ಸ್ಯಾಂಡಲ್‌ವುಡ್‌ ಈ ನಟನಿಗೆ ಕೂಡಿಬಂತು ಕಂಕಣ ಭಾಗ್ಯ

Published : Dec 05, 2018, 11:07 AM ISTUpdated : Dec 05, 2018, 11:23 AM IST
ಸ್ಯಾಂಡಲ್‌ವುಡ್‌ ಈ ನಟನಿಗೆ ಕೂಡಿಬಂತು ಕಂಕಣ ಭಾಗ್ಯ

ಸಾರಾಂಶ

ನಿರ್ಮಾಪಕ ಶೈಲೇಂದ್ರ ಬಾಬು ಪುತ್ರನಿಗೆ ಕೂಡಿ ಬಂತು ಕಂಕಣ ಭಾಗ್ಯ | ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಮಹೋತ್ಸವ 

ಬೆಂಗಳೂರು (ಡಿ. 05): ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ನಟ ಸುಮಂತ್ ಶೈಲೇಂದ್ರ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. 

ಬೆಂಗಳೂರಿನ ಕೋರಮಂಗಲ ನಿವಾಸಿ ಶ್ರೀನಿವಾಸ ನಾರಪ್ಪ ಹಾಗೂ ಚಂದ್ರಕಲಾ ದಂಪತಿಯ ಪುತ್ರಿ ಅನಿತಾ ಅವರನ್ನು ಸುಮಂತ್ ಬಾಳಸಂಗಾತಿಯನ್ನಾಗಿ ಸ್ವೀಕರಿಸುತ್ತಿದ್ದಾರೆ. ಡಿಸೆಂಬರ್ 12 ರಂದು ಬುಧವಾರ ಬೆಂಗಳೂರಿನ ಅರಮನೆ ಆವರಣದಲ್ಲಿರುವ ಮೇನ್ ಪ್ಯಾಲೇಸ್ ನಲ್ಲಿ ಈ ಜೋಡಿಯ ವಿವಾಹೋತ್ಸವ ನಡೆಯುತ್ತಿದೆ. ಆರತಕ್ಷತೆ ಕಾರ್ಯಕ್ರಮ ಡಿಸೆಂಬರ್ 11 ರಂದು ಸಂಜೆ 7 ಗಂಟೆಗೆ ಫಿಕ್ಸ್ ಆಗಿದೆ.

ಕನ್ನಡದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾದ ಶೈಲೇಂದ್ರ ಬಾಬು ಗಂಡ ಹೆಂಡತಿ, ಗೌರಮ್ಮ , ದುಬೈ ಬಾಬು ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಪುತ್ರ ಸುಮಂತ್ ಕೂಡ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಯಾದರಲ್ಲದೆ, ಅವರದೇ ಬ್ಯಾನರ್‌ನಲ್ಲಿ ‘ದಿಲ್‌ವಾಲ’, ‘ಭಲೇ ಜೋಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲೂ ಒಂದು ಚಿತ್ರಕ್ಕೆ ನಾಯಕರಾಗಿ ಬಣ್ಣ ಹಚ್ಚಿರುವುದು ವಿಶೇಷ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ಜೊತೆ ಸಿನಿಮಾ ಮಾಡ್ಬೇಕು ಎಂದಿದ್ದ ಶಿವರಾಜ್‌ಕುಮಾರ್; ಆ ವಿಡಿಯೋ ವೈರಲ್ ಆಗಿ ಈಗೇನಾಯ್ತು ನೋಡಿ!
ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟನ ಜೊತೆ ಕಾಣಿಸಿಕೊಂಡ ದುನಿಯಾ ವಿಜಯ್ ಪುತ್ರಿ: ಯಾಕೆ ಗೊತ್ತಾ?