ರಾಧಾ-ರಮಣ'ದ ರಾಧಾ ಮಿಸ್ ಸೀರಿಯಲ್‌ನಿಂದ ಔಟ್!

Published : Apr 20, 2019, 02:28 PM IST
ರಾಧಾ-ರಮಣ'ದ ರಾಧಾ ಮಿಸ್ ಸೀರಿಯಲ್‌ನಿಂದ ಔಟ್!

ಸಾರಾಂಶ

  ಕನ್ನಡದ ಕಿರುತೆರೆಗೆ ಹೊಸ ಭಾಷ್ಯ ಬರೆದ ಧಾರಾವಾಹಿ 'ರಾಧಾ ರಮಣ'. ಕಲಾವಿದರು, ಕಥೆ, ಅಭಿನಯ...ಹೀಗೆ ಎಲ್ಲ ಕಾರಣಕ್ಕೂ ಈ ಧಾರಾವಾಹಿ ಟಿಆರ್‌ಪಿ ಹೆಚ್ಚಿಸಿಕೊಂಡಿತ್ತು. ಆದರೆ, ಈ ಸೀರಿಯಲ್‌ನಲ್ಲಿ ಹೆಚ್ಚು ಆಕರ್ಷಕರಾಗಿದ್ದ ರಾಧ ಮಿಸ್ ಧಾರವಾಹಿಯಿಂದ ಹೊರ ಬಂದಿದ್ದಾರೆ.

 

ಕಿರುತೆರೆಯ ದಿ ಮೊಸ್ಟ್ ಡಿಸೈರಬಲ್ ವುಮೆನ್ ‘ರಾಧಾರಮಣ’ ಫೇಮ್ ರಾಧಾ ಮಿಸ್ ಅಲಿಯಾಸ್ ಶ್ವೇತಾ ಪ್ರಸಾದ್ ಸೀರಿಯಲ್‌ನಿಂದ ಹೊರ ಬಂದಿದ್ದಾರೆ!

ಇನ್ನು ಮುಂದೆ ವಾರದಲ್ಲಿ ಐದು ರಾತ್ರಿ 9 ಗಂಟೆಗೆ ರಾಧಾ ಮಿಸ್‌ನ ಮಿಸ್ ಮಾಡಿಕೊಳ್ಳುವುದಂತೂ ಗ್ಯಾರಂಟಿ. ಏಕೆಂದರೆ ರಾಧಾ ಮಿಸ್ ಪಾತ್ರಧಾರಿ ಶ್ವೇತಾ ಪ್ರಸಾದ್ ಸೀರಿಯಲ್‌ನಿಂದ ಅವರು ಹೊರ ಬಂದಿದ್ದಾರೆ.

ರಾಧ ಮಿಸ್ ಖ್ಯಾತಿಯ ಶ್ವೇತಾ ಮತ್ತೆ ಹನಿಮೂನಿಗೆ ಹೋಗ್ಬೇಕಂತೆ

 

ಇವರು ಶ್ವೇತಾ ಪ್ರಸಾದ್‌‌ಗಿಂತ ರಾಧಾ ಮಿಸ್ ಎಂದೇ ಫೇಮಸ್. ಸೌಮ್ಯ ಸ್ವಭಾವದ, ಮುಗ್ಧ, ಸ್ವಾಭಿಮಾನ ಗೃಹಿಣಿಯ ಪಾತ್ರ ಮಾಡಿಕೊಂಡು ಎಲ್ಲರಿಗೂ ಫೇವರೆಟ್ ಆಗಿದ್ದರು. ಧಾರಾವಾಹಿಯಲ್ಲಿ ಅಭಿನಯಿಸುವುದಾಗಿ 1 ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಒಪ್ಪಂದ ಮುಗಿದು 2 ವರ್ಷಗಳಾಗಿವೆ. ಕಿರುತೆರೆಯಿಂದ ಬ್ರೇಕ್ ಬೇಕೆಂದು ಹೊರ ಬಂದಿದ್ದಾರೆ, ಎಂದು ಹೇಳಲಾಗುತ್ತಿದೆ.

ಇನ್ನು 15 ದನಗಳು ಮಾತ್ರ ಧಾರಾವಾಹಿಯಲ್ಲಿ ರಾಧಾ ಮಿಸ್ ಕಾಣಿಸಿಕೊಳ್ಳಲಿದ್ದಾರೆ. ಆಮೇಲೆ ಹೊಸ ರಾಧಾ ಮಿಸ್ ಎಂಟ್ರಿ ಕೊಡುತ್ತಾರೆ. ಯಾರಾಗಬಹುದು ಈ ಸ್ಥಾನ ತುಂಬ ಬಲ್ಲಂಥ ನಟಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅಶ್ವಿನಿ ಪರ ನಿಂತಿರುವುದು ಯಾಕೆ ಗೊತ್ತಾ?' ಟೀಕಾಕಾರರಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಖಡಕ್ ವಾರ್ನಿಂಗ್!
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು