ಬಿಗ್‌ಬಾಸ್‌ ಮನೆಗೆ ಉತ್ತರ ಕರ್ನಾಟಕದ ನಾಯಕಿ, ಆರದ ಬೆಂಕಿ!

Published : Nov 09, 2018, 10:41 PM ISTUpdated : Nov 09, 2018, 10:44 PM IST
ಬಿಗ್‌ಬಾಸ್‌ ಮನೆಗೆ ಉತ್ತರ ಕರ್ನಾಟಕದ ನಾಯಕಿ, ಆರದ ಬೆಂಕಿ!

ಸಾರಾಂಶ

ಮನೆಗೆ ಹೊಸ ನಾಯಕನ ಆಯ್ಕೆಯಾಗಿದೆ. ಹೆಣ್ಣು ಮಗಳೊಬ್ಬಳು ಈ ಆವೃತ್ತಿಯಲ್ಲಿ ಮೊದಲ ಸಾರಿ ನಾಯಕತ್ವ ವಹಿಸಿಕೊಂಡಿದ್ದಾರೆ. ಮನೆಯಲ್ಲಿ ಎಲಿಮಿನೇಶನ್ ಒತ್ತಡ ಶುರುವಾಗಿದ್ದು ಕಿಚ್ಚನೊಂದಿಗೆ ಮಾತನಾಡುವುದು ಹೇಗೆ ಎಂಬ ಪ್ರಶ್ನೆ ಎಲ್ಲರ  ತಲೆಯಲ್ಲಿ ತಿರುಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಅವರಿಗೆ ಹಾಡಿನ ನಮನ ಸಲ್ಲಿಸಲಾಯಿತು. ಬಾಡಿ ಬಿಲ್ಡರ್ ರವಿಗೆ ಹೊಸ ಕೇಶ ವಿನ್ಯಾಸ ಮಾಡಿದ್ದು ಶುಕ್ರವಾರ ಹೈಲೈಟ್. ರವಿ ಅವರ ಲುಕ್ ಡಿಫರೆಂಟಾಗಿ ಹೊರಬಂತು.

ನಂತರ ನಾಯಕನ ಆಯ್ಕೆ ಕುರಿತು ಕೆಲವು ಟಾಸ್ಕ್‌ಗಳನ್ನು ನೀಡಲಾಯಿತು. ಬಾಕ್ಸ್‌ನಲ್ಲಿ ಮರಳು ತುಂಬಿಸಿ ಅದನ್ನು ತೆಗೆಯುವ ಸವಾಲು ಹಾಕಲಾಯಿತು. ಆದರೆ ಆನಂದ ನಾಯಕನಾಗುವ ಅವಕಾಶ ಕಳೆದುಕೊಂಡರು. 

ಬಾಕ್ಸ್‌ಗೆ ಮರಳು ತುಂಬಿಸುವ ಹಾಗೂ ಅದನ್ನು ತೆಗೆಯುವ ಟಾಸ್ಕ್‌ನಲ್ಲಿ ಗೆದ್ದ ಸೋನು ಪಾಟೀಲ್‌ ಮನೆಯ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾದರು.  ನಂತರ ಕೆಲವು ಚರ್ಚೆ ನಡೆಯಿತು. ಆ ನಂತರ ಕ್ಯಾಪ್ಟನ್‌ ಸೋನು, ಅಡುಗೆ ಮಾಡುವ ತಂಡವನ್ನು ಆಯ್ಕೆ ಮಾಡಿದರು. ಶೌಚಾಲಯ ಸ್ವಚ್ಛಗೊಳಿಸಲು ಮನೆ ಸ್ಪರ್ಧಿಗಳಿಗೆ ಜವಾಬ್ದಾರಿ ನೀಡಿದರು.

ಅಕ್ಷತಾ ಮತ್ತು ರಾಕೇಶ್ ನಮ್ಮ ನಡುವೆ ಪ್ರೀತಿ-ಪ್ರೇಮ ಇಲ್ಲ. ಜಸ್ಟ್ ಸ್ನೇಹಿತರು ಎಂದು ಪದೇ ಪದೇ ಹೇಳಿದರು. ಈಜುಕೋಳದಲ್ಲಿ ಆ್ಯಂಡಿ ಧುಮುಕಿ ಮೇಲೆದ್ದರು. ಆದರೆ ಉತ್ತರ ಕರ್ನಾಟಕದ ಹುಡುಗಿ ಬಿಗ್ ಬಾಸ್ ಮನೆಗೆ ನಾಯಕಿಯಾದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!