Chandan Shetty ಕುತ್ತಿಗೆ ಮೇಲೆ ಬಂತು '14'ರ ಟ್ಯಾಟೂ! ಏನಿದು ಸಿಕ್ರೇಟ್​? ಕೊನೆಗೂ ಗುಟ್ಟು ರಿವೀಲ್​

Published : Jul 01, 2025, 10:19 PM IST
Chandan Shetty  about number 14

ಸಾರಾಂಶ

ಕನ್ನಡದ ರ್‍ಯಾಪರ್​ ಚಂದನ್​ ಶೆಟ್ಟಿ ಅವರ ಕುತ್ತಿಗೆಯ ಮೇಲೆ ರೋಮನ್​ ಸಂಖ್ಯೆಯ 14 ಎಂದು ಬರೆಯಲಾಗಿದೆ. ಏನಿದರ ಔಚಿತ್ಯ? ಸುವರ್ಣ ನ್ಯೂಸ್​ಗೆ ಅವರು ಕೊಟ್ಟಿರೋ ಸಂದರ್ಶನದಲ್ಲಿ ಏನು ಹೇಳಿದ್ದಾರೆ ನೋಡಿ... 

ನಟ, ಕನ್ನಡದ ರ್‍ಯಾಪರ್​ ಚಂದನ್​ ಶೆಟ್ಟಿ ಅವರ ಕುತ್ತಿಗೆಯ ಮೇಲೆ ರೋಮನ್​ ಸಂಖ್ಯೆಯ 14 ಎಂದು ಬರೆಯಲಾಗಿದೆ. ಇದರ ಹಿಂದೆ ದೊಡ್ಡ ಗುಟ್ಟೇ ಇದೆ. ಈ ಬಗ್ಗೆ ನಟ ಸುವರ್ಣ ನ್ಯೂಸ್​ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ರಿವೀಲ್​ ಮಾಡಿದ್ದಾರೆ. ಅಷ್ಟಕ್ಕೂ ಏನಿದು 14 ಎಂದು ಕೇಳಿದಾಗ, ಆರಂಭದಲ್ಲಿ ಚಂದನ್​ ಶೆಟ್ಟಿ ಅವರು ನಮ್ಮ ತಂದೆ-ತಾಯಿಗೆ 14 ಮಂದಿ ಮಕ್ಕಳು. ನಾನು 14ನೇಯವನು. ಎಲ್ಲಾ ಮಕ್ಕಳಿಗೂ ಹೀಗೆ 1,2,3 ಎಂದು ಬರೆಸಿದ್ದಾರೆ ಎಂದರು. ಅದು ಸೀರಿಯಸ್​ ಆಗಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಚಂದನ್​ ಶೆಟ್ಟಿ ಅವರು, ತಮಾಷೆಗೆ ಹೇಳಿದೆ ಎನ್ನುತ್ತಲೇ ಆ ಸಂಖ್ಯೆಯ ಗುಟ್ಟನ್ನು ರಿವೀಲ್​ ಮಾಡಿದ್ದಾರೆ.

ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ 14 ತಮ್ಮ ಲಕ್ಕಿ ನಂಬರ್​ ಎನ್ನುವುದು. ಹಲವಾರು ಮಂದಿ ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ಅದೇ ಪ್ರಕಾರ, ಚಂದನ್​ ಶೆಟ್ಟಿ ಅವರೂ 14ನೇ ನಂಬರ್​ ಅನ್ನು ಚಿಕ್ಕ ವಯಸ್ಸಿನಿಂದಲೂ ಲಕ್ಕಿ ನಂಬರ್​ ಎಂದು ನಂಬುತ್ತಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ಕೊಟ್ಟಿದ್ದಾರೆ. ಸ್ಕೂಲ್​ ಡೇಸ್​ನಲ್ಲಿ ಹೋಗುವಾಗಲೇ ಒಂದು ದಿನ ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ ಅದ್ಯಾಕೋ 14ನೇ ನಂಬರ್​ ಎಂದು ಹೇಳುತ್ತಿದ್ದರಂತೆ. ಅದ್ಯಾಕೆ ಆ ನಂಬರ್​ ಬಾಯಲ್ಲಿ ಬಂತೋ ಗೊತ್ತಿಲ್ಲ. ಆದರೆ ಅಂದಿನಿಂದ ಇಂದಿನವರೆಗೂ ಆ ನಂಬರ್​ ನನಗೆ ಲಕ್​ ತಂದುಕೊಡುತ್ತಿದೆ ಎಂದಿದ್ದಾರೆ. ಬಿಗ್​ಬಾಸ್​ನಲ್ಲಿ ತಮಗೆ ಕರೆ ಬಂದದ್ದೂ 14ನೇ ತಾರೀಖಿನಂದೇ ಆಗಿತ್ತು. ಅಲ್ಲಿ ವಿನ್​ ಆಗಿ ಬಂದೆ. ಹೀಗೆ ಜೀವನದಲ್ಲಿ ಹಲವಾರು ರೀತಿಯ ಲಕ್ಕಿ ದಿನ ಎಂದು ಇದು ಸಾಬೀತಾಗಿದೆ ಎಂದಿದ್ದಾರೆ.

ಇಂದು ಚಂದನ್​ ಶೆಟ್ಟಿ ಅವರ ಸಿನಿಮಾದ ಕುರಿತು ಹೇಳುವುದಾದರೆ, ಅವರು 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ಸಕತ್​ ಬಿಜಿಯಾಗಿರೋ ನಡುವೆಯೇ ಇದೀಗ ಮಾಜಿ ಪತ್ನಿ ನಿವೇದಿತಾ ಗೌಡ ಅವರ ಜೊತೆಗೆ ನಟಿಸಿದ್ದ ಮುದ್ದು ರಾಕ್ಷಸಿ ಚಿತ್ರದ ಶೂಟಿಂಗ್​ ಕೂಡ ಮುಗಿಸಿ ನಿರಾಳರಾಗಿದ್ದಾರೆ. ನಿವೇದಿತಾ ಜೊತೆಗಿನ ದಾಂಪತ್ಯ ಜೀವನವನ್ನು ಕೊನೆಗಾಣಿಸಿದ ಬಳಿಕ ಮತ್ತೆ ಕಮ್​ಬ್ಯಾಕ್​ ಆಗಿದ್ದು ನೋಡಿ ಫ್ಯಾನ್ಸ್​ಗೆ ಸಕತ್​ ಖುಷಿಯಾಗಿದೆ. ನಿವೇದಿತಾ ಅವರು ದಿನದಿಂದ ದಿನಕ್ಕೆ ಹಾಟ್​ ಆಗಿ ಕಾಣಿಸಿಕೊಂಡು ರೀಲ್ಸ್​ ಮಾಡುತ್ತಾ ನೆಗೆಟಿವ್​ ಕಮೆಂಟ್ಸ್​ಗಳನ್ನು ಎಂಜಾಯ್​ ಮಾಡುತ್ತಿದ್ದರೆ, ಇತ್ತ ಚಂದನ್​ ಶೆಟ್ಟಿ ತಮ್ಮ ಕರಿಯರ್​ನಲ್ಲಿ ಮುಂದುವರೆಯುತ್ತಿರುವ ಜೊತೆಗೆ ಈಗ ಮತ್ತೊಂದು ಮದ್ವೆಗೂ ಸಿದ್ಧರಾಗಿರುವುದಾಗಿ ಈಚೆಗಷ್ಟೇ ಹೇಳಿಕೊಂಡಿದ್ದರು. ಇವೆಲ್ಲವುಗಳ ಹೊರತಾಗಿಯೂ ಇವರಿಬ್ಬರೂ ಬೇರೆ ಬೇರೆ ಆಗಿದ್ದು ಏಕೆ ಎನ್ನುವ ಬಗ್ಗೆ ಇದುವರೆಗೂ ಅಭಿಮಾನಿಗಳಿಗೆ ತಿಳಿದಿಲ್ಲ. ಅದನ್ನು ಈ ಜೋಡಿ ಎಂದಿಗೂ ರಿವೀಲ್​ ಕೂಡ ಮಾಡಲಿಲ್ಲ.

ಇದೀಗ, ಸುವರ್ಣ ಚಾನೆಲ್​ಗೆ ಎಕ್ಸ್​ಕ್ಯೂಸಿವ್​ ಆಗಿ ಚಂದನ್​ ಶೆಟ್ಟಿ ಮಾತನಾಡಿದ್ದಾರೆ. ಇದರಲ್ಲಿ ತಮ್ಮ ಬದುಕಿನ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ. ಚಂದನ್​ ಶೆಟ್ಟಿ ಮತ್ತು ನಿವೇದಿತಾ ಎಂದು ಗೂಗಲ್​ನಲ್ಲಿ ಸರ್ಚ್​ ಮಾಡಿದ್ರೆ ನೂರಾರು ಚೆಂದದ ವಿಡಿಯೋಗಳು ಕಾಣಿಸುತ್ತವೆ, ಇಷ್ಟು ಖುಷಿಯಾಗಿದ್ದ ದಂಪತಿ ಏಕೆ ಬೇರೆಯಾದ್ರು ಎನ್ನೋದೇ ಎಲ್ಲರಿಗೂ ವಿಚಿತ್ರವಾಗಿದೆ ಎಂದಾಗ ಚಂದನ್​ ಶೆಟ್ಟಿ ಅವರು, ನಮ್ಮ ಸಂತೋಷ ಆ ವಿಡಿಯೋಗಷ್ಟೇ ಸೀಮಿತ ಆಗಿತ್ತು ಎಂದಿದ್ದಾರೆ. ಇದರ ಅರ್ಥ ಇವರಿಬ್ಬರ ಲೈಫ್​ನಲ್ಲಿ ಮೊದಲಿನಿಂದಲೂ ಅಸಮಾಧಾನ ಇತ್ತು, ಆದರೂ ಚಂದನ್​ ಶೆಟ್ಟಿ ಅವರು ನಾಲ್ಕು ವರ್ಷ ಹ್ಯಾಂಡಲ್ ಮಾಡುತ್ತಾ ಬಂದಿದ್ದರು ಎನ್ನುವುದು ತಿಳಿಯುತ್ತಿದೆ. ಇಂದಿಗೂ ಚೆಲ್ಲುಚೆಲ್ಲಾಗಿ ವರ್ತಿಸುವ ನಿವೇದಿತಾ ಗೌಡ ಅವರನ್ನು ಚಂದನ್​ ಶೆಟ್ಟಿ ನಾಲ್ಕು ವರ್ಷ ಎಷ್ಟು ಕಷ್ಟಪಟ್ಟು ಹ್ಯಾಂಡಲ್​ ಮಾಡಿರಬಹುದು ಎಂದು ಸದಾ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿರುತ್ತದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!