ಪ್ರವೇಶಿಸಲು ಆಸಕ್ತಿ ಇಲ್ಲ. ತಮ್ಮ ಮನೆಯ ಯಾರಿಗೂ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಅಂತಾ ರಜನಿಕಾಂತ್ ಸಹೋದರ ಸತ್ಯನಾರಾಯಣ ಹೇಳಿದ್ದಾರೆ. 

click me!