
ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಪ್ರದಾನದ ಜತೆಗೆ ಸೆಪ್ಟೆಂಬರ್ 18 ರಿಂದ 20 ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಡಾ.ವಿಷ್ಣುವರ್ಧನ ನಾಟಕೋತ್ಸವ’ ಆಯೋಜಿಸಿದೆ. ಬೆಳ್ಳಿತೆರೆಯ ಯಜಮಾನನಿಗೆ ರಂಗದ ಮೂಲಕ ನಮನ ಸಲ್ಲಿಸುವುದು ಈ ಬಾರಿಯ ವಿಶೇಷ.
ಸಿನಿಮಾ ನಿರ್ಮಾಣಕ್ಕಿಳಿದ ವಿಷ್ಣು ಸೇನಾ ಅಧ್ಯಕ್ಷ ಶ್ರೀನಿವಾಸ್!
ನಾಟಕೋತ್ಸವದ ಮೊದಲ ದಿನ ಸಂಜೆ 4 ಗಂಟೆಗೆ ಉದ್ಘಾಟನೆ ಮತ್ತು ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವಿದೆ. ಈ ವರ್ಷದ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ ರಮೇಶ್ ಅವರಿಗೆ ಸಂದಿದೆ. ಎಸ್. ನಾರಾಯಣ್, ಟಿ.ಎಸ್. ನಾಗಾಭರಣ, ನಟ ರಮೇಶ್ ಅರವಿಂದ್, ಮಂಡ್ಯ ರಮೇಶ್, ಗೀತೆ ರಚನೆಕಾರ ನಾಗೇಂದ್ರ ಪ್ರಸಾದ್, ರವಿ ಶ್ರೀವತ್ಸ ಸೇರಿದಂತೆ ಹಲವರು ಭಾಗವಹಿಸುತ್ತಿದ್ದಾರೆ. ಅಂದೇ ಸಂಜೆ 6.30ಕ್ಕೆ ನಟನ ತಂಡದಿಂದ ‘ಚೋರ ಚರಣದಾಸ’ ನಾಟಕವಿದೆ. ಸೆ. 19ಕ್ಕೆ ಐಎಎಸ್/ ಕೆಎಎಸ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ರಂಗಭೂಮಿ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಿದೆ.
ವಿಷ್ಣು ಸ್ಮಾರಕ ವದಂತಿ ಸುಳ್ಳು; ಅಲ್ಲೇ ನಡೆಯಲಿದೆ ಮೂರು ದಿನ ಕಾರ್ಯಕ್ರಮ!
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನುಬಳಿಗಾರ್, ಪತ್ರಕರ್ತ ವಿಶ್ವೇಶ್ವರ ಭಟ್, ಸಾಹಿತಿ ಜೋಗಿ, ನಟ ಶರತ್ ಲೋಹಿತಾಶ್ವ, ಸಾಧನಾ ಕೋಚಿಂಗ್ ಅಕಾಡೆಮಿ ಸಂಸ್ಥಾಪಕಿ ಡಾ. ಜ್ಯೋತಿ, ರಂಗ ಕರ್ಮಿಗಳಾದ ನಯನ ಸೂಡ, ಹನುಮಕ್ಕ, ಮುರುಡಯ್ಯ, ಆನಂದ್ ಡಿ. ಕಳಸ, ಬೇಲೂರು ರಘನಂದನ್ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಸಂಜೆ 5.30ರಿಂದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಹಾಗೂ ‘ಶರೀಫ’ ನಾಟಕ ಪ್ರದರ್ಶನವಿದೆ. ಸೆಪ್ಟೆಂಬರ್ 20ಕ್ಕೆ ನಾಟಕೋತ್ಸವದ ಸಮಾರೋಪ ಸಮಾರಂಭ ಮತ್ತು ಕನ್ನಡ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವಿದೆ. ಸಚಿವ ಎಸ್. ಸುರೇಶ್ ಕುಮಾರ್, ಸಾಹಿತಿ ಎಚ್.ಎಸ್. ವೆಂಕಟೇಶ್ ಮೂರ್ತಿ, ಕಲಾವಿದ ದತ್ತಣ್ಣ, ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವರು ಪಾಲ್ಗೊಳ್ಳುತ್ತಿದ್ದಾರೆ. ನಾಟಕೋತ್ಸವದ ಕಡೆಯ ನಾಟಕಗಳಾಗಿ ‘ವೇಷ’ ಮತ್ತು ‘ಗುಲಾಬಿ ಗ್ಯಾಂಗು’ ರಂಗ ಪ್ರಯೋಗಗಳಿವೆ. ರಾಜ್ಯದ ಎಲ್ಲಾ ಕಡೆಗಳಿಂದಲೂ ನಾಟಕ ತಂಡಗಳು ಪಾಲ್ಗೊಳ್ಳುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.