
ಕನ್ನಡದ ಜತೆಗೆ ಮರಾಠಿಯಲ್ಲೂ ನಿರ್ಮಾಣವಾಗುತ್ತಿರುವ ಈ ಚಿತ್ರವಿದು. ವಿಶೇಷ ಅಂದ್ರೆ, ಚಿತ್ರದ ಬಹುತೇಕ ಕತೆ ರಾಜಸ್ಥಾನ್ ಸುತ್ತ ಮುತ್ತ ನಡೆಯಲಿದೆಯಂತೆ. ಅದಕ್ಕಾಗಿಯೇ ಚಿತ್ರತಂಡ ಚಿತ್ರೀಕರಣಕ್ಕಾಗಿ ಅಲ್ಲಿಗೆ ತೆರಳಿದೆ. ಆದರೆ ಬಿಸಿಲು ಝಳಕ್ಕೆ ಚಿತ್ರತಂಡವನ್ನು ಕಂಗಲಾಗಿಸಿದೆಯಂತೆ. ‘ಇಲ್ಲಿ ಬಿಸಿಲು ಜಾಸ್ತಿಯೇ ಇದೆ. ಬಿಸಿಲು ಝಳಕ್ಕೆ ಹೊರಬರಲು ಸಾಧ್ಯವೇ ಆಗುತ್ತಿಲ್ಲ. ಆದರೂ ನಿಗಧಿತ ಅವಧಿಯಲ್ಲಿ ಚಿತ್ರೀಕರಣ ಮುಗಿಸಲೇಬೇಕಿದೆ. ಸುಡುವ ಬಿಸಿಲಿಗೂ ಕ್ಯಾರೆ ಎನ್ನದೇ ಚಿತ್ರೀಕರಣ ಮಾಡುತ್ತಿದ್ದೇವೆ. ಒಂಥರ ನನಗಿದು ಹೊಸ ಅನುಭವವೇ ಆಗಿದೆ. ಇಡೀ ತಂಡವೇ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ಜೈ ಸಲ್ಮೇರದ ಕೋಟೆ ಕೊತ್ತಲುಗಳು, ಅರಮನೆಗಳಲ್ಲಿ ಸುತ್ತಾಡುವುದೇ ಒಂಥರ ಮಜಾ ಎನಿಸುತ್ತಿದೆ’ ಎನ್ನುತ್ತಾರೆ ಮಾನ್ವಿತಾ.
ಕನ್ನಡದವರೇ ಆದ ಮುಂಬೈ ನಿವಾಸಿ ನಂದಿತಾ ಯಾದವ್ ನಿರ್ದೇಶನದ ಚಿತ್ರವಿದು. ಹಿಂದಿ ಹಾಗೂ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ಕತೆಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು, ತಮ್ಮ ಪುತ್ರ ಸುಮುಖ ಅವರನ್ನು ಕನ್ನಡದ ಜತೆಗೆ ಮರಾಠಿಗೂ ಹೀರೋ ಆಗಿ ಪರಿಚಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರದ ಮತ್ತೊಂದು ವಿಶೇಷ.
ಮಾನ್ವಿತಾ ಹರೀಶ್ ಮುಂಬೈ ನಂಟಿನ ರಹಸ್ಯ ಬಯಲು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.