
ಬೆಂಗಳೂರು(ಅ.26): ಕನ್ನಡ ಸಿನಿಮಾ ರಂಗದ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಹಾಗೂ ನಟಿ ಶುಭಾ ಪೂಂಜಾ ಮದುವೆಯಾಗಿರುವ ಬಗ್ಗೆ ಫೋಟೊವೊಂದು ವೈರಲ್'ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಾಗೇಂದ್ರ ಪ್ರಸಾದ್ ಹಾಗೂ ಶುಭಾ ಪೂಂಜಾ ಇಬ್ಬರೂ ಮದುವೆಯ ವಸ್ತ್ರದಲ್ಲಿ ದೇವಾಸ್ಥಾನದಿಂದ ಬರುತ್ತಿರುವ ಫೋಟೊವೊಂದು ಮದುವೆ ಸುದ್ದಿಗೆ ಇಂಬು ನೀಡಿದೆ.
ಈ ಬಗ್ಗೆ ಸ್ವತಃ ನಾಗೇಂದ್ರ ಪ್ರಸಾದ್ ಅವರು ಸ್ವತಃ ಸ್ಪಷ್ಟನೆ ನೀಡಿದ್ದು, ' ಇದು ನನ್ನ ನಿರ್ದೇಶನದ ಸಿನಿಮಾದ ಒಂದು ದೃಶ್ಯ. ಈ ಚಿತ್ರಕ್ಕೆ ಇನ್ನು ಹೆಸರಿಡಲಾಗಿಲ್ಲ. ಸಿನಿಮಾಕ್ಕೆ ನಾನೇ ನಾಯಕ ಶುಭಾ ಪೂಂಜಾ ನಾಯಕಿ. ಚಿತ್ರದ ಒಂದು ದೃಶ್ಯ ವೈರಲ್'ಆಗಿ ಇಷ್ಟೋಂದು ಅವಾಂತರ ಸೃಷ್ಟಿಸಿದೆ. ನಮ್ಮಿಬ್ಬರ ಮದುವೆ ಎಂಬುದು ಬರೀ ಸುಳ್ಳು. ಕೆಲವರು ಪ್ರಚಾರಕ್ಕಾಗಿ ಏನಲ್ಲಾ ಕಥೆಕಟ್ಟುತ್ತಾರೆ ನೋಡಿ' ಎಂದು ನಾಗೇಂದ್ರ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.