‘ದಯವಿಟ್ಟು ಗಮನಿಸಿ’ ಯೂನಿಕ್ ಸಬ್ಜೆಕ್ಟ್ . ಕತೇನೆ ಒಂಥರಾ ಔಟ್ ಆಫ್ ದ ಬಾಕ್ಸ್ ಅನ್ನೋದು ಈ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದ ತಂತ್ರಜ್ಞರ ಮಾತು. ಆದರೆ ಪಕ್ಕ ಕಮರ್ಷಿಯಲ್ ಸಿನಿಮಾ. 4 ಕತೆಗಳು ಕ್ಲೈಮ್ಯಾಕ್ಸ್ ನಲ್ಲಿ ಕನೆಕ್ಟ್ ಆಗೊ ರೀತಿ ನಿಜಕ್ಕೂ ಥ್ರಿಲ್ಲಿಂಗ್. ರಘು ಮುಖರ್ಜಿ, ಸಂಯುಕ್ತಾ ಹೊರನಾಡು, ವಸಿಷ್ಟ ಎನ್ ಸಿಂಹ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಭಾವನಾ ರಾವ್ ಹೀಗೆ ಕಲಾವಿದರ ಸಂಗಮವಿದೆ. ಅನೂಪ್ ಸೀಳಿನ್ ಸಂಗೀತದ ಈ ದಯವಿಟ್ಟು ಗಮಿನಿಸಿ ಸಿನಿಮಾದ ವಿಜಯ್ ಪ್ರಕಾಶ್ ಹಾಡಿರುವ ಸಂಚಾರಿ ಹಾಡು ಈಗಾಗಲೆ ಎಲ್ಲರನ್ನು ಕಾಡುತ್ತಿದೆ.
ಬೆಂಗಳೂರು (ಮೇ.20): ‘ದಯವಿಟ್ಟು ಗಮನಿಸಿ’ ಯೂನಿಕ್ ಸಬ್ಜೆಕ್ಟ್ . ಕತೇನೆ ಒಂಥರಾ ಔಟ್ ಆಫ್ ದ ಬಾಕ್ಸ್ ಅನ್ನೋದು ಈ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದ ತಂತ್ರಜ್ಞರ ಮಾತು. ಆದರೆ ಪಕ್ಕ ಕಮರ್ಷಿಯಲ್ ಸಿನಿಮಾ. 4 ಕತೆಗಳು ಕ್ಲೈಮ್ಯಾಕ್ಸ್ ನಲ್ಲಿ ಕನೆಕ್ಟ್ ಆಗೊ ರೀತಿ ನಿಜಕ್ಕೂ ಥ್ರಿಲ್ಲಿಂಗ್. ರಘು ಮುಖರ್ಜಿ, ಸಂಯುಕ್ತಾ ಹೊರನಾಡು, ವಸಿಷ್ಟ ಎನ್ ಸಿಂಹ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಭಾವನಾ ರಾವ್ ಹೀಗೆ ಕಲಾವಿದರ ಸಂಗಮವಿದೆ. ಅನೂಪ್ ಸೀಳಿನ್ ಸಂಗೀತದ ಈ ದಯವಿಟ್ಟು ಗಮಿನಿಸಿ ಸಿನಿಮಾದ ವಿಜಯ್ ಪ್ರಕಾಶ್ ಹಾಡಿರುವ ಸಂಚಾರಿ ಹಾಡು ಈಗಾಗಲೆ ಎಲ್ಲರನ್ನು ಕಾಡುತ್ತಿದೆ.
ಸಿನಿಮಾ ಪೋಸ್ಟರ್ನಿಂದಲೇ ಇದೊಂದು ವಿಭಿನ್ನ ಸಿನಿಮಾ ಎಂದು ಗುರ್ತಿಸಿಕೊಂಡಿದೆ.ಕತೆ ಚಿತ್ರಕತೆ ನಿರ್ದೇಶನ ರೋಹಿತ್ ಪದಕಿಯವರದ್ದು. ವಸಿಷ್ಟ ಮತ್ತು ಸಂಗೀತ ಭಟ್ ಕತೆ ತುಂಬಾ ಇಂಟ್ರೆಸ್ಟಿಂಗ್ ಅನ್ನೋದನ್ನ ಜಯಂತ್ ಕಾಯ್ಕಿಣಿ ಪದಗಳಲ್ಲಿ ಅನೂಪ್ ಸೀಳಿನ್ ಸಂಗೀತದಲ್ಲಿ,ಪ್ರದೀಪ್ ಕುಮಾರ್ ಗಾಯನದಲ್ಲಿ ,ಅರವಿಂದ್ ಕಶ್ಯಪ್ ಕ್ಯಾಮೆರ ಕಣ್ಣಲ್ಲಿ ಮೂಡಿಬಂದಿರೋ ಈ ಮತ್ತೊಂದು ಹೊಸ ಹಾಡಿನಲ್ಲಿ ಕಾಣಬಹುದು.
ಜುಲೈ ತಿಂಗಳಲ್ಲಿ ತೆರೆಗೆ ಸಿದ್ಧವಾಗಿರುವ ದಯವಿಟ್ಟು ಗಮನಿಸಿ ಸಿನಿಮಾವನ್ನ ಕೃಷ್ಣ ಸಾರ್ಥಕ್, ಅನೂಪ್ ಸೀಳಿನ್, ರೋಹಿತ್ ಪದಕಿ ನಿರ್ಮಿಸಿದ್ಧಾರೆ. ಮುಮದಿನ ತಿಂಗಳು ಟ್ರೈಲರ್ ರಿಲೀಸ್ ಆಗಲಿದೆ.