
ಬೆಂಗಳೂರು: ಕಿಚ್ಚ ಸುದೀಪ್ ಹೊಸ ಅವತಾರದಲ್ಲಿ ತೆರೆ ಮೇಲೆ ಬರುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲಾ ರೀತಿಯ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡಿರುವ ಕಿಚ್ಚ ಇದೀಗ ಕೃಷ್ಣಾವಾತಾರ ತಾಳಿದ್ದಾರೆ. ಕೈಯಲ್ಲಿ ಕೊಳಲು, ಮಂದಹಾಸ, ತಲೆ ಮೇಲೆ ಪಗಡಿ ಧರಿಸಿ ಸಾಕ್ಷಾತ್ ಕೃಷ್ಣನಾಗಿದ್ದಾರೆ. ಹಿಂದಿಯ ಓ ಮೈ ಗಾಡ್ ಚಿತ್ರವನ್ನು ಕನ್ನಡಕ್ಕೆ ನಿರ್ದೇಶಕ ನಂದ ಕಿಶೋರ್ ರಿಮೇಕ್ ಮಾಡುತ್ತಿದ್ದಾರೆ. ಚಿತ್ರದ ಹೆಸರು ಮುಕುಂದ ಮುರಾರೆ. ಈ ಚಿತ್ರದಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಚಾರವೆಂದರೆ ರಿಯಲ್ ಸ್ಟಾರ್ ಉಪ್ಪಿ ನಾಸ್ತಿಕನಾಗಿ ನಟಿಸುತ್ತಿದ್ದಾರೆ.
ಗೋಪಾಲ ಗೋಪಾಲ ಚಿತ್ರದಲ್ಲಿ ಪವರ್ ಸ್ಟಾರ್ ಕಲ್ಯಾಣ್ ಕೃಷ್ಣನಾಗಿ ಅಭಿನಯಿಸಿ ಪ್ರೇಕ್ಷಕರಿಗೆ ಹೊಸ ಅನುಭವ ಕಟ್ಟಿಕೊಟ್ಟರು. ಓ ಮೈ ಗಾಡ್ ಚಿತ್ರದಲ್ಲಿ ಕೃಷ್ಣನಾಗಿ ಅಕ್ಕಿ ಮನಗೆದ್ದರು. ಈಗ ಮುಕುಂದ ಮುರಾರೆ ಚಿತ್ರದಲ್ಲಿ ಕೃಷ್ಣನಾಗಿ ಸುದೀಪ್ ಹೇಗೆ ವಿರಾಟ್ ರೂಪ ತೋರಿಸ್ತಾರೆ ಅಂತ ಕಾದು ನೋಡಬೇಕು. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.