
ಸಾಕಷ್ಟು ವಿಷಯಗಳಿಗೆ ಸುದ್ದಿ ಮಾಡುತ್ತಿರುವ ಕಿಚ್ಚ ಸುದೀಪ್ ಅಭಿನಯದ ಬಹು ನೀರಿಕ್ಷೆಯ ಹೆಬ್ಬುಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರಲ್ಲಿ ಬರುವ ನ್ಯೂಸ್ ಚಾಲ್ನಲ್ಲಿ'ನ ದೃಶ್ಯವೊಂದನ್ನು ಚಿತ್ರತಂಡ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಿದೆ.
ಕಿಚ್ಚ ಸುದೀಪ್ ಹಾಗೂ ನಟ ರವಿಕಾಳೇ ಗೌಡ ನಡುವಿನ ಸಿಕ್ವೇನ್ಸ್ನ ನ ನಿರ್ದೇಶಕ ಕೃಷ್ಣ ಚಿತ್ರೀಕರಣ ಮಾಡಿಕೊಂಡಿದ್ದು, ಚಿತ್ರದಲ್ಲಿ ಸುದೀಪ್ ಹಾಗೂ ರವಿಕಾಳೇ ನಡುವೆ ನ್ಯೂಸ್ ಚಾನಲ್'ನಲ್ಲಿ ನಡೆಯುವ ಸನ್ನಿವೇಶ ಇದಾಗಿದೆ.
ಸುದೀಪ್ ಹೇರ್ ಸ್ಟೈಲ್'ನಿಂದ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೇ ಕ್ರೇಜ್ ಹುಟ್ಟಿಸಿರುವ ಹೆಬ್ಬುಲಿ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಆಗುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.