
ಕೊಲೆಯ ಸುತ್ತಾ ಜರುಗುವ ಥ್ರಿಲ್ಲರ್ ಕಥೆ ಹೊಂದಿದ್ದರೂ ಒಟ್ಟಾರೆಯಾಗಿ ತುಳು ನಾಡಿನ ಸಮಸ್ತ ಸಂಸ್ಕøತಿಯತ್ತಲೂ ಬೆಳಕು ಚೆಲ್ಲಿದೆ ಎಂಬುದು ಅನುಕ್ತದ ಪ್ರಧಾನ ಆಕರ್ಷಣೆ. ಭೂತ ಕೋಲವನ್ನೂ ಕೂಡಾ ದರೆ ದೃಷ್ಯಾವಳಿಗಳಲ್ಲಿ ಸೆರೆ ಹಿಡಿಯಲಾಗಿದೆಯಂತೆ. ಇದಲ್ಲದೇ ಇದುವರೆಗೂ ಕ್ಯಾಮೆರಾ ಕಣ್ಣಿಗೆ ಬೀಳದ ಸೂಕ್ಷ್ಮ ವಿಚಾರಗಳನ್ನೂ ಅನುಕ್ತ ಮೂಲಕ ತೋರಿಸಲಾಗಿದೆಯಂತೆ. ಇದೂ ಕೂಡಾ ಅನುಕ್ತದ ಪ್ರಧಾನ ಅಂಶ.
ಅನುಕ್ತ: ಸಂಗೀತ ಭಟ್ ಪಾತ್ರ ಕಮಾಲ್ ಮಾಡುತ್ತಾ?
ಹರೀಶ್ ಬಂಗೇರ ನಿರ್ಮಾಣದ ಈ ಸಿನಿಮಾವನ್ನು ಅಶ್ವತ್ಥ್ ಸ್ಯಾಮಯವಲ್ ನಿರ್ದೇಶನ ಮಾಡಿದ್ದಾರೆ. ಇದೊಂದು ಕೊಲೆಯ ಸುತ್ತಾ ನಡೆಯುವ ಥ್ರಿಲ್ಲರ್ ಶೈಲಿಯ ಕಥೆ ಹೊಂದಿರೋ ಚಿತ್ರ. ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಲೊಕೇಶನ್ನುಗಳಲ್ಲಿಯೇ ಇದಕ್ಕೆ ಚಿತ್ರೀಕರಣ ನಡೆಸಲಾಗಿದೆಯಂತೆ. ಆದರೆ ಈ ಕೊಲೆಗೂ ಭೂತ ಕೋಲಕ್ಕೂ ಸಂಬಂಧವೇನು ಎಂಬ ವಿಚಾರ ಪ್ರೇಕ್ಷಕರ ಮನಸು ಕೊರೆಯುತ್ತಿದೆ. ಇದಕ್ಕೆ ಶೀಘ್ರದಲ್ಲಿಯೇ ಉತ್ತರವೂ ಸಿಗಲಿದೆ!
ಅನುಕ್ತ: ಇಲ್ಲಿ ಹೇಳಲಾಗದ್ದೇನೋ ಇದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.