
ರಂಗದ ಮೇಲೆ ಮೂಕಜ್ಜಿ ಎಂದರೆ ಮೊದಲಿಗೆ ಕಣ್ಣೆದುರು ಬರುವುದು ಬಿ. ಜಯಶ್ರೀ. ಈಗ ಈ ಚಿತ್ರದಲ್ಲಿಯೂ ಜಯಶ್ರೀ ಅವರೇ ಮೂಕಜ್ಜಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ರಾಜೇಂದ್ರ ಕಾರಂತ್ ಸುಬ್ರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಜಿ.ಎಸ್. ಭಾಸ್ಕರ್ ಛಾಯಾಗ್ರಹಣ ಮಾಡಲಿದ್ದಾರೆ.
ಈಗಾಗಲೇ ಚಿತ್ರಕತೆ ಮತ್ತು ಸಂಭಾಷಣೆ ಬರೆದು ಸಿದ್ಧರಾಗಿರುವ ನಿರ್ದೇಶಕರು ಶಿವರಾಮ ಕಾರಂತರ ಜನ್ಮದಿನವಾದ ಅಕ್ಟೋಬರ್ 10ರಂದು ಚಿತ್ರೀಕಣರ ಆರಂಭಿಸಿ, ಉಡುಪಿ, ಬ್ರಹ್ಮಾವರ ಸುತ್ತಮುತ್ತಲು 25 ದಿನಗಳ ಕಾಲ ಒಂದೇ ಶೆಡ್ಯೂಲ್ನಲ್ಲಿ ಶೂಟಿಂಗ್ ಮುಗಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಜಯಶ್ರೀಗೆ ಹೆಚ್ಚು ಒಲವು:
ತಾವು ‘ಮೂಕಜ್ಜಿಯ ಕನಸು’ ಚಿತ್ರ ಮಾಡಲಿದ್ದು , ಅಜ್ಜಿಯ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂದು ಶೇಷಾದ್ರಿ ಅವರು ಫೇಸ್ ಬುಕ್ನಲ್ಲಿ ಕೇಳಿದ್ದರು. ಇದಕ್ಕೆ 160ಕ್ಕೂ ಹೆಚ್ಚು ಮಂದಿ ಬಿ. ಜಯಶ್ರೀ ಅವರ ಹೆಸರನ್ನು
ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.