
ಕಂಗನಾ ರಾಣಾವತ್ ತಾನು ನಟಿಸಿರುವ ‘ಸಿಮ್ರನ್' ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆಯಲ್ಲಿ ತನಗೂ ಕ್ರೆಡಿಟ್ ಸಿಗಬೇಕು ಅಂತ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶನದ ಈ ಸಿನಿಮಾದಲ್ಲಿ ಕತೆ ಚಿತ್ರಕತೆ ಕ್ರೆಡಿಟ್ ಕಂಗನಾಗೆ ಕೊಟ್ಟಿದ್ದಕ್ಕೆ ಬರಹಗಾರ ಅಪೂರ್ವ ಅಸ್ರಾಣಿ ಬೇಸರ ವ್ಯಕ್ತ ಪಡಿಸಿದ್ದರು. ವಿಷಯ ಹೀಗೆಲ್ಲಾ ಇರುವಾಗ ವಿದ್ಯಾ ಬಾಲನ್ ಸೋಷಿಯಲ್ ಮೀಡಿಯಾದಲ್ಲಿ ಅಡಿಷನಲ್ ಕ್ರೆಡಿಟ್ ಕಾರ್ಡ್ ಹಿಡಿದಿರುವ ಫೋಟೋ ಒಂದನ್ನು ಹಾಕಿ ‘ಈ ಕಾರ್ಡು ಕೊಟ್ಟರೆ ಯಾರಿಗೆ ಬೇಕು ಕ್ರೆಡಿಟ್' ಅಂತ ಸ್ಟೇಟಸ್ ಅಪ್ಡೇಟ್ ಮಾಡಿದ್ದರು.
ತೆ, ಚಿತ್ರಕತೆ, ಸಂಭಾಷಣೆಯಲ್ಲಿ ತನಗೂ ಕ್ರೆಡಿಟ್ ಸಿಗಬೇಕು ಅಂತ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶನದ ಈ ಸಿನಿಮಾದಲ್ಲಿ ಕತೆ ಚಿತ್ರಕತೆ ಕ್ರೆಡಿಟ್ ಕಂಗನಾಗೆ ಕೊಟ್ಟಿದ್ದಕ್ಕೆ ಬರಹಗಾರ ಅಪೂರ್ವ ಅಸ್ರಾಣಿ ಬೇಸರ ವ್ಯಕ್ತ ಪಡಿಸಿದ್ದರು. ವಿಷಯ ಹೀಗೆಲ್ಲಾ ಇರುವಾಗ ವಿದ್ಯಾ ಬಾಲನ್ ಸೋಷಿಯಲ್ ಮೀಡಿಯಾದಲ್ಲಿ ಅಡಿಷನಲ್ ಕ್ರೆಡಿಟ್ ಕಾರ್ಡ್ ಹಿಡಿದಿರುವ ಫೋಟೋ ಒಂದನ್ನು ಹಾಕಿ ‘ಈ ಕಾರ್ಡು ಕೊಟ್ಟರೆ ಯಾರಿಗೆ ಬೇಕು ಕ್ರೆಡಿಟ್' ಅಂತ ಸ್ಟೇಟಸ್ ಅಪ್ಡೇಟ್ ಮಾಡಿದ್ದರು.
ದನ್ನು ನೋಡಿದ ಜನರೆಲ್ಲಾ ಕಂಗನಾಳನ್ನು ತಮಾಷೆ ಮಾಡುತ್ತಿದ್ದಾಳೆ ಅಂತ ಪರಸ್ಪರ ಕಾಲೆಳೆದಿದ್ದಾರೆ. ಅಷ್ಟೇ ಅಲ್ಲ, ಸಿಮ್ರನ್ ಚಿತ್ರದ ಬರಹಗಾರ ಅಪೂರ್ವ ಅಸ್ರಾಣಿ ಕೂಡ ಕಮೆಂಟ್ ಹಾಕಿದ್ದಾರೆ. ವಿದ್ಯಾ ಬಾಲನ್ ಕ್ರೆಡಿಟ್ ಕೇಳುವ ಮುನ್ನವೇ ನಿರ್ದೇಶಕರು ಜಾಣತನದಿಂದ ಕ್ರೆಡಿಟ್ ಕಾರ್ಡು ಕೊಟ್ಟಿದ್ದಾರೆ ಎಂದಿದ್ದಾರೆ. ಅಂದಹಾಗೆ ವಿದ್ಯಾ ಬಾಲನ್ ಸದ್ಯ ಸುರೇಶ್ ತ್ರಿವೇಣಿ ನಿರ್ದೇಶನದ ‘ತುಮ್ಹಾರಿ ಸುಲು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಇಂಥದ್ದೊಂದು ಫೋಟೋ ಹಾಕಿ ಕಂಗನಾಳನ್ನು ರೇಗಿಸಿ, ಕಾಲೆಳೆದು ಸುದ್ದಿಯಾಗಿದ್ದಾರೆ. ಇದಕ್ಕೆ ಕಂಗನಾ ಏನ್ ಹೇಳುತ್ತಾಳೋ ಕಾದು ನೋಡಬೇಕು. ಸುಮ್ಮನೆಯಂತೂ ಬಿಡಲಿಕ್ಕಿಲ್ಲ. ಕಂಗನಾ ಅಂದ್ರೆ ಫೈಟ್ ಇರಲೇಬೇಕು.
-ಕನ್ನಡಪ್ರಭ, ಸಿನಿವಾರ್ತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.