ಕಮೀಷನ್ ತೊಗೊಂಡ್ರಾ ಯೋಗರಾಜಭಟ್ಟರು.. ?ನಿರ್ಮಾಪಕ ಶ್ರೀನಿವಾಸ್ ಗರಂ ಆಗಿದ್ಯಾಕೆ..?

By internet deskFirst Published Oct 5, 2016, 9:15 AM IST
Highlights

ಬೆಂಗಳೂರು(ಅ.05): ‘ದನ ಕಾಯೋನು’ ಚಿತ್ರ ತಂಡದಲ್ಲಿ ಗಲಾಟೆ ಶುರುವಾಗಿದೆ. ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರ ನಡುವೆ ಕಿತ್ತಾಡಿಕೊಂಡಿದ್ದಾರೆ. ನಿರ್ದೇಶಕ ಯೋಗರಾಜ್​ ಭಟ್​ ವಿರುದ್ಧ ಗರಂ ಆಗಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್​, ಯೋಗರಾಜ್​ ಭಟ್​ ಕಮಿಷನ್ ಪಡೆದಿದ್ದಾರೆಂದು ಆರೋಪ ಮಾಡಿದ್ದಾರೆ.

ಶ್ರೀನಿವಾಸ್​​ ಕ್ಷಮೆಯಾಚನೆಗೆ ಯೋಗರಾಜ್​ ಭಟ್​​ ಬಿಗಿಪಟ್ಟು ಹಿಡಿದಿದ್ದಾರೆ. ಕ್ಷಮೆ ಕೇಳೋವರೆಗೂ ಚಿತ್ರದ ಪ್ರಚಾರಕ್ಕೆ ಬರೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಕ್ಟೋಬರ್​ 7ರಂದು ಚಿತ್ರ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ‘ನಿಗದಿತ ದಿನದಂದೇ ದನ ಕಾಯೋನು ಚಿತ್ರ ಬಿಡುಗಡೆ ಖಚಿತ ಸುವರ್ಣನ್ಯೂಸ್​​ಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.

Latest Videos

 

 

click me!