ಸಹೋದರಿ ಬಳಿ ಅರ್ಜುನ್ ಕಪೂರ್ ಕ್ಷಮೆ ಕೇಳಿದ್ದು ಯಾಕೆ?

Published : Jun 11, 2018, 12:24 PM ISTUpdated : Jun 11, 2018, 02:10 PM IST
ಸಹೋದರಿ ಬಳಿ ಅರ್ಜುನ್ ಕಪೂರ್ ಕ್ಷಮೆ ಕೇಳಿದ್ದು ಯಾಕೆ?

ಸಾರಾಂಶ

ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಜಾಹ್ನವಿ ಕಪೂರ್ ಬಳಿ ಕ್ಷಮೆಯಾಚಿಸಿದ್ದಾರೆ. ಕ್ಷಮೆ ಕೇಳುವುದು ಮಾತ್ರವಲ್ಲದೇ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಅರ್ಜುನ್ ಕಪೂರ್ ಕ್ಷಮೆ ಕೇಳಲು ಕಾರಣ ಏನು?  ಇಲ್ಲಿದೆ ಉತ್ತರ.

ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಜಾಹ್ನವಿ ಕಪೂರ್ ಬಳಿ ಕ್ಷಮೆಯಾಚಿಸಿದ್ದಾರೆ. ಕ್ಷಮೆ ಕೇಳುವುದು ಮಾತ್ರವಲ್ಲದೇ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಅರ್ಜುನ್ ಕಪೂರ್ ಕ್ಷಮೆ ಕೇಳಲು ಕಾರಣ ಏನು?  ಇಲ್ಲಿದೆ ಉತ್ತರ.

ದುರಂತ ಸಾವಿಗೀಡಾದ ಬಹುಭಾಷಾ ತಾರೆ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಅಭಿನಯದ 'ಧಡಕ್' ಚಿತ್ರದ ಟ್ರೈಲರ್ ಗೆ  ಬಿಡುಗಡೆಗೆ ಸಿದ್ಧವಾಗಿದೆ. ಈಶಾನ್ ಖಟ್ಟರ್ ಮತ್ತು  ಜಾಹ್ನವಿ ಕಪೂರ್ ಅಭಿನಯದ ಚಿತ್ರದ ಪೋಸ್ಟರ್ ಗಳು ಈಗಾಗಲೇ ಸದ್ದು ಮಾಡುತ್ತಿದೆ.  ಆದರೆ ಸಹೋದರಿಯ ಮೊದಲ ಚಿತ್ರದ ಟ್ರೈಲರ್  ಬಿಡುಗಡೆಯನ್ನು ಅರ್ಜುನ್ ಕಪೂರ್ ತಪ್ಪಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಅವರು ಸಹೋದರಿಯ ಕ್ಷಮೆ ಕೇಳಿದ್ದಾರೆ.

ಮುಂಬೈನಲ್ಲಿ ಚಿತ್ರದ ಟ್ರೈಲರ್  ಲಾಂಚ್ ಆಗ್ತಾ ಇದ್ರೆ ಅತ್ತ ಅರ್ಜುನ್ ಕಪೂರ್ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಅವರು ಭಾರತದಲ್ಲಿ ಇದ್ದರೆ ಲಾಂಚ್ ತಪ್ಪಿಸಿಕೊಳ್ತಾ ಇರಲಿಲ್ಲ. ಆದರೆ ಅರ್ಜುನ್ ಲಂಡನ್ ನಲ್ಲಿ ಚಿತ್ರವೊಂದರ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

ಸಹೋದರಿ ಮತ್ತು ಕುಟುಂಬದೊಂದಿಗೆ ಇರುವ ಫೋಟೋದೊಂದಿಗೆ ಟ್ವೀಟ್ ಮಾಡಿರುವ ಅರ್ಜುನ್ ,ನೀನು ಮುಂದಿನ ದಿನಗಳಲ್ಲಿ ಪ್ರೇಕ್ಷಕ ಪ್ರಭುವಿನ ಮನಸ್ಸಿನಲ್ಲಿ ನೆಲೆಸುತ್ತೀಯಾ..ಮೊದಲಿಗೆ ನಾನು ನಿನ್ನಲ್ಲಿ ಕ್ಷಮೆ ಕೇಳುತ್ತಿದ್ದೇನೆ. ನಾನು ಮುಂಬೈನಲ್ಲಿಲ್ಲ. ಆದರೆ ಚಿಂತೆ ಮಾಡಬೇಡ ನಾನು ಸದಾ ನಿನ್ನೊಂದಿಗೆ ಇರುತ್ತೇನೆ ಎಂದು ಟ್ವೀಟ್ ಮಾಡಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು: ಅಭಿಷೇಕ್‌ ಶ್ರೀಕಾಂತ್
Bigg Boss Kannada: ಎಲ್ಲಿ ನೋಡಿದ್ರೂ ಗಿಲ್ಲಿ ಗಿಲ್ಲಿ, ಪಿಆರ್‌ ಒಗಳಿಗೆ ವಿನಯ್ ಗೌಡ ಹೇಳಿದ್ದೇನು?