ಫೇಸ್'ಬುಕ್'ನಲ್ಲಿ ಕನ್ನಡ ನಾಯಕ ನಟರ ಅವಹೇಳನ :ತಮಿಳಿಗನಿಗೆ ಸಖತ್ತಾಗಿ ಬಿತ್ತು ಗೂಸ

Published : Sep 10, 2016, 12:56 PM ISTUpdated : Apr 11, 2018, 12:49 PM IST
ಫೇಸ್'ಬುಕ್'ನಲ್ಲಿ ಕನ್ನಡ ನಾಯಕ ನಟರ ಅವಹೇಳನ :ತಮಿಳಿಗನಿಗೆ ಸಖತ್ತಾಗಿ ಬಿತ್ತು ಗೂಸ

ಸಾರಾಂಶ

ಗೂಸ ತಿಂದವನು ಪಿಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀರಾ೦ಪುರ ನಿವಾಸಿ ಸ೦ತೋಷ್. ಈತ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳದಿದ್ದರೂ ತಮಿಳರ ಪರವಾಗಿ ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡುತ್ತಿದ್ದ.

ಬೆಂಗಳೂರು(ಸೆ.10): ಕನ್ನಡ ಸಿನಿಮಾ ನಾಯಕ ನಟರನ್ನು ನಿ೦ದಿಸಿ ಹಿಯಾಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಯುವಕನಿಗೆ ಕನ್ನಡಿಗರು ಸಖತ್ ಗೂಸಾ ಕೊಟ್ಟಿದ್ದಾರೆ.

ಗೂಸ ತಿಂದವನು ಪಿಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀರಾ೦ಪುರ ನಿವಾಸಿ ಸ೦ತೋಷ್. ಈತ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳದಿದ್ದರೂ ತಮಿಳರ ಪರವಾಗಿ ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡುತ್ತಿದ್ದ. ಅಲ್ಲದೆ ಕನ್ನಡದ ಸ್ಟಾರ್ ನಟರಾದ ಶಿವರಾಜ್ ಕುಮಾರ್, ದರ್ಶನ್, ದುನಿಯಾ ವಿಜಿ ಅವರ ಪೋಸ್ಟ್'ಗಳನ್ನು ಅವಮಾನವಾಗುವಂತೆ ಫೋಟೊಶಾಪ್'ನಲ್ಲಿ ಎಡಿಟ್ ಮಾಡಿ ಫೇಸ್'ಬುಕ್'ನಲ್ಲಿ ಹಾಕುತ್ತಿದ್ದ. ಇ೦ದು ಈ ಪೋಸ್ಟ್'ಗಳನ್ನು ಗಿರಿನಗರದ ಯುವಕರು ಕಂಡು ಈತನಿಗಾಗಿ ಹುಡುಕಾಡಿ ಕರೆ'ತಂದು ಯಾಕೆ ಈ ರೀತಿ ಮಾಡತ್ತಿದ್ದಿಯಾ ಎ೦ದು ಕೇಳಿದ್ದಾರೆ. ಈ ರೀತಿ ಕೇಳಿದಾಗಲು ಆತ ನಾನು ತಮಿಳಿನವನು ನನ್ನಿಷ್ಟ ಎ೦ದು ಅಹ೦ಕಾರದಿ೦ದ ಮಾತಾನಾಡಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಸ್ಥಳದಲ್ಲಿಯೇ ಗೂಸ ಕೊಟ್ಟಿದ್ದಾರೆ ಜೊತೆಗೆ ಕ್ಷಮೆಯಾಚಿಸುವಂತೆ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು
ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!