Published : Apr 24, 2025, 07:18 AM ISTUpdated : Apr 24, 2025, 09:51 PM IST

Kannada Entertainment Live: ಡಿವೋರ್ಸ್ ಕುರಿತ ನೆಟ್ಟಿಗರ ಟೀಕೆ ಬಗ್ಗೆ ಕೊನೆಗೂ ಮೌನ ಮುರಿದ ಎ.ಆರ್. ರೆಹಮಾನ್

ಸಾರಾಂಶ

ಬೆಂಗಳೂರು: ಇಂದು ಡಾ. ರಾಜ್‌ಕುಮಾರ್ (ಏಪ್ರಿಲ್ 24) ಅವರ 96ನೇ ಹುಟ್ಟುಹಬ್ಬ. ಪ್ರತೀ ವರ್ಷದಂತೆ ಈ ವರ್ಷವೂ ಅಭಿಮಾನಿಗಳು ಮತ್ತು ಕುಟುಂಬಸ್ಥರು ಬೆಂಗಳೂರಿನ ಕಂಠೀರವ  ಸ್ಟುಡಿಯೋದಲ್ಲಿರುವ ಡಾ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ 'ಗಂಧದಗುಡಿ' ಸಿನಿಮಾ ಇಂದು ಮರು ಬಿಡುಗಡೆ ಆಗುತ್ತಿದೆ. ಶಿವರಾಜಕುಮಾರ್‌ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಸಾಗರ್‌, ಕೃಷ್ಣಕುಮಾರ್‌ ಹಾಗೂ ಸೂರಜ್‌ ಶರ್ಮ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ದೇಶಕ ಪಿ. ವಾಸು ಸೋದರಳಿಯ ಬಾಲಾಜಿ ಮಾಧವನ್‌ ನಿರ್ದೇಶನ ಮಾಡಲಿದ್ದಾರೆ. ‘ಮಂಕುತಿಮ್ಮನ ಕಗ್ಗ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಡಿವಿಜಿ ಅವರ ಬಾಲ್ಯದ ಕಥನ ಇರುವ ಈ ಚಿತ್ರವನ್ನು ರಾಜ ರವಿಶಂಕರ್‌ ನಿರ್ದೇಶಿಸಿದ್ದು, ಎನ್‌ ಎ ಶಿವಕುಮಾರ್‌ ನಿರ್ಮಿಸಿದ್ದಾರೆ. ರಾಮಕೃಷ್ಣ, ಸೋಮಿ, ಮಾ. ರಣವೀರ್‌, ಭವ್ಯಶ್ರೀ ರೈ, ರವಿನಾರಾಯಣ್, ಲಕ್ಷ್ಮೀ ನಾಡಗೌಡ, ಸಾಯಿಪ್ರಕಾಶ್ ತಾರಾಬಳಗದಲ್ಲಿದ್ದಾರೆ.

Kannada Entertainment Live: ಡಿವೋರ್ಸ್ ಕುರಿತ ನೆಟ್ಟಿಗರ ಟೀಕೆ ಬಗ್ಗೆ ಕೊನೆಗೂ ಮೌನ ಮುರಿದ ಎ.ಆರ್. ರೆಹಮಾನ್

09:51 PM (IST) Apr 24

ಡಿವೋರ್ಸ್ ಕುರಿತ ನೆಟ್ಟಿಗರ ಟೀಕೆ ಬಗ್ಗೆ ಕೊನೆಗೂ ಮೌನ ಮುರಿದ ಎ.ಆರ್. ರೆಹಮಾನ್

ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಅವರು ತಮ್ಮ ಪತ್ನಿ ಸೈರಾ ಬಾನು ಅವರೊಂದಿಗೆ ನಡೆದ ವಿಚ್ಛೇದನದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಎದುರಿಸಿದ ಟೀಕೆಗಳ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಅವರು ಸಾರ್ವಜನಿಕ ಜೀವನದಲ್ಲಿ ಟೀಕೆ ಅನಿವಾರ್ಯ ಎಂದು ಹೇಳಿದರು ಮತ್ತು ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ವಿನಂತಿಸಿದರು.

ಪೂರ್ತಿ ಓದಿ

09:25 PM (IST) Apr 24

ಮಹೇಶ್ ಬಾಬು​ಗಾಗಿ RTO ಕಚೇರಿಗೆ ಹೋದ ರಾಜಮೌಳಿ; 3,000 ಕಲಾವಿದರೊಂದಿಗೆ ಫೈಟಿಂಗ್ ಸೀನ್!

ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ರಾಜಮೌಳಿ ಅವರ ಪ್ಯಾನ್ ವರ್ಲ್ಡ್ ಸಿನಿಮಾ ಚಿತ್ರೀಕರಣವು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ರಾಜಮೌಳಿ 3000 ಕಲಾವಿದರೊಂದಿಗೆ ಬೃಹತ್ ಆಕ್ಷನ್ ದೃಶ್ಯವನ್ನು ಯೋಜಿಸಿದ್ದಾರೆ. ಮಹೇಶ್ ಬಾಬು ಸಿನಿಮಾಗಾಗಿ ರಾಜಮೌಳಿ ಖೈರತಾಬಾದ್ RTO ಕಚೇರಿಗೆ ಭೇಟಿ ನೀಡಿದ್ದಾರೆ.

ಪೂರ್ತಿ ಓದಿ

07:45 PM (IST) Apr 24

ತಮಿಳು ಸ್ಟಾರ್ ಸೂರ್ಯ ಹೊಸ ಚಿತ್ರ ಆರಂಭ; ಖುಷಿಯಲ್ಲಿ ಕುಣಿದಾಡುತ್ತಿರೋ ಫ್ಯಾನ್ಸ್..!

ನನ್ನ 100ನೇ ಚಿತ್ರವನ್ನು ಅತ್ಯಂತ ಪ್ರೀತಿಯ ಸೂರ್ಯ ಅವರೊಂದಿಗೆ ಮಾಡುತ್ತಿರುವುದು ಅಪಾರ ಸಂತೋಷ ತಂದಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ..

ಪೂರ್ತಿ ಓದಿ

07:08 PM (IST) Apr 24

ನಾನು ಸೀತೆ, ಯಶ್ ರಾವಣ ಆದ್ರೆ ಪ್ರೇಕ್ಷಕರು ಒಪ್ಪುತ್ತಿರಲಿಲ್ಲ: KGF ನಟಿ ನಟಿ ಶ್ರೀನಿಧಿ ಶೆಟ್ಟಿ!

'ಕೆಜಿಎಫ್ ಸರಣಿಯಲ್ಲಿ ನಾವು (ಯಶ್ ಮತ್ತು ಶ್ರೀನಿಧಿ) ರಾಕಿ ಮತ್ತು ರೀನಾ ಆಗಿ ಕಾಣಿಸಿಕೊಂಡಿದ್ದೇವೆ. ನಮ್ಮ ಜೋಡಿಯನ್ನು ಪ್ರೇಕ್ಷಕರು ಆ ಪಾತ್ರಗಳಲ್ಲಿ ಒಪ್ಪಿಕೊಂಡಿದ್ದಾರೆ, ಪ್ರೀತಿಸಿದ್ದಾರೆ. ಅದೇ ನಾವು ರಾಮಾಯಣದಲ್ಲಿ ರಾವಣ ಮತ್ತು ಸೀತೆಯಾಗಿ ಕಾಣಿಸಿಕೊಂಡರೆ..

ಪೂರ್ತಿ ಓದಿ

04:46 PM (IST) Apr 24

ನಾನು ಪಾಕಿಸ್ತಾನಿ ಅಲ್ಲ, ಸುಳ್ಳು ಹರಡಬೇಡಿ; ಪ್ರಭಾಸ್ ಚಿತ್ರದ ನಾಯಕಿ ಇಮಾನ್ವಿ ಇಸ್ಲಾಮಿ ಪೋಸ್ಟ್!

'ನಾನು ಕಲೆ, ನಟನೆ ಮತ್ತು ನೃತ್ಯದ ಅಭ್ಯಾಸ ಮಾಡಿದ್ದೇನೆ. ನನ್ನ ಜೀವನದ ಮೇಲೆ ಭಾರತೀಯ ಸಿನಿಮಾದ ಪ್ರಭಾವ ಸಾಕಷ್ಟಿದೆ. ಈಗ ಅದೇ ಚಿತ್ರರಂಗದಿಂದ ನನಗೆ ಅವಕಾಶ ಸಿಕ್ಕಿರುವುದು ನನಗೆ ಖುಷಿ ಇದೆ. ನನ್ನ ಬಗ್ಗೆ ಹರಡಿರುವ ಸುಳ್ಳು ..

ಪೂರ್ತಿ ಓದಿ

03:10 PM (IST) Apr 24

ಕಾಶ್ಮೀರದ ಸೌಂದರ್ಯ ವರ್ಣಿಸಲು ಒಂದು ಜನ್ಮ ಸಾಲದು: ರಾಮ್ ಚರಣ್ ಹಳೆಯ ಮಾತು ಮತ್ತೆ ವೈರಲ್!

ಕಾಶ್ಮೀರದ ಸೌಂದರ್ಯಕ್ಕೆ ಮನಸೋತಿದ್ದ ರಾಮ್ ಚರಣ್, 'ಜನರು ಸ್ವಿಟ್ಜರ್ಲೆಂಡ್ ಬಗ್ಗೆ ಮಾತನಾಡುತ್ತಾರೆ, ಅದೊಂದು ಅದ್ಭುತ ಸ್ಥಳ ಹೌದು. ಆದರೆ ಕಾಶ್ಮೀರ ಅದಕ್ಕಿಂತಲೂ ವಿಶೇಷವಾದುದು. ಇಲ್ಲಿನ ಸೌಂದರ್ಯ..

ಪೂರ್ತಿ ಓದಿ

01:39 PM (IST) Apr 24

ಪಹಲ್ಗಾಮ್ ಉಗ್ರರ ದಾಳಿ: ಪಾಕಿಸ್ತಾನಿ ನಟರಿಂದ ತೀವ್ರ ಖಂಡನೆ; 'ದುಃಖಕ್ಕೆ ಒಂದೇ ಭಾಷೆ' ಅಂದ್ರು!?

ಉಗ್ರರು ನರಮೇಧ ಮಾಡುವ ಮೊದಲು ಕೇಳಿದ್ದು ಧರ್ಮವನ್ನು ಮಾತ್ರ ಎಂಬುದು ಇಡೀ ಜಗತ್ತಿಗೇ ಗೊತ್ತು. ಆದರೂ ಕೂಡ 'ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ, ರಾಷ್ಟ್ರೀಯತೆಯಿಲ್ಲ' ಎಂಬ ಹೇಳಿಕೆ ಈಗ ನಗೆಪಾಟಲಿಗೆ.. 

ಪೂರ್ತಿ ಓದಿ

01:22 PM (IST) Apr 24

ಸೌಟು ಹಿಡಿದೋಳು ಅಂದ್ರೆ ಸುಮ್ನೇನಾ? ತಾಂಡವ್​ ಎದೆ ಮೇಲೆಯೇ ಕಾಲಿಟ್ಟಳಲ್ಲ ಭಾಗ್ಯ!

ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು, ಅಡುಗೆ ಮನೆಯಲ್ಲಿ ಸೌಟು ಆಡಿಸುವವಳು ಅದೇ ಸೌಟಿನಿಂದ ಸಂಸಾರವನ್ನೂ ನಿಭಾಯಿಸಬಲ್ಲಳು ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ ಭಾಗ್ಯ
 

ಪೂರ್ತಿ ಓದಿ

12:57 PM (IST) Apr 24

Dr Rajkumar Birthday: ಬಯಸಿದ್ದರೂ ಮಾಡಲಾಗದ ಸಿನಿಮಾಗಳು; ಅಭಿಮಾನಿಗಳಿಗೆ ಇಂದಿಗೂ ಕೊರಗು!

ಡಾ ರಾಜ್‌ಕುಮಾರ್ ಅವರು ತುಂಬಾ ಆಸೆಪಟ್ಟು ಮಾಡಬೇಕೆಂದಿದ್ದ 3-4 ಚಿತ್ರಗಳನ್ನು ಕೊನೆಗೂ ಅವರು ಮಾಡಲು ಸಾಧ್ಯವೇ ಆಗಲಿಲ್ಲ. ಅದೊಂದು ಘೋರ ದುರಂತವೇ ಸರಿ. ಡಾ ರಾಜ್‌ಕುಮಾರ್ ಅವರು ಗಂಡಗಲಿ...

ಪೂರ್ತಿ ಓದಿ

12:24 PM (IST) Apr 24

ಚಡ್ಡಿ ಹೋಗಿ ಲಂಗ ಬಂತು, ನಿವೇದಿತಾ ಲುಕ್ ಬದಲಿಸಿದ ಕಿಶನ್

ನಿವೇದಿತಾ ಗೌಡ ಲುಕ್ ಬದಲಾಗಿದೆ. ಹೊಸ ರೀಲ್ಸ್ ಗೆ ಲೈಕ್ಸ್ ಬಂದ್ರೂ ಕಮೆಂಟ್ ನಲ್ಲಿ ಅಪರೂಪಕ್ಕೆ ನಿವೇದಿತಾ ಹೆಸರು ಕಾಣಿಸಿದೆ. ಹಾಗಿದ್ರೆ ಬಳಕೆದಾರರು ಬಯಸೋದು ಏನು? 
 

ಪೂರ್ತಿ ಓದಿ

12:08 PM (IST) Apr 24

ಫೈರ್‌ಫ್ಲೈ ಯಂಗ್‌ ಟೀಮ್‌ನ ಸುಂದರ ದೃಶ್ಯಕಾವ್ಯ: ನಿವೇದಿತಾ ಶಿವರಾಜ್‌ ಕುಮಾರ್‌ ಸಂದರ್ಶನ

ವಂಶಿ ನನಗೆ ಮೊದಲಿಂದಲೂ ಪರಿಚಯ. ಅವರ ಜೊತೆಗೆ ವೆಬ್‌ ಸೀರೀಸ್‌ ಮಾಡಿದ್ದೆ. ಮುಂದೆಯೂ ವೆಬ್‌ ಸೀರೀಸೇ ಮಾಡಬೇಕು ಅಂದುಕೊಂಡಿದ್ದವಳನ್ನು ಸಿನಿಮಾ ನಿರ್ಮಾಣಕ್ಕೆ ಬರುವಂತೆ ಮಾಡಿದ್ದು ಫೈರ್‌ ಫ್ಲೈ ಸ್ಕ್ರಿಪ್ಟ್‌. ವಂಶಿ ಒಮ್ಮೆ ನನ್ನ ಬಳಿ, ಸಿನಿಮಾ ಮಾಡೋದು ಬಿಡೋದು ಆಮೇಲಿನ ಪ್ರಶ್ನೆ. 
 

ಪೂರ್ತಿ ಓದಿ

08:16 AM (IST) Apr 24

ನರಸಿಂಹನ ಮುಂದೆ ಬಯಲಾಗುತ್ತಾ ಜಾಹ್ನವಿ ಅಸಲಿ ಮುಖ; ಪೇಪರ್‌ನಲ್ಲಿಯೇ ಬಂತು ಸುದ್ದಿ!

Lakshmi Nivasa Serial: ಜಾಹ್ನವಿ ನರಸಿಂಹನ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಜಾನು ತಿಥಿ ಕಾರ್ಯಕ್ಕೆ ಶ್ರೀನಿವಾಸ್ ಮತ್ತು ಲಕ್ಷ್ಮೀ ಮುಂದಾಗಿದ್ದಾರೆ. ವಿಶ್ವನಿಗೆ ಜಾನು ಸಾವಿನ ಸುದ್ದಿ ತಿಳಿದಿದೆ. ನರಸಿಂಹನಿಗೆ ಸತ್ಯ ಗೊತ್ತಾಗುತ್ತಾ?

ಪೂರ್ತಿ ಓದಿ

More Trending News