ಮಾಸ್ತಿ​ಗುಡಿ ನಟರ ಸಾವು ಪ್ರಕ​ರಣ : ಕೈಬಿಡಲು ಕೋರಿದ್ದ ಅರ್ಜಿ ವಜಾ

Published : Aug 18, 2019, 10:08 AM ISTUpdated : Aug 18, 2019, 12:54 PM IST
ಮಾಸ್ತಿ​ಗುಡಿ ನಟರ ಸಾವು ಪ್ರಕ​ರಣ : ಕೈಬಿಡಲು ಕೋರಿದ್ದ ಅರ್ಜಿ ವಜಾ

ಸಾರಾಂಶ

ಮಾಸ್ತಿ ಗುಡಿ ಚಿತ್ರದ ಇಬ್ಬರು ನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಕೈ ಬಿಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಮನಗರ ಕೋರ್ಟ್ ವಜಾ ಮಾಡಿದೆ. 

ರಾಮನಗರ [ಆ.18] : ಮಾಸ್ತಿಗುಡಿ ಚಲನಚಿತ್ರ ಖಳನಟರ ದುರಂತ ಸಾವಿನ ಪ್ರಕರಣದಿಂದ ಕೈಬಿ​ಡು​ವಂತೆ ಕೋರಿ ಸಲ್ಲಿ​ಸ​ಲಾ​ಗಿದ್ದ 6 ಅರ್ಜಿ​ಗ​ಳಲ್ಲಿ 5 ಮಂದಿ ಆರೋ​ಪಿ​ಗಳ ಅರ್ಜಿ​ಯನ್ನು ರಾಮ​ನ​ಗ​ರದ 3ನೇ ಜಿಲ್ಲಾ ಸತ್ರ ನ್ಯಾಯಾಲಯ ವಜಾ​ಗೊ​ಳಿ​ಸಿದೆ.

2016ರ ನವೆಂಬರ್‌ 7ರಂದು ತಿಪ್ಪ​ಗೊಂಡ​ನ​ಹಳ್ಳಿ ಜಲಾ​ಶ​ಯ​ದಲ್ಲಿ ಮಾಸ್ತಿ​ಗುಡಿ ಚಲ​ನ​ಚಿ​ತ್ರದ ಕ್ಲೈಮ್ಯಾಕ್ಸ್‌ ವೇಳೆ ಹೆಲಿಕಾಪ್ಟರ್‌ನಿಂದ ಜಲಾಶಯಕ್ಕೆ ಹಾರಿದ ​ನ​ಟ​ರಾದ ಅನಿಲ್‌ ಮತ್ತು ಉದಯ್‌ ಮುಳುಗಿ ಸಾವ​ನ್ನ​ಪ್ಪಿ​ದ್ದರು. ಈ ಘಟನೆ ಸಂಬಂಧ ನಿರ್ಮಾ​ಪಕ ಸುಂದರ್‌ ಪಿ.ಗೌಡ, ನಿರ್ದೇ​ಶಕ ರಾಜ​ಶೇ​ಖರ್‌, ಸಿದ್ಧಾರ್ಥ್ ಅಲಿ​ಯಾಸ್‌ ಸಿದ್ದು, ಸಾಹಸ ನಿರ್ದೇಶಕ ರವಿ​ವರ್ಮಾ, ಎ.ಪಿ.​ಭ​ರತ್‌ ರಾವ್‌ ಹಾಗೂ ಪೈಲೆಟ್‌ ಪ್ರಕಾಶ್‌ ಬಿರಾ​ದರ್‌ ವಿರುದ್ಧ ಪ್ರಕ​ರಣ ದಾಖ​ಲಾ​ಗಿ​ತ್ತು.

ಈ ಪ್ರಕ​ರ​ಣ​ದಿಂದ ತಮ್ಮನ್ನು ಕೈಬಿ​ಡು​ವಂತೆ ಕೋರಿ ಆರು ಮಂದಿ ಆರೋ​ಪಿ​ಗಳು ಸಲ್ಲಿ​ಸಿದ ಅರ್ಜಿ ವಿಚಾ​ರಣೆ 3ನೇ ಜಿಲ್ಲಾ ಸತ್ರ ನ್ಯಾಯಾ​ಲ​ಯ​ ಕೈಗೆ​ತ್ತಿ​ಕೊಂಡಿತು. 6ನೇ ಆರೋ​ಪಿ​ಯಾ​ಗಿದ್ದ ಪೈಲೆಟ್‌ ಪ್ರಕಾಶ್‌ ಬಿರಾ​ದರ್‌ ಅವ​ರ ಅರ್ಜಿ​ಯನ್ನು ಮಾನ್ಯ ಮಾಡಿದ ನ್ಯಾಯಾ​ಧೀಶ ಸಿದ್ದ​ಲಿಂಗ​ಪ್ರಭು ಅವರು ಉಳಿದ ಐದು ಮಂದಿ ಆರೋ​ಪಿ​ಗ​ಳ ಅರ್ಜಿ​ಯನ್ನು ವಜಾ​ಗೊ​ಳಿಸಿ ಆದೇಶ ಹೊರ​ಡಿ​ಸಿ​ದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!