ಬಾರಯ್ಯ ಅಂದ್ರೆ ಬರಬೇಕು ಅಂತ ದರ್ಶನ್’ಗೆ ಗದರಿದ್ದು ಯಾರು ಗೊತ್ತಾ?

Published : Jun 23, 2018, 12:52 PM IST
ಬಾರಯ್ಯ ಅಂದ್ರೆ ಬರಬೇಕು ಅಂತ ದರ್ಶನ್’ಗೆ ಗದರಿದ್ದು ಯಾರು ಗೊತ್ತಾ?

ಸಾರಾಂಶ

ಗಣ್ಯರು ವೇದಿಕೆ ಮೇಲೆ ಕೂತಿದ್ದರು. ಆಗ ದರ್ಶನ್ ಅವರನ್ನೂ ವೇದಿಕೆ ಮೇಲೆ ಆಹ್ವಾನಿಸಿದರು. ಆದರೆ ದರ್ಶನ್ ಬರಲಿಲ್ಲ. ಆಗ ‘ಎಲ್ಲಿದ್ದಿಯಾಪ್ಪ ಎದ್ ಬಾ...’ ಎಂದು ದೊಡ್ಡ ಧ್ವನಿ ಸದ್ದು ಮಾಡಿತು. 

ಗಣ್ಯರು ವೇದಿಕೆ ಮೇಲೆ ಕೂತಿದ್ದರು. ಆಗ ದರ್ಶನ್ ಅವರನ್ನೂ ವೇದಿಕೆ ಮೇಲೆ ಆಹ್ವಾನಿಸಿದರು. ಆದರೆ ದರ್ಶನ್ ಬರಲಿಲ್ಲ. ಆಗ ‘ಎಲ್ಲಿದ್ದಿಯಾಪ್ಪ ಎದ್ ಬಾ...’ ಎಂದು ದೊಡ್ಡ ಧ್ವನಿ ಸದ್ದು ಮಾಡಿತು. ಆ ಧ್ವನಿ ಅಂಬರೀಶ್ ಅವರದ್ದೇ. ಎದ್ದು ನಿಂತು ‘ಬೇಡ ಬೇಡ ಇಲ್ಲೇ ಕೂರುತ್ತೇನೆ’ ಎಂದರು ದರ್ಶನ್.

‘ಬಾರಯ್ಯ ಅಂದ್ರೆ ಬರಬೇಕ್...’ ಎಂದು ತಮ್ಮದೇ ಸ್ಟೈಲಿನಲ್ಲಿ ಗದರಿದರು. ತಕ್ಷಣ ದರ್ಶನ್ ವೇದಿಕೆ ಏರಿ ಬಂದರು. ಬಂದವರು ಮತ್ತೆ ವಾಪಸ್ಸು ಹೋಗುತ್ತೇನೆ ಎಂದಾಗ ‘ಸುಮ್ಮನೆ ಕುತ್ಕೋಬೇಕು. ಹೇಳಿದ್ ಮಾತು ಕೇಳು, ಅಷ್ಟೆ’ ಎಂದು ಮತ್ತೆ ಜೋರು ಮಾಡಿದರು. ದರ್ಶನ್ ಮತ್ತು ಅಂಬರೀಶ್ ಅವರ ಈ ಮಾತುಗಳನ್ನು ಕೇಳಿ ಇಡೀ ಸಭೆಯಲ್ಲಿ ನಗೆ. ಸ್ವತಃ ಕುಮಾರಸ್ವಾಮಿ ಕೂಡ ನಕ್ಕರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತಪ್ಪು ಮಾಡಿ, ತಾಯಾಣೆ ನಾನ್ ಮಾಡಿಲ್ಲ ಎಂದ ರಕ್ಷಿತಾ; ಸಾಕ್ಷಿ ಕೊಟ್ರು Bigg Boss
BBK 12: ಅಯ್ಯೋ ಭಗವಂತ ಇದೇನಿದು? ಮನದಲ್ಲಿದ್ದ ಮಾತು ಬಿಚ್ಚಿಟ್ಟ ಚೈತ್ರಾ; ರಜತ್ ಶಾಕ್!