AR Rahman: 20 ವರ್ಷವಾದ್ರೂ ಬದಲಾಗದ ಮ್ಯಾಜಿಕ್, ಪ್ರತಿ ಸ್ಟೇಜ್‌ನಲ್ಲೂ ಅದೇ ಹಾಡು: ರೆಹಮಾನ್‌ರ ಸಿಗ್ನೇಚರ್ ಗೀತೆ!

Published : Mar 25, 2026, 06:37 PM IST
AR Rahman

ಸಾರಾಂಶ

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಾವು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಂದು ನಿರ್ದಿಷ್ಟ ಹಾಡನ್ನು ತಪ್ಪದೇ ಹಾಡುತ್ತಾರೆ. ಆ ಹಾಡಿನ ಹಿಂದಿರುವ ಸೆಂಟಿಮೆಂಟ್ ಮತ್ತು ರಹಸ್ಯವೇನು ಗೊತ್ತಾ?

ಸಂಗೀತ ದಿಗ್ಗಜ ಎ.ಆರ್. ರೆಹಮಾನ್ ತಮ್ಮ ಸಂಗೀತದಿಂದ ಇಡೀ ಜಗತ್ತನ್ನೇ ಹಿಡಿದಿಟ್ಟಿದ್ದಾರೆ. ಆದರೂ, ಅವರು ಪ್ರಶಸ್ತಿ ಸಮಾರಂಭ, ಸಂಗೀತ ಕಛೇರಿ, ಸಂದರ್ಶನ ಅಥವಾ ಕ್ರಿಕೆಟ್ ಮೈದಾನ ಹೀಗೆ ಯಾವುದೇ ವೇದಿಕೆ ಏರಲಿ, ಒಂದು ನಿರ್ದಿಷ್ಟ ಹಾಡನ್ನು ಹಾಡದೆ ಅಥವಾ ಅದರ ಬಗ್ಗೆ ಮಾತನಾಡದೆ ಇರುವುದೇ ಇಲ್ಲ. ಅವರು ಪ್ರತಿಯೊಂದು ವೇದಿಕೆಯಲ್ಲೂ ಹಾಡುವ ಆ ಹಾಡು ಯಾವುದು ಮತ್ತು ಅದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ.

ಆ ಹಾಡು ಬೇರೆ ಯಾವುದೂ ಅಲ್ಲ; 'ವಂದೇ ಮಾತರಂ' ಮತ್ತು 'ಎಲ್ಲಾ ಪುಗಲ್ ಇರೈವನುಕ್ಕೇ' ಎಂಬ ತಾರಕ ಮಂತ್ರ. 2009ರಲ್ಲಿ ಆಸ್ಕರ್ ವೇದಿಕೆಯಲ್ಲಿ ಅವರು ಹೇಳಿದ "ಎಲ್ಲಾ ಪುಗಲ್ ಇರೈವನುಕ್ಕೇ" (ಎಲ್ಲಾ ಹೊಗಳಿಕೆ ದೇವರಿಗೆ) ಎಂಬ ಮಾತು ಇಂದಿಗೂ ಅವರ ಗುರುತಾಗಿದೆ. ಅದೇ ರೀತಿ, ರೆಹಮಾನ್ ತಮ್ಮ ಪ್ರತಿಯೊಂದು ಕಛೇರಿಯ ಕೊನೆಯಲ್ಲೂ 'ವಂದೇ ಮಾತರಂ' ಹಾಡುವುದನ್ನು ರೂಢಿಸಿಕೊಂಡಿದ್ದಾರೆ. ಇದು ದೇಶಭಕ್ತಿಯನ್ನು ಮೀರಿ, ಆ ಹಾಡಿಗೂ ಅವರಿಗೂ ಇರುವ ಆತ್ಮೀಯ ಸಂಬಂಧವನ್ನು ತೋರಿಸುತ್ತದೆ.

ಪಾಸಿಟಿವ್ ಎನರ್ಜಿ

"ಕೆಲವು ಹಾಡುಗಳು ನನ್ನನ್ನು ಆಧ್ಯಾತ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಬಲಪಡಿಸುತ್ತವೆ. ವೇದಿಕೆಯಲ್ಲಿ ಆ ಹಾಡುಗಳನ್ನು ಹಾಡಿದಾಗ ನನಗೆ ಒಂದು ರೀತಿಯ ಪಾಸಿಟಿವ್ ಎನರ್ಜಿ ಸಿಗುತ್ತದೆ" ಎಂದು ರೆಹಮಾನ್ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೇ ಕಾರಣಕ್ಕೆ ಎಷ್ಟೇ ಹೊಸ ಹಾಡುಗಳು ಬಂದರೂ, ಅವರು ಆ ಹಳೆಯ ಮ್ಯಾಜಿಕ್ ಅನ್ನು ಬಿಟ್ಟುಕೊಡುವುದಿಲ್ಲ.

ಹೀಗೆಯೇ 'ವಂದೇ ಮಾತರಂ', 'ಮುಸ್ತಫಾ', 'ಅಡಂಗಾದ ಅಸುರನ್', 'ಸಿಂಗಪೆಣ್ಣೆ' ಮುಂತಾದ ಹಾಡುಗಳನ್ನು ಹಲವು ವೇದಿಕೆಗಳಲ್ಲಿ ಹಾಡುವುದನ್ನು ರೂಢಿಸಿಕೊಂಡಿದ್ದಾರೆ. ಇತ್ತೀಚೆಗೆ ಚೆನ್ನೈನ ಚೇಪಾಕ್ ಕ್ರೀಡಾಂಗಣದಲ್ಲಿ ನಡೆದ ಸಿಎಸ್‌ಕೆ ತಂಡದ 'ROAR 2026' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎ.ಆರ್. ರೆಹಮಾನ್, 'ಮುಸ್ತಫಾ' ಹಾಡನ್ನು ಹಾಡಿ ಇಡೀ ಕ್ರೀಡಾಂಗಣದಲ್ಲಿದ್ದ ಸಿಎಸ್‌ಕೆ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇವು ಕನ್ನಡದ Hidden Gems… ತಮ್ಮ ಕಾಲಘಟ್ಟಕ್ಕಿಂತ ತುಂಬಾನೆ ಮುಂದಿತ್ತು ಈ ಕನ್ನಡ ಸಿನಿಮಾಗಳು
ನನ್ನ ಲವ್ ಲೆಟರ್‌ಗಳನ್ನೆಲ್ಲಾ ಅಪ್ಪ-ಅಮ್ಮ ಸುಟ್ಟು ಹಾಕಿದ್ರು: ನೋವಿನ ಕಥೆ ಬಿಚ್ಚಿಟ್ಟ ನಟಿ ಭಾಗ್ಯಶ್ರೀ