ಸಾಕಪ್ಪ ಸಾಕು, ಮುಂಬೈಗೆ ಯಾರೂ ಹೋಗ್ಬೇಡಿ ಎಂದ ನಟಿ

Published : Jul 03, 2019, 12:28 PM ISTUpdated : Jul 03, 2019, 12:32 PM IST
ಸಾಕಪ್ಪ ಸಾಕು, ಮುಂಬೈಗೆ ಯಾರೂ ಹೋಗ್ಬೇಡಿ ಎಂದ ನಟಿ

ಸಾರಾಂಶ

'ಗಂಡ-ಹೆಂಡತಿ' ಚಿತ್ರದ ಫೇಮ್ ಸಂಜನಾ ಗರ್ಲಾನಿ ವಿಮಾನದಲ್ಲಿ ಮುಂಬೈಗೆ ತೆರಳುವಾಗ ವರುಣನ ಆರ್ಭಟದಿಂದ ತತ್ತರಿಸಿ ಹೋಗಿದ್ದಾರೆ. ಕೆಟ್ಟ ಘಟನೆ ನೆನೆದು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ ಎಂಬ ವಾಣಿಜ್ಯ ನಗರಿ ವರುಣ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಸುಮಾರು 40 ಮಂದಿ ಮಳೆಯಿಂದ ಸಂಭವಿಸಿದ ಅವಘಡಕ್ಕೆ ಅಸುನೀಗಿದ್ದಾರೆ. ಇಂಥ ಮಳೆಯಲ್ಲಿ ಅಲ್ಲಿಗ್ ಹೊರಟಿದ್ದ ಸ್ಯಾಂಡಲ್‌ವುಡ್ ಸ್ಟೈಲಿಶ್ ನಟಿ ಸಂಜನಾ ಗರ್ಲಾನಿಗೆ ಸಾಕಪ್ಪ ಸಾಕು, ಈ ಮುಂಬೈ ಸಹವಾಸ ಎನ್ನುವಂತಾಗಿದೆ. ಈ ಘಟನೆಯನ್ನು ಸಾರ್ವಜನಿಕರೊಂದಿಗೆ IGTV ವಿಡಿಯೋ ಮೊಲಕ ಅನುಭವ ಹಂಚಿಕೊಂಡು, ಜನರಲ್ಲಿ ಮುಂಬೈಗೆ ಹೋಗದಂತೆ ಮನವಿ ಮಾಡಿಕೊಂಡಿದ್ದಾರೆ.

ಬೆಳಗ್ಗೆ 8 ಗಂಟೆಗಿದ್ದ ಫ್ಲೈಟ್ ಹಿಡಿಯಲು ಸಂಜನಾ ಇಂದಿರಾ ನಗರ ಮನೆಯಿಂದ ಬೆಳಗ್ಗೆ 5.30ಕ್ಕೇ ಬಿಟ್ಟಿದ್ದರು. ಎಂಥದ್ದೂ ಸಮಸ್ಯೆ ಆಗದಂತೆ ಮುಂಜಾಗರೂಕರಾಗಿದ್ದರು. ಆದರೆ, ಮುಂಬೈ ಮಳೆ ಕೊಟ್ಟ ಕಾಟ ಮಾತ್ರ ಅಷ್ಟಿಷ್ಟಲ್ಲ.

ಸ್ಯಾಂಡಲ್‌ವುಡ್ ಇನ್ನೊಬ್ಬ ನಟಿಯಿಂದ #MeToo ಆರೋಪ

ಒಂದು ವಾರದಿಂದ ಮುಂಬೈಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಈ ಮಳೆಗಾಲದಲ್ಲಿ ಮಾತ್ರ ಮುಂಬೈಗೇ ಹೋಗಲೇ ಬಾರದು ಎನಿಸುುಂತಾಗಿದೆಯಂತೆ! ಜೋರು ಮಳೆ ಇದ್ದ ಕಾರಣ 8ಕ್ಕೆ ಹೊರಡಬೇಕಾದ ವಿಮಾನ ಮಧ್ಯಾಹ್ನ 12ಕ್ಕೆ ಹೊರಟಿತು. ಅದಕ್ಕೂ ಹಿಂದೆ ಹೋದ ವಿಮಾನ ಲ್ಯಾಂಡ್ ಆಗಲು ಸಮಸ್ಯೆಯಾಗಿ, ಉಳಿದ ವಿಮಾನಗಳ ಹಾರಾಟವೂ ಸಾಧ್ಯವಾಗಿರಲಿಲ್ಲ. ಲೇಟಾಗಿ ಹೊರಟರೂ ಮುಂಬೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಾತ್ರ ಇಳಿದಿದ್ದು ಹೈದರಾಬಾದ್‌ನಲ್ಲಂತೆ!

ಸರಿ ಎಲ್ಲೊ ವಿಮಾನ ನಿಲ್ತಲ್ಲ, ಸಾಕು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ಮತ್ತೊಂದು ಆಘಾತ ಈ ಪ್ರಯಾಣಿಕರಿಗೆ ಕಾದಿತ್ತಂತೆ. ಯಾರಿಗೂ ಲಗ್ಗೇಜ್ ಬರಲೇ ಇಲ್ವಂತೆ! ಹೈದರಾಬಾದ್‌ನಿಂದ ತಾವು ಸೇರಬೇಕದ ಸ್ಥಳಕ್ಕೆ ತಲುಪಲು ಸ್ವಂತ ಖರ್ಚಿನಲ್ಲಿಯೇ ವ್ಯವಸ್ಥೆ ಮಾಡಿಕೊಂಡರೂ ಎಲ್ಲವೂ ಅವ್ಯವಸ್ಥೆಯಿಂದ ಕೂಡಿತ್ತಂತೆ. ಮಳೆಯಿಂದ ಸಂಬಂಧಿಸಿದ ವಿಮಾನ ಕಂಪನಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲವೆಂದು ನೋವು ತೋಡಿಕೊಂಡಿದ್ದಾರೆ. ಏನಕ್ಕೂ ಹುಷಾರಾಗಿರಿ ಎಂದು ಜನರಿಗೆ ಮನವಿ ಮಾಡಿದ್ದಾರೆ ಸಂಜನಾ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ
ಅಂದು ಕನ್ನಡಿಗರ ಕೆಣಕಿದ್ದ ಕರಾವಳಿ ಹುಡುಗಿ ಇಂದು ಮನೆಮಗಳು ಆಗಿದ್ದು ಹೇಗೆ? ಸೀಕ್ರೆಟ್ ಸ್ಟ್ರಾಟಜಿ ಏನು?