
ಮುಂಬೈ : ನಟಿ ರವೀನಾ ಟಂಡನ್ ವಿರುದ್ಧ ದೂರು ದಾಖಲಾಗಿದೆ. ಒಡಿಶಾದ ದೇವಾಲಯವೊಂದರಲ್ಲಿ ಕ್ಯಾಮರಾ ನಿಷೇಧಿತ ಪ್ರದೇಶದಲ್ಲಿ ಜಾಹಿರಾತನ್ನು ಶೂಟ್ ಮಾಡಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಈ ದೇವಾಲಯದಲ್ಲಿ ಕ್ಯಾಮರಾಗೆ ಅವಕಾಶ ಇಲ್ಲದಿದ್ದರೂ ಇಲ್ಲಿಗೆ ಕ್ಯಾಮೆರಾ ತಂದು ಶೂಟ್ ಮಾಡಿದ ಹಿನ್ನೆಲೆ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಭುನೇಶ್ವರ ಪೊಲೀಸರು ಹೇಳಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರವೀನಾ ಟಂಡನ್ ದೇವಾಲಯದಲ್ಲಿ ಯಾವುದೇ ರೀತಿಯಾದ ಜಾಹಿರಾತನ್ನು ಶೂಟ್ ಮಾಡಿಲ್ಲ. ಇದು ಯಾವುದೇ ಏಜೆನ್ಸಿಯೂ ಅಲ್ಲ, ಶೂಟಿಂಗ್ ಕೂಡ ನಡೆದಿಲ್ಲ. ಇಲ್ಲಿ ಕೆಲ ಮಾಧ್ಯಮಗಳು, ಕೆಲ ಸ್ಥಳೀಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಅಲ್ಲದೇ ಇಲ್ಲಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ನಿಷೇದವಿದೆ ಎನ್ನುವ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ನಾನು ದೇವಾಲಯಕ್ಕೆ ಹೋದಾಗ ನನ್ನ ಸುತ್ತ ಜನರು ಸುತ್ತುವರಿದು ಸೆಲ್ಫಿ ವಿಡಿಯೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.