
ಶಿವರಾಜ್ಕುಮಾರ್ ನಿರ್ಮಾಣದ ಧಾರಾವಾಹಿ ‘ಮಾನಸ ಸರೋವರ’ ಇದೇ ಫೆ.26ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶ್ರೀನಾಥ್, ಪದ್ಮವಾಸಂತಿ, ರಾಮಕೃಷ್ಣ ಹಾಗೂ ಪ್ರಜ್ವಲ್, ಶಿಲ್ಪಾ, ಶ್ರುತಿ ನಟಿಸಿದ್ದಾರೆ.
ಜಯಶೀಲ್ ವೈದ್ಯ ನಿರ್ದೇಶನ, ರವಿ ಕಿಶೋರ್ ಛಾಯಾಗ್ರಾಹಣ ಇದೆ. ಧಾರಾವಾಹಿಯ ಹತ್ತು ಕಂತುಗಳ ಕತೆಯನ್ನು ಸ್ವತಃ ಶಿವರಾಜ್ಕುಮಾರ್ ಹೊಸೆದಿದ್ದಾರೆ. ಜೊತೆಗೆ ಧಾರಾವಾಹಿ ತಂಡ ಕ್ವಿಜ್ ಸ್ಪರ್ಧೆ ನಡೆಸುತ್ತಿದೆ.
ಫೆ.19ರಿಂದ ಮಾಚ್ರ್ 2ರವರೆಗೆ ಪ್ರತಿದಿನ ಮಾನಸ ಸರೋವರ ಕುರಿತಾದ ಪ್ರಶ್ನೆಗಳನ್ನು ಕೇಳುತ್ತಾರೆ, ಸರಿಯಾದ ಉತ್ತರ ಕೊಟ್ಟು ಜಯಶಾಲಿಗಳಾಗುವವರು ಶಿವಣ್ಣ ಮತ್ತು ಧಾರಾವಾಹಿ ತಂಡದ ಜತೆಗಿನ ಔತಣಕೂಟದಲ್ಲಿ ಭಾಗವಹಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.