ಸುದೀಪ್‌ ಅಭಿ​ಮಾ​ನಿ​ಗ​ಳಿಂದ ಕೊಡಗು ಸಂತ್ರ​ಸ್ತ​ರಿಗೆ ನೆರ​ವು

Published : Sep 03, 2018, 03:17 PM ISTUpdated : Sep 09, 2018, 09:57 PM IST
ಸುದೀಪ್‌ ಅಭಿ​ಮಾ​ನಿ​ಗ​ಳಿಂದ ಕೊಡಗು ಸಂತ್ರ​ಸ್ತ​ರಿಗೆ ನೆರ​ವು

ಸಾರಾಂಶ

ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ 44 ನೇ ಹುಟ್ಟುಹಬ್ಬ ಆಚರಿಸಿಕೊಂಡರು | ಸುದೀಪ್ ಸರಳತೆಗೆ ಮನಸೋತ ಅಭಿಮಾನಿಗಳು  | ಕೊಡಗು ಸಂತ್ರಸ್ತರಿಗೆ ನೆರವು ನೀಡಿದ ಅಭಿಮಾನಿ ರಾಕೇಶ್ ಹಾಗೂ ಅವರ ಸ್ನೇಹಿತರು 

ದಾವ​ಣ​ಗೆರೆ (ಸೆ. 03): ನಟ ಸುದೀಪ್‌ ಅವ​ರ ಜನ್ಮ​ದಿ​ನದ ಹಿನ್ನೆ​ಲೆ​ಯಲ್ಲಿ ದಾವ​ಣಗೆರೆಯ ಉದ್ಯಮಿ ಆರ್‌.​ಎ​ಸ್‌.​ಶೇ​ಖ​ರಪ್ಪ ಪುತ್ರ ಆರ್‌.​ಎ​ಸ್‌.​ರಾ​ಕೇಶ್‌ ಮತ್ತು ಸ್ನೇಹಿ​ತರು ಕೊಡಗು ನೆರೆ ಸಂತ್ರ​ಸ್ತ​ರಿಗೆ  50 ಸಾವಿರದ ಚೆಕ್‌ ನೀಡಿ​ದರು.

ತಮ್ಮ ನೆಚ್ಚಿನ ನಾಯಕ ಸುದೀಪ್‌ ಜನ್ಮ​ದಿ​ನಕ್ಕೆ ಬೆಳ್ಳಿ ಖಡ್ಗ ನೀಡಲು ಆರ್‌.​ಎ​ಸ್‌.​ರಾ​ಕೇಶ್‌ ನಿರ್ಧ​ರಿ​ಸಿ​ದ್ದರು. ಆದರೆ, ಕೊಡಗು ಪ್ರವಾ​ಹ​ದ ಹಿನ್ನೆ​ಲೆ​ಯಲ್ಲಿ ಸುದೀಪ್‌ ಆಸೆ​ಯಂತೆ ಕೊಡಗು ಸಂತ್ರಸ್ತ​ರ ಪರಿ​ಹಾ​ರ​ಕ್ಕಾಗಿ 50 ಸಾವಿರದ ಚೆಕ್‌ ಅನ್ನು ಸುದೀಪ್‌ ಅವರ ನಿವಾಸ​ದಲ್ಲಿ ನೀಡುವ ಮೂಲಕ ಜನ್ಮ​ದಿ​ನಕ್ಕೆ ಶುಭ ಹಾರೈ​ಸಿ​ದರು.

ಕಿಚ್ಚ ಸುದೀ​ಪ್‌ ಅವ​ರ ತಂದೆ ಸಂಜೀವ್‌, ಬೆಂಗ​ಳೂ​ರಿನ ಹಲ​ಸೂರು ಗೇಟ್‌ನ ಎಸಿಪಿ ಪಂಪಾ​ಪತಿ, ಶಾಬ​ನೂರು ಪ್ರವೀಣ್‌, ಲಿಂಗ​ರಾಜ ಫಣಿ​ಯಾ​ಪುರ, ಜಗ​ಳೂರು ತಾಲೂಕು ಗೌಡ​ಗೊಂಡ​ನ​ಹಳ್ಳಿ ನಾಗ​ರಾಜ, ರೇಣು​ಕಾ​ರಾಜ, ದೇವರ ಬೆಳ​ಕೆರೆ ನಿಂಗ​ರಾಜ, ದೇವ​ರಾಜ ಮತ್ತಿ​ತ​ರ​ರಿ​ದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!
BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!