
ಪ್ರಥಮ್'ಗೆ ಹೊಡೆಯಬೇಕೆಂದು ಮುಂಚೆಯೆ ಪ್ಲ್ಯಾನ್ ಮಾಡಿಕೊಂಡು ಹೋಗಿದ್ದೆ. ಈ ವಿಷಯವನ್ನು ಬಿಗ್'ಬಾಸ್ ಮೇಲ್ವಿಚಾರಕರಿಗೆ ತಿಳಿಸಿರಲಿಲ್ಲ ಎಂದು ಹುಚ್ಚ ವೆಂಕಟ್ ಸುವರ್ಣ ನ್ಯೂಸ್' ಸಂದರ್ಶದಲ್ಲಿ ತಿಳಿಸಿದ್ದಾರೆ. ಈ ಮೊದಲು ಹುಚ್ಚ ವೆಂಕಟ್ ಅವರು ಸೀಸನ್ 3ರಲ್ಲೂ ರವಿ ಮೂರೂರು ಅವರ ಮೇಲೂ ಕೈ ಮಾಡಿದ್ದರು. ಸೀಸನ್ 4ರಲ್ಲೂ ಹುಚ್ಚ ವೆಂಕಟ್ ಅವರನ್ನು ಅತಿಥಿಯಾಗಿ ಕಳುಹಿಸಲಾಗಿತ್ತು.
ಎಲ್ಲ ಸ್ಪರ್ಧಿಗಳೊಂದಿಗೂ ಕೆಲ ಹೊತ್ತು ಮಾತನಾಡಿದರು. ಆದರೆ ಮಾತನಾಡಬಾರದೆಂಬ ಟಾಸ್ಕ್ ನೀಡಿದ್ದ ಕಾರಣ ಸ್ಪರ್ಧಿಗಳ್ಯಾರು ವೆಂಕಟ್ ಜೊತೆ ಮಾತನಾಡಿರಲಿಲ್ಲ. ಕೊನೆಯದಾಗಿ ಸ್ಪರ್ಧಿ ಪ್ರಥಮ್ ಬಳಿ ಬಂದು ಮಾತನಾಡಿಸಿದ್ದಾರೆ. ಅವರು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಏಕಾಏಕಿ ಪ್ರಥಮ್'ಗೆ ಹೊಡೆದು ಎಳದಾಡಿದರು. ತಕ್ಷಣವೇ ಬೌನ್ಸರ್'ಗಳು ಅವರನ್ನು ಬಿಗ್'ಬಾಸ್ ಮನೆಯಿಂದ ಕರೆದುಕೊಂಡು ಹೋದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.