ಈ ದೇಶದಲ್ಲಿ ನನಗೆ ಜಾತಿ, ಧರ್ಮವಿಲ್ಲ

Published : Dec 06, 2017, 03:41 PM ISTUpdated : Apr 11, 2018, 12:36 PM IST
ಈ ದೇಶದಲ್ಲಿ ನನಗೆ ಜಾತಿ, ಧರ್ಮವಿಲ್ಲ

ಸಾರಾಂಶ

ನನ್ನ ತಾಯಿ ಕಷ್ಟ ನೋಡಿದ್ದಾಳೆ. ಪ್ರತಿಯೊಬ್ಬ ಗಂಡಸಿನೊಳಗೂ ತಾಯಿತನ ಇರಬೇಕು.ಇದು ಬಸವಣ್ಣನವರ ಕಾಲದಿಂದಲೂ ಬೆಳಯಬೇಕಿತ್ತು. ಆದರೆ ನಾವು ಹಿಂದೆ ಬಂದಿದ್ದೇವೆ.

ಬೆಳಗಾವಿ(ಡಿ.06): ಈ ದೇಶದಲ್ಲಿ ನನಗೆ ಯಾವುದೇ ಜಾತಿ, ಧರ್ಮವಿಲ್ಲ. ನನ್ನ ತಾಯಿ ಅನಾಥೆ. ಗದುಗಿನಲ್ಲಿ ಹುಟ್ಟಿ ಬೆಳಗಾವಿಯಲ್ಲಿ ಬೆಳೆದು ಬೆಂಗಳೂರಿಗೆ ಬಂದಳು' ಎಂದು ನಟ ಪ್ರಕಾಶ್ ರೈ ತಮ್ಮ ಹಿನ್ನಲೆಯ ಬಗ್ಗೆ ಒಂದಿಷ್ಟು ವಿವರಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಕಷ್ಟ ನೋಡಿದ್ದಾಳೆ. ಪ್ರತಿಯೊಬ್ಬ ಗಂಡಸಿನೊಳಗೂ ತಾಯಿತನ ಇರಬೇಕು.ಇದು ಬಸವಣ್ಣನವರ ಕಾಲದಿಂದಲೂ ಬೆಳಯಬೇಕಿತ್ತು. ಆದರೆ ನಾವು ಹಿಂದೆ ಬಂದಿದ್ದೇವೆ. ನಮ್ಮಲ್ಲರ ಮುಗ್ಧತೆಯಲ್ಲಿ ಮೌಡ್ಯ ಬೆಳೆಯುತ್ತದೆ. ಹೊಸ ಮೂಢನಂಬಿಕೆಯನ್ನು ದೇಶದಲ್ಲಿ ತರುತ್ತಿದ್ದಾರೆ. ನನ್ನನ್ನು ಕೆಲವರು ಹಿಂದುತ್ವದ ಮೇಲೆ ಹೆದರಿಸುತ್ತಿದ್ದಾರೆ. ಆದರೆ ನಾನು ಇದಕ್ಕೆಲ್ಲ ಅಂಜುವುದಿಲ್ಲ. ಕಳ್ಳರು, ಪುಕ್ಕಲರು, ಹೇಡಿಗಳು ಮಾತ್ರ ಹೆದರಿಸುತ್ತಿದ್ದಾರೆ. ನನ್ನ ವ್ಯಂಗ್ಯ, ಆತಂಕದ ಹಿಂದೆ ದೊಡ್ಡ ನೋವಿದೆ. ಇದಕ್ಕೆ ನಾವು ಭಯಪಡುವುದು ಬೇಡ'ಎಂದು ತಿಳಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!