
ಬೆಂಗಳೂರು (ಮೇ.20): ದುನಿಯಾ ವಿಜಿ ಟಾಲಿವುಡ್ ನಟ ಎನ್ಟಿಆರ್ ಅಭಿನಯದ 'ಜೈ ಲವ ಕುಶ ' ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತು. ಆದರೆ ಇದೀಗ ಆ ಚಿತ್ರದಲ್ಲಿ ಅಭಿನಯಿಸದಿರಲು ದುನಿಯಾ ವಿಜಿ ನಿರ್ಧರಿಸಿದ್ದಾರಂತೆ.
ಮಾಸ್ತಿಗುಡಿ ಚಿತ್ರದಲ್ಲಿನ ದುನಿಯಾ ವಿಜಿ ಗೆಟಪ್ ನೋಡಿ 'ಜೈ ಲವ ಕುಶ' ತಂಡ ಆ ಚಿತ್ರದಲ್ಲಿ ನಟಿಸುವಂತೆ ಆಫರ್ ನೀಡಿತ್ತು. ವಿಜಯ್ ಅದಕ್ಕೆ ಒಪ್ಪಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದೀಗ ವಿಜಯ್ ಆ ಸಿನಿಮಾದಲ್ಲಿ ಆ್ಯಕ್ಟ್ ಮಾಡದಿರಲು ನಿರ್ಧರಿಸಿದ್ದಾರಂತೆ. ಈ ವಿಷಯವನ್ನು ಜ್ಯೂನಿಯರ್ ಎನ್ಟಿಆರ್ ಅವರಿಗೆ ಫೋನ್ ಮಾಡಿ ತಿಳಿಸಿದ್ದಾರಂತೆ. ಮಾಸ್ತಿಗುಡಿ' ಸಿನಿಮಾ ರಿಲೀಸ್ ವೇಳೆ 'ಜೈ ಲವ ಕುಶ' ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ವಿಜಿಗೆ ಸೂಚಿಸಲಾಗಿತ್ತು. ತಮ್ಮ ಚಿತ್ರದ ರಿಲೀಸ್ ವರ್ಕ್ನಲ್ಲಿ ಬ್ಯುಸಿಯಾಗಿದ್ದ ವಿಜಿ, 'ಜೈ ಲವ ಕುಶ' ಚಿತ್ರವನ್ನು ಕೈ ಬಿಡುವುದಕ್ಕೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.