
ಬೆಂಗಳೂರು(ಅ.4): ದನಕಾಯೋನು ಸಿನಿಮಾ ರಿಲೀಸ್'ಗೆ ರೆಡಿಯಾಗ್ತಿದ್ದಂತೆ ಚಿತ್ರತಂಡ ಹೊಸ ನಾಟಕ ಶುರುಮಾಡಿದೆ. ಯೋಗರಾಜ್ ಭಟ್ರು,ವಿಜಿ ಸೇರ್ಕೊಂಡು ದನಕಾಯೋರ ಕುರುಕ್ಷೇತ್ರ ನಾಟಕ ಆರಂಭಿಸಿದ್ದಾರೆ. ದನಕಾಯೋರ ಕುರುಕ್ಷೇತ್ರ ಅನ್ನೋ ನಾಟಕವನ್ನು ಚಿತ್ರತಂಡ ಮಾಡಲಿದೆ. ಅಂದ್ಹಾಗೇ ಈ ನಾಟಕ ನಡೀತಿರೋದು ಚಿತ್ರದ ಪ್ರಮೋಷನ್ಗೆ. ಇಂದು ನಾಟಕದ ರಿಹರ್ಸಲ್ ಮಾಡಲಾಯಿತು. ಯೋಗರಾಜ್ ಭಟ್ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟ ದುನಿಯಾ ವಿಜಯ್ ಕೃಷ್ಣನಾಗಿ ಕಾಣಿಸಿಕೊಂಡರು. ನಟಿ ಪ್ರಿಯಾಮಣಿ ರುಕ್ಮಿಣಿ ಪಾತ್ರದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.