ಕಂಗನಾಗೆ ಚಪ್ಪಲಿ ಎಸೆದ್ರಾ ಮಹೇಶ್ ಭಟ್?

Published : Apr 18, 2019, 11:16 AM IST
ಕಂಗನಾಗೆ ಚಪ್ಪಲಿ ಎಸೆದ್ರಾ ಮಹೇಶ್ ಭಟ್?

ಸಾರಾಂಶ

ಕಂಗನಾ- ಅಲಿಯಾ ವಿವಾದಕ್ಕೆ ಸಿಕ್ತು ಮತ್ತೊಂದು ಟ್ವಿಸ್ಟ್, ವಾರ್ ಶುರು ಮಾಡಿದ್ದು ಕಂಗನಾ ಸಹೋದರಿ ಹಾಗೂ ಅಲಿಯಾ ತಾಯಿ ಬಟ್ ಟಾಪಿಕ್ ಆಫ್ ಕಾನ್ವರ್ಸೇಶನ್ ಆದವರು ಮಾತ್ರ ಅಲಿಯಾ ತಂದೆ ಮಹೇಶ್ ಭಟ್ .

ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಲಿಯಾ ಭಟ್ ಹಾಗೂ ಕಂಗನಾ ವಿವಾದಕ್ಕೆ ಟ್ಟೀಟರ್‌ನಲ್ಲಿ ಸಹೋದರಿ ಹಾಗೂ ತಾಯಿ ಎಂಟ್ರಿಯಾಗಿದ್ದಾರೆ.

ಸಿನಿಮಾ ಹಾಗೂ ಸಾಮಾಜಿಕ ಜಾಲತಾಣದಿಂದ ಎಂದಿಗೂ ದೂರ ಉಳಿದ ಕಂಗನಾ ಸಹೋದರಿ ರಂಗೋಲಿ ಸಿಡಿದೇಳಲು ಅಲಿಯಾ ತಾಯಿ ಸೋನಿ ಟ್ಟೀಟ್ ಕಾರಣ. ಕೆಲ ದಿನಗಳ ಹಿಂದೆ ಟ್ಟೀಟರ್ ಖಾತೆಯಲ್ಲಿ 'ಕಂಗನಾಗೆ ಚಿತ್ರರಂಗದಲ್ಲಿ ಬ್ರೇಕ್ ಸಿಕ್ಕಿದ್ದು ನನ್ನ ಪತಿ ಮಹೇಶ್ ಭಟ್‌ರಿಂದ. ಆದರೆ ಅದನ್ನು ಮರೆತು ಕಂಗನಾ, ಅಲಿಯಾ ಹಾಗೂ ಮಹೇಶ್ ಮೇಲೆ ಆರೋಪ ಮಾಡಿ ಮಾತನಾಡುತ್ತಿದ್ದಾರೆ ' ಎಂದು ಟ್ಟೀಟ್ ಮಾಡಿದರು. ಇದನ್ನು ಕಂಡು ಸುಮ್ಮನಿರಲಾರದೆ ಕಂಗನಾ ಸಹೋದರಿ ಖಡಕ್ ಉತ್ತರ ನೀಡಿದರು.

 

'ಕಂಗನಾಳ ವಾಹ್ ಲಮ್ಹೇ ಚಿತ್ರದ ಪ್ರಿವ್ಯೂವ್ ವೇಳೆ ಅದೇ ಚಿತ್ರದ ನಿರ್ಮಾಪಕ ಮಹೇಶ್ ಭಟ್ ಕಂಗನಾ ಮೇಲೆ ಚಪ್ಪಲಿ ಎಸೆದಿದ್ದರು. ಆಕೆಯನ್ನು ಸಿನಿಮಾ ನೋಡಲು ಬಿಟ್ಟಿರಲಿಲ್ಲ ಆಗ ಆಕೆಗೆ ಕೇವಲ 18 ವರ್ಷವಷ್ಟೇ. ಅಷ್ಟೇ ಅಲ್ಲ ಕಂಗನಾಗೆ ಬ್ರೇಕ್ ಕೊಟ್ಟವರು ಮಹೇಶ್ ಭಟ್ ಅಲ್ಲ ನಿರ್ದೇಶಕ ಅನುರಾಗ್ ಬಸು ' ಎಂದು ಕಂಗನಾ ಸಹೋದರಿ ರಂಗೋಲಿ ತಿರುಗೇಟು ಕೊಟ್ಟಿದ್ದಾರೆ.

‘ಬಾಹುಬಲಿ’ಯನ್ನು ಮೀರಿಸ್ತಾರಾ ಕಂಗನಾ ರಾಣಾವತ್?

ಕಂಗನಾ ಹಾಗೂ ಅಲಿಯಾ ನಡುವಿನ ಫೈಟ್ ಕುಟುಂಬದವರನ್ನು ಎಳೆಯುವ ಮಟ್ಟಕ್ಕೆ ಹೋಗಿದೆ. ಇದು ಇನ್ನೂ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?