'ಮೀಟೂ' ವಿವಾದಲ್ಲಿ ಸೌಂಡ್ ಮಾಡಿದ್ದ ಗಾಯಕಿ ಚಿನ್ಮಯಿ ಶ್ರೀಪಾದ ದೇವಸ್ಥಾನಗಳಿಗೆ ಹೋಗಿ ಅತ್ತಿದ್ಯಾಕೆ?

Published : Jun 06, 2025, 06:02 PM IST
Chinmayi Sripada Kamal Haasan

ಸಾರಾಂಶ

ಈ ಹಾಡಿನ ಯಶಸ್ಸು ನನ್ನ ಪ್ರಾರ್ಥನೆಗೆ ಸಂದ ಜಯದಂತೆ ಭಾಸವಾಗುತ್ತಿದೆ. ನನಗೆ ಈ ಅದ್ಭುತ ಅವಕಾಶವನ್ನು ನೀಡಿದ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಅನಿರುದ್ಧ್ ರವಿಚಂದರ್ ಅವರಿಗೆ ಹಾಗೂ ನಿರ್ದೇಶಕ ಮಣಿರತ್ನಂ ಸರ್ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನನ್ನನ್ನು ನಂಬಿ..

ಚೆನ್ನೈ: ದಕ್ಷಿಣ ಭಾರತದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripada) ಅವರು ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಕಠಿಣ ಸವಾಲುಗಳು ಮತ್ತು ಅದರಿಂದ ಹೊರಬಂದು ಸಾಧಿಸುತ್ತಿರುವ ಯಶಸ್ಸಿನ ಬಗ್ಗೆ ಸದಾ ಧ್ವನಿ ಎತ್ತುತ್ತಲೇ ಇರುತ್ತಾರೆ. ಇದೀಗ, ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ 'ಥಗ್ ಲೈಫ್'ಗಾಗಿ ಅವರು ಹಾಡಿರುವ "ಮುತ್ತಾ ಮಳೈ" (ಮುತ್ತಿನ ಮಳೆ) ಹಾಡಿನ ಆಡಿಯೋ ಬಿಡುಗಡೆಯ ತುಣುಕು ವೈರಲ್ ಆದ ನಂತರ, ಅವರು ತಮ್ಮ ಮನದಾಳದ ನೋವು ಮತ್ತು ಸಂತಸವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ 'ಥಗ್ ಲೈಫ್' ಚಿತ್ರದ ಕಾರ್ಯಕ್ರಮದಲ್ಲಿ ಚಿನ್ಮಯಿ ಹಾಡಿದ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಯಿತು. ಈ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಭಾವುಕರಾದ ಚಿನ್ಮಯಿ, ತಮ್ಮ ಆರು ವರ್ಷಗಳ ಸುದೀರ್ಘ ಹೋರಾಟವನ್ನು ನೆನೆದು, ಹೃದಯಸ್ಪರ್ಶಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಚಿನ್ಮಯಿ ಭಾವುಕ ಪೋಸ್ಟ್‌ನಲ್ಲಿ ಹೇಳಿದ್ದೇನು?

"ಸತ್ಯ ಹೇಳಬೇಕೆಂದರೆ, 'ಥಗ್ ಲೈಫ್' ಹಾಡಿನ ಆಡಿಯೋ ಲಾಂಚ್ ವಿಡಿಯೋ ವೈರಲ್ ಆದಾಗ ನನಗೆ ತುಂಬಾ ಆತಂಕವಾಯಿತು. ಕಳೆದ ಆರು ವರ್ಷಗಳಿಂದ ನಾನು ತಮಿಳು ಚಿತ್ರರಂಗದಲ್ಲಿ ಎದುರಿಸುತ್ತಿರುವ ಅಘೋಷಿತ ನಿಷೇಧದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಈ ಅವಧಿಯಲ್ಲಿ, ನಾನು ಅಸಂಖ್ಯಾತ ದೇವಾಲಯಗಳಲ್ಲಿ ಕಣ್ಣೀರು ಹಾಕಿದ್ದೇನೆ. ದೇವರ ಮುಂದೆ ಅತ್ತಿದ್ದೆ, ಹೊರಬಂದ ತಕ್ಷಣ ಎಲ್ಲರ ಮುಂದೆ ಒಬ್ಬ ಧೈರ್ಯವಂತೆ ಮಹಿಳೆ ಎಂಬಂತೆ ನಟಿಸುತ್ತಾ ನಡೆದಾಡಿದ್ದೇನೆ. ನನ್ನ ಪ್ರಾರ್ಥನೆಗಳಿಗೆ ದೇವರು ಯಾವಾಗ ಕಿವಿಯಾಗುತ್ತಾನೆ ಎಂದು ಕಾಯುತ್ತಿದ್ದೆ," ಎಂದು ಚಿನ್ಮಯಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಅವರು ಮುಂದುವರೆದು, "ಈ ಹಾಡಿನ ಯಶಸ್ಸು ನನ್ನ ಪ್ರಾರ್ಥನೆಗೆ ಸಂದ ಜಯದಂತೆ ಭಾಸವಾಗುತ್ತಿದೆ. ನನಗೆ ಈ ಅದ್ಭುತ ಅವಕಾಶವನ್ನು ನೀಡಿದ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಅನಿರುದ್ಧ್ ರವಿಚಂದರ್ ಅವರಿಗೆ ಹಾಗೂ ನಿರ್ದೇಶಕ ಮಣಿರತ್ನಂ ಸರ್ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನನ್ನನ್ನು ನಂಬಿ, ನನ್ನ ಧ್ವನಿಗೆ ಮತ್ತೆ ವೇದಿಕೆ ಕಲ್ಪಿಸಿದ್ದಕ್ಕಾಗಿ ನಾನು ಚಿರಋಣಿ," ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಹೋರಾಟದ ಹಿನ್ನೆಲೆ

2018ರಲ್ಲಿ '#MeToo' ಆಂದೋಲನದ ಸಮಯದಲ್ಲಿ, ಚಿನ್ಮಯಿ ಶ್ರೀಪಾದ ಅವರು ತಮಿಳಿನ ಖ್ಯಾತ ಗೀತರಚನೆಕಾರ ವೈರಮುತ್ತು ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಘಟನೆಯ ನಂತರ, ತಮಿಳು ಚಿತ್ರರಂಗದಲ್ಲಿ ಅವರಿಗೆ ಹಾಡುವ ಅವಕಾಶಗಳು ಸಂಪೂರ್ಣವಾಗಿ ನಿಂತುಹೋಗಿದ್ದವು. ಡಬ್ಬಿಂಗ್ ಯೂನಿಯನ್‌ನಿಂದಲೂ ಅವರನ್ನು ಹೊರಹಾಕಲಾಗಿತ್ತು. ಆದರೆ, ಕಾನೂನು ಹೋರಾಟದ ಮೂಲಕ ಅವರು ಡಬ್ಬಿಂಗ್ ಯೂನಿಯನ್‌ಗೆ ಮರುಸೇರ್ಪಡೆಯಾಗಿದ್ದರು. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ, ತೆಲುಗು ಚಿತ್ರರಂಗದಲ್ಲಿ ಅವರು ಡಬ್ಬಿಂಗ್ ಕಲಾವಿದೆಯಾಗಿ ಮತ್ತು ಗಾಯಕಿಯಾಗಿ ಸಕ್ರಿಯವಾಗಿದ್ದರು.

ಸುಮಾರು ಆರು ವರ್ಷಗಳ ನಂತರ, ತಮಿಳು ಚಿತ್ರರಂಗದ ಇಬ್ಬರು ಅಗ್ರ ಸಂಗೀತ ನಿರ್ದೇಶಕರು ಮತ್ತು ಒಬ್ಬ ಶ್ರೇಷ್ಠ ನಿರ್ದೇಶಕರು ಸೇರಿ ಚಿನ್ಮಯಿ ಅವರಿಗೆ ಅವಕಾಶ ನೀಡಿರುವುದು ಅವರ ವೃತ್ತಿಜೀವನಕ್ಕೆ ಸಿಕ್ಕ ದೊಡ್ಡ ತಿರುವು ಎಂದೇ ವಿಶ್ಲೇಷಿಸಲಾಗುತ್ತಿದೆ. ಇದು ಕೇವಲ ಒಂದು ಹಾಡಲ್ಲ, ಬದಲಾಗಿ ಧ್ವನಿ ಎತ್ತಿದವರ ಹೋರಾಟಕ್ಕೆ ಸಂದ ಜಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಇತ್ತೀಚಿನ ಮಾಹಿತಿ ಪ್ರಕಾರ, ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ತಮಿಳುನಾಡಿನಲ್ಲಿ ಸೋಲು ಕಾಣುತ್ತಿದೆ. ಗೆಲ್ಲುವ ಯಾವುದೇ ಲಕ್ಷಣವೂ ಕಾಣಿಸುತ್ತಲ್ಲ ಎಂಬ ವರದಿ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಫಲಿತಾಂಶದ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!