ನಿರ್ದೇಶಕ ಎಸ್. ನಾರಾಯಣ್'ಗೆ 90 ಲಕ್ಷ ರೂ ವಂಚನೆ: ಪುನಿತ್ ಹೆಸರೇಳಿ ಮೋಸ

Published : May 15, 2017, 01:11 PM ISTUpdated : Apr 11, 2018, 12:58 PM IST
ನಿರ್ದೇಶಕ  ಎಸ್. ನಾರಾಯಣ್'ಗೆ 90 ಲಕ್ಷ ರೂ ವಂಚನೆ: ಪುನಿತ್ ಹೆಸರೇಳಿ ಮೋಸ

ಸಾರಾಂಶ

ಸತ್ಯನಾರಾಯಣ ಹಾಗೂ ಹರೀಶ್ ಕುಲಕುರ್ಣಿ ಎಂಬುವವರ ಪರಿಚಯ ಮಾಡಿಸಿದ್ದಾನೆ.ಸಾಲಕ್ಕೆ ಸರ್ವೀಸ್ ಚಾರ್ಜ್ ಕೊಡಬೇಕೆಂದು 90 ಲಕ್ಷ ಪಡೆದು ಮೋಸ ಮಾಡಿದ್ದರು.

ಬೆಂಗಳೂರು(ಮೇ.15): ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಎಸ್.ನಾರಾಯಣ್ ಅವರಿಗೆ ವ್ಯಕ್ತಿಯೊಬ್ಬ 90 ಲಕ್ಷ ರೂ. ವಂಚಿಸಿದ್ದಾನೆ.

ವ್ಯವಹಾರಕ್ಕಾಗಿ 200 ಕೋಟಿ ರೂ.ಸಾಲ ಕೊಡಿಸುವುದಾಗಿ ಸತ್ಯನಾರಾಯಣ್ ಎಂಬಾತ ಮೋಸ ಮಾಡಿದ್ದಾನೆ.  ನಟ ಪುನೀತ್ ರಾಜ್'ಕುಮಾರ್ ಅವರ ಹೇಸರೇಳಿಕೊಂಡು ಬಂದಿದ್ದ ರಮೇಶ್ ಎಂಬಾತ ಸತ್ಯನಾರಾಯಣ ಹಾಗೂ ಹರೀಶ್ ಕುಲಕುರ್ಣಿ ಎಂಬುವವರ ಪರಿಚಯ ಮಾಡಿಸಿದ್ದಾನೆ.ಸಾಲಕ್ಕೆ ಸರ್ವೀಸ್ ಚಾರ್ಜ್ ಕೊಡಬೇಕೆಂದು 90 ಲಕ್ಷ ಪಡೆದು ಮೋಸ ಮಾಡಿದ್ದರು.

ಆರೋಪಿಗಳ ವಿರುದ್ಧ ಕಗ್ಗಲಿಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಸತ್ಯನಾರಾಯಣ್ ಅವರನ್ನು ಬಂಧಿಸಿದ್ದರು. ಪುನಃ ಸತ್ಯನಾರಾಯಣ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು 50 ಲಕ್ಷ ರೂ. ಚೆಕ್ ನೀಡಿದ್ದು, ಅದು ಬೌನ್ಸ್ ಆಗಿದೆ. ಈ ಹಿನ್ನಲೆಯಲ್ಲಿ ನಾರಾಯಣ್ ಅವರು 22ನೇ ಎಸಿಎಂಎಂ ಕೋರ್ಟ್'ಗೆ ಖಾಸಗಿ ದೂರು ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಜೂ.5ಕ್ಕೆ ಮುಂದೂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!