Vijay Trisha ವಿವಾದಕ್ಕೆ ನಟಿ ಗಾಯತ್ರಿ ಶಂಕರ್ ಎಂಟ್ರಿ: ಡಬಲ್ ಸ್ಟ್ಯಾಂಡರ್ಡ್ ವಿರುದ್ಧ ಆಕ್ರೋಶ

Published : May 07, 2026, 04:35 PM IST
Gayathrie Shankar

ಸಾರಾಂಶ

ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದರೂ, ರಾಜಕೀಯದ ಕಾವು ಇನ್ನೂ ಆರಿಲ್ಲ. ಮಾಜಿ ಸಿಎಂ ಸ್ಟಾಲಿನ್ ಸೋತರೆ, ನಟ ವಿಜಯ್ ಅವರ ಟಿವಿಕೆ ಪಕ್ಷ ಅನಿರೀಕ್ಷಿತ ಗೆಲುವು ಸಾಧಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದಕ್ಕೆ ನಟಿ ತ್ರಿಶಾಗೆ ಶುಭಾಶಯಗಳು ಬರುತ್ತಿರುವುದನ್ನು ನಟಿ ಗಾಯತ್ರಿ ಶಂಕರ್ ಟೀಕಿಸಿದ್ದಾರೆ. ಇದೇ ಜಾಗದಲ್ಲಿ ಒಬ್ಬ ಮಹಿಳೆ ಇದ್ದಿದ್ದರೆ ಸಮಾಜ ಸುಮ್ಮನೆ ಬಿಡುತ್ತಿರಲಿಲ್ಲ, ಇದು ಡಬಲ್ ಸ್ಟ್ಯಾಂಡರ್ಡ್ ಎಂದು ಅವರು ಕಿಡಿಕಾರಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದರೂ, ರಾಜಕೀಯದ ಕಾವು ಇನ್ನೂ ಆರಿಲ್ಲ. ಮಾಜಿ ಸಿಎಂ ಸ್ಟಾಲಿನ್ ಸೋತರೆ, ನಟ ವಿಜಯ್ ಅವರ ಟಿವಿಕೆ ಪಕ್ಷ ಅನಿರೀಕ್ಷಿತ ಗೆಲುವು ಸಾಧಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

ವಿಜಯ್ ಮುಖ್ಯಮಂತ್ರಿ ಆಗೋಕೆ ಪ್ರಯತ್ನ ಶುರು ಮಾಡಿದ್ದಾರೆ ಅಂತ ತಮಿಳುನಾಡಿನಲ್ಲಿ ಮಾತುಗಳು ಕೇಳಿಬರುತ್ತಿವೆ. ಚುನಾವಣೆಗೂ ಮುನ್ನ ಕರೂರ್ ದುರಂತ, 'ಜನನಾಯಗನ್' ಸಿನಿಮಾ ರಿಲೀಸ್‌ಗೆ ತಡೆ, ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು... ಇವೆಲ್ಲವೂ ವಿಜಯ್‌ಗೆ ಹಿನ್ನಡೆ ಆಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಈ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ವಿಜಯ್ ಮತ್ತು ಅವರ ಟಿವಿಕೆ ಪಕ್ಷ ಗೆದ್ದು ಬೀಗಿದೆ.

ವಿಜಯ್ ಜೊತೆಗೆ ಈಗ ಅತಿ ಹೆಚ್ಚು ಕೇಳಿಬರುತ್ತಿರುವ ಇನ್ನೊಂದು ಹೆಸರು ನಟಿ ತ್ರಿಶಾ ಅವರದ್ದು. ಚುನಾವಣೆಯಲ್ಲಿ ಗೆದ್ದ ಬಳಿಕ ತ್ರಿಶಾ, ವಿಜಯ್ ಮನೆಗೆ ಭೇಟಿ ನೀಡಿದ್ದ ಫೋಟೋಗಳು ಸಖತ್ ವೈರಲ್ ಆಗಿದ್ದವು. ವಿಜಯ್-ಸಂಗೀತಾ ದಾಂಪತ್ಯ ಮುರಿಯಲು ತ್ರಿಶಾ ಕಾರಣ ಅನ್ನೋ ವದಂತಿಗಳ ನಡುವೆಯೇ ಈ ಘಟನೆ ನಡೆದಿದ್ದು, ಚರ್ಚೆಗೆ ಮತ್ತಷ್ಟು ಇಂಬು ನೀಡಿತ್ತು. ಇದರ ಬೆನ್ನಲ್ಲೇ, ವಿಜಯ್ ಅವರ ಈ ಗೆಲುವು, ತ್ರಿಶಾಗೆ ಹುಟ್ಟುಹಬ್ಬದ ಉಡುಗೊರೆ ಅಂತ ತಮಿಳು ಚಿತ್ರರಂಗದ ಹಲವು ನಟರೇ ಕಾಮೆಂಟ್ ಮಾಡಿದ್ದರು.

ಇಷ್ಟು ಸಿಂಪಲ್ ಆಗಿ ತಗೊಳ್ತಿರಲಿಲ್ಲ

ಈಗ, ವಿಜಯ್ ಗೆಲುವಿಗೆ ತ್ರಿಶಾಗೆ ಶುಭಾಶಯಗಳು ಹರಿದುಬರುತ್ತಿರುವುದನ್ನು ನಟಿ ಗಾಯತ್ರಿ ಶಂಕರ್ ಖಾರವಾಗಿ ಟೀಕಿಸಿದ್ದಾರೆ. ಒಬ್ಬ ನಟನ ವಿವಾಹೇತರ ಸಂಬಂಧವನ್ನು ಸಂಭ್ರಮಿಸುವ ಸಮಾಜ, ಇದೇ ಜಾಗದಲ್ಲಿ ನಟಿ ಇದ್ದಿದ್ದರೆ ಹೀಗೆಯೇ ನಡೆದುಕೊಳ್ಳುತ್ತಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ. ಒಂದು ವೇಳೆ, ಒಬ್ಬ ನಟಿ ತನ್ನ ಸಹನಟನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡು, ಅದರಿಂದ ಆಕೆಯ ಸಂಸಾರ ಹಾಳಾಗುವ ಹಂತದಲ್ಲಿದ್ದರೆ, ಸಮಾಜ ಇದನ್ನು ಇಷ್ಟು ಸಿಂಪಲ್ ಆಗಿ ತಗೊಳ್ತಿರಲಿಲ್ಲ.

ತಮಾಷೆಯಾಗಿಯೂ ನೋಡುತ್ತಿರಲಿಲ್ಲ. ಇಡೀ ಗಂಡಸರ ಸಮಾಜವೇ ಆಕ್ರೋಶದಿಂದ ಕುದಿಯುತ್ತಿತ್ತು. ಆಕೆಗೆ ಬಾಯಿಗೆ ಬಂದಂತೆ ಬೈಯುತ್ತಿದ್ದರು. ಗೆಲ್ಲುವುದು ದೂರ, ಆಕ್ರೋಶಗೊಂಡ ಜನರ ಗುಂಪಿಗೆ ಹೆದರಿ ಮನೆಯಿಂದ ಹೊರಬರಲೂ ಆಗದ ಸ್ಥಿತಿ ನಿರ್ಮಾಣವಾಗುತ್ತಿತ್ತು," ಎಂದು ಗಾಯತ್ರಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಗಾಯತ್ರಿ ಶಂಕರ್ 'ಸೂಪರ್ ಡೀಲಕ್ಸ್', 'ವಿಕ್ರಂ' ಮುಂತಾದ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇದು AIನಾ? ನಿಜಾನಾ? ನಟನ ಮಗಳ ಬೋಲ್ಡ್ ವಿಡಿಯೋ ಲೀಕ್: ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
ಆ ಹೀರೋಯಿನ್ ಗಾಗಿ ಪತ್ನಿಗೆ ಡಿವೋರ್ಸ್ ಕೊಡಲು ರೆಡಿಯಾಗಿದ್ರು ಸೂಪರ್ ಸ್ಟಾರ್ ರಜನಿಕಾಂತ್!