
ಲಾಸ್ ಏಂಜಲಿಸ್: ಸಿನಿಲೋಕದ ಅತ್ಯುನ್ನತ ಪುರಸ್ಕಾರವಾದ ಆಸ್ಕರ್ ಪ್ರಶಸ್ತಿಗಳನ್ನು ಸೋಮವಾರ ಇಲ್ಲಿ ಪ್ರಧಾನ ಮಾಡಲಾಗಿದ್ದು, ಹಾಲಿವುಡ್ನ ಒನ್ ಬ್ಯಾಟಲ್ ಆಫ್ಟರ್ ಅನದರ್ ಅತ್ಯುತ್ತಮ ಚಿತ್ರ, ಇದೇ ಚಿತ್ರದ ಪಾಲ್ ಥಾಮಸ್ ಆಂಡರ್ಸನ್ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.
ಉಳಿದಂತೆ ಅತ್ಯುತ್ತಮ ರೂಪಾಂತರಿತ ಚಿತ್ರಕಥೆ, ಉತ್ತಮ ತಾರಾತಂಡ, ಉತ್ತಮ ಎಡಿಟಿಂಗ್ ಸೇರಿ 6 ಪ್ರಶಸ್ತಿ ಈ ಚಿತ್ರದ ಪಾಲಾಗಿವೆ. ಇದು, ಮಾಜಿ ಉಗ್ರನೊಬ್ಬ ತನ್ನ ಮಗಳನ್ನು ಯೋಧನೊಬ್ಬನಿಂದ ರಕ್ಷಿಸುವ ಕಾದಂಬರಿ ಆಧರಿತ ಆ್ಯಕ್ಷನ್ ಸಿನಿಮಾವಾಗಿದೆ.
ಅತ್ಯುತ್ತಮ ಮೂಲ ಚಿತ್ರಕಥೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಸಿನ್ನರ್ಸ್ ಚಿತ್ರಕ್ಕಾಗಿ ಮೈಕೆಲ್ ಬಿ ಜೋರ್ಡಾನ್ಗೆ ಅತ್ಯುತ್ತಮ ನಟ, ಹ್ಯಾಮ್ನೆಟ್ ಚಿತ್ರಕ್ಕಾಗಿ ಜೆಸ್ಸಿ ಬಕ್ಲಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಆಟಂ ಡ್ಯುರಾಲ್ಡ್ ಅರ್ಕಾಪಾ ಅವರಿಗೆ ಪ್ರಶಸ್ತಿ ದೊರಕಿದ್ದು, ಇದಕ್ಕೆ ಭಾಜನರಾದ ಮೊದಲ ಮಹಿಳೆ ಹಾಗೂ ಕಪ್ಪುವರ್ಣೀಯರು ಎಂಬುದು ಗಮನಾರ್ಹ.
ವಾಡಿಕೆಯಂತೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕಳೆದೊಂದು ವರ್ಷದಲ್ಲಿ ನಿಧನರಾದ ಸಿನೆಮಾ ದಿಗ್ಗಜರನ್ನು ಸ್ಮರಿಸಲಾಗುತ್ತದೆ. ಈ ಪಟ್ಟಿಯಲ್ಲಿ ಬಹುಭಾಷಾ ನಟಿ, ಕನ್ನಡತಿ ಸರೋಜಾದೇವಿ, ಧರ್ಮೇಂದ್ರ, ಮನೋಜ್ ಕುಮಾರ್, ಜಯಶ್ರೀ ಕಬೀರ್, ಕೋಟ, ಶ್ರೀನಿವಾಸ್ ರಾವ್. ಎಸ್.ಕೃಷ್ಣಸ್ವಾಮಿ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತಾದರೂ, ಉದ್ಘೋಷಣೆ ವೇಳೆ ಯಾವ ಭಾರತೀಯರ ಹೆಸರನ್ನೂ ಉಲ್ಲೇಖಿಸಲಿಲ್ಲ. ಇದು, ಭಾರತೀಯರ ಕಡೆಗಣನೆ ಎಂಬ ಆರೋಪಕ್ಕೆ ಕಾರಣವಾಗಿದೆ.
ಬಾಲಿವುಡ್ನಿಂದ ಹಾಲಿವುಡ್ನತ್ತ ಪ್ರಯಾಣ ಬೆಳೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಜೇವಿಯರ್ ಬಾರ್ಡೆಂ ಅವರ ಜತೆ ಸೇರಿ, ಸೆಂಟಿಮೆಂಟ್ ವ್ಯಾಲ್ಯೂಗೆ ಅತ್ಯುತ್ತಮ ಫೀಚರ್ ಫಿಲ್ಮಂ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.