ಊಟಕ್ಕೆ ಉಪ್ಪಿನಕಾಯಿ, ರಿಮೋಟ್‌ಗೆ ಬ್ಯಾಟರಿಯಾದ ಲೇಡಿ ಸ್ಪರ್ಧಿ!

By Web DeskFirst Published Nov 16, 2018, 10:32 PM IST
Highlights

ಬಿಗ್ ಬಾಸ್ ಮನೆಗೆ ರೈತ ಶಶಿ ನಾಯಕರಾಗಿದ್ದಾರೆ.  ಮನೆಯಲ್ಲಿ ಕೋಪ-ತಾಪ ಮುನಿಸಸು ಒಳಗೊಳಗೆ ಕುದಿಯುತ್ತಿದ್ದು ಎಲ್ಲರಿಗೂ ಶನಿವಾರದ ಎಲಿಮಿನೇಶನ್ ಬಿಸಿ ಶುರುವಾಗಿದೆ.

ಅತಿ ಹೆಚ್ಚು ಸಾರಿ ಬಣ್ಣ ಬಳಿದ ಶಶಿ ಹೊಸ ನಾಯಕರಾಗಿ ಆಯ್ಕೆಯಾದರು.  ಕ್ಯಾಪ್ಟನ್‌ ಶಶಿ ಮಾಡಿದ ಕಿಚನ್‌ ತಂಡ, ಸ್ವಚ್ಛ ತಂಡದ ಬಗ್ಗೆ ಸ್ಪರ್ಧಿಗಳ ನಡುವೆ ಭಾರಿ ಚರ್ಚೆ ನಡೆಯಿತು. ಈ ನಡುವೆ ರವಿ ಅವರಿಗೆ ಜವಾಬ್ದಾರಿ ನೀಡಲು ಮುಂದಾದರೂ ಅವರು ನನಗೆ ಉಪನಾಯಕತ್ವ  ಬೇಡ  ಎಂದು ದೂರ ಸರಿದರು.

ಆಹಾರ ವಸ್ತು ಗೆಲ್ಲಲು ಬಿಗ್ ಬಾಸ್ ವಿಶೇಷ ಟಾಸ್ಕ್ ನೀಡಿದ್ದರು. ಗೋಲು ಹೊಡೆಯುವ ಚಟುವಟಿಕೆಯಲ್ಲಿ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ರವಿ, ಶಶಿ ಸೇರಿದಂತೆ ಕೆಲವರು ಮಾತ್ರ ಚೆಂಡನ್ನು ಸೇರಿಸಿ ಚಿಕನ್ , ಮಟನ್ ಗೆದ್ದುಕೊಟ್ಟರು. ಸಸ್ಯಹಾರಿಗಳಿಗೆ ನಿರಾಸೆ ಕಾದಿತ್ತು.

ಬಿಗ್ ಬಾಸ್ ಮನೆಯ ಸಕಲ ಕತೆ

ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಕೊಂಕು ಮತ್ತು ಕುಹಕದ ಮಾತುಗಳೇ ಜೋರಾಗಿದ್ದವು. ಕವಿತಾ ಗೌಡ ಅವರನ್ನು ಊಟಕ್ಕೆ ಬೇಕಾದ ಉಪ್ಪಿನಕಾಯಿ, ರಿಮೋಟ್ ಗೆ ಬ್ಯಾಟರಿ ಎಂದು ಆ್ಯಂಡಿ ಅಣಕವಾಡಿದರು. 

ಇನ್ನೊಂದು ಕಡೆ ಜೈಲಿನಲ್ಲಿದ್ದ ಧನರಾಜ್ ನಾನು ಗೆಲ್ಲುವುದಕ್ಕಾಗೆ ಆಡುತ್ತಿದ್ದೇನೆ. ನಾಳೆಯಿಂದ ಗೇಮ್ ಪ್ಲಾನ್ ಬದಲಾಗುತ್ತದೆ ಎಂದರು. ರಶ್ಮಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗೋಲು ಹೊಡೆದಿದ್ದು ಹೊರಗೆ ಹೋದಾಗ ಜಯಶ್ರೀ ಅಣಕವಾಡಿದರು.

 

click me!