ನೀವು ನೆಮ್ಮದಿಯಿಂದ ಇರಬೇಕಾ? ಹಾಗಾದರೆ ಕಾಜೋಲ್ ಪ್ರಕಾರ ಹೀಗೆ ಮಾಡಬೇಕಂತೆ!

Published : Jun 25, 2018, 01:50 PM IST
ನೀವು ನೆಮ್ಮದಿಯಿಂದ ಇರಬೇಕಾ? ಹಾಗಾದರೆ ಕಾಜೋಲ್ ಪ್ರಕಾರ ಹೀಗೆ ಮಾಡಬೇಕಂತೆ!

ಸಾರಾಂಶ

ಯಾರೋ ಅನಾಮಿಕರು ಅವರ ಬಳಿ ಸೌಂದರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡು ‘ಹುಟ್ಟುತ್ತ ಎಲ್ಲರೂ ಸುಂದರವಾಗಿಯೇ ಇರುತ್ತಾರೆ. ನಾವು ನಮ್ಮನ್ನು ಕನ್ನಡಿಯ ಮುಂದೆ ನೋಡುವುದಕ್ಕಿಂತಲೂ ಮೊದಲಿಗೆ ನಮ್ಮನ್ನು ಈ ಸಮಾಜ ಕಂಡಿರುತ್ತದೆ. ಅವರವರ ಪಾಲಿಗೆ ಎಲ್ಲರೂ ಸುಂದರವಾಗಿಯೇ ಕಾಣುವುದರಿಂದ ಮತ್ತೊಬ್ಬರ ಸೌಂದರ್ಯದ ಬಗ್ಗೆ ನಾವು ಅಸೂಯೆಪಟ್ಟುಕೊಳ್ಳಬಾರದು. ಇದು ನಾನು ಸ್ವತಃ ಕಲಿತ ಪಾಠ.

ನೀವು ನೆಮ್ಮದಿಯಿಂದ ಇರಬೇಕಾ? ಹೌದು ಎಂದಾದರೆ ಈ ಎರಡು ಕೆಲಸ ಮಾಡಿ ಸಾಕು. ಒಂದು ಮತ್ತೊಬ್ಬರ ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇನ್ನೊಂದು ಯಾವಾಗೂ  ಬ್ಯುಸಿಯಾಗಿರಿ. ಹೀಗೆ ಬಾಲಿವುಡ್ ಮಂದಿಗೆ ಅದರಲ್ಲೂ ಮುಖ್ಯವಾಗಿ ನಟಿಯರಿಗೆ ಟಿಪ್ಸ್ ಕೊಟ್ಟಿರುವುದು ಕಾಜೊಲ್.

ಕಾಜೊಲ್ ಹೀಗೆ ಹೇಳಲು ಕಾರಣ ಯಾರೋ ಅನಾಮಿಕರು ಅವರ ಬಳಿ ಸೌಂದರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡು ‘ಹುಟ್ಟುತ್ತ ಎಲ್ಲರೂ ಸುಂದರವಾಗಿಯೇ ಇರುತ್ತಾರೆ. ನಾವು ನಮ್ಮನ್ನು ಕನ್ನಡಿಯ ಮುಂದೆ ನೋಡುವುದಕ್ಕಿಂತಲೂ ಮೊದಲಿಗೆ ನಮ್ಮನ್ನು ಈ ಸಮಾಜ ಕಂಡಿರುತ್ತದೆ.  ಅವರವರ ಪಾಲಿಗೆ ಎಲ್ಲರೂ ಸುಂದರವಾಗಿಯೇ ಕಾಣುವುದರಿಂದ ಮತ್ತೊಬ್ಬರ ಸೌಂದರ್ಯದ ಬಗ್ಗೆ ನಾವು ಅಸೂಯೆಪಟ್ಟುಕೊಳ್ಳಬಾರದು. ಇದು ನಾನು ಸ್ವತಃ ಕಲಿತ ಪಾಠ.

ಮತ್ತೊಂದು ನೀನು ಯಾವಾಗಲೂ ಬ್ಯುಸಿಯಾಗಿದ್ದರೆ ಕೆಟ್ಟ ಯೋಜನೆಗಳು ಹತ್ತಿರ ಸುಳಿಯುವುದಿಲ್ಲ. ಹಾಗಾಗಿ ಏನಾದರೂ ಕೆಲಸ ಮಾಡುತ್ತಲೇ ಇರು. ಏನೂ ಕೆಲಸ ಇಲ್ಲದಿದ್ದರೆ ಒಂದು ವಸ್ತುವನ್ನು ಹತ್ತು ಬಾರಿ
ಅತ್ತಿಂದ ಇತ್ತ, ಇತ್ತಿಂದ ಅತ್ತ ಎತ್ತಿಡು. ಒಟ್ಟಿನಲ್ಲಿ ಏನಾದರೊಂದು ಕೆಲಸ ಮಾಡುತ್ತಲೇ ಇರು ಎಂದು ನನ್ನ ಮನೆಯವರು ಕಲಿಸಿಕೊಟ್ಟಿದ್ದಾರೆ. ಇವರೆಡರಿಂದಲೇ ನಾನು ನೆಮ್ಮದಿಯಿಂದ ಇದ್ದೇನೆ’ ಎಂದು ತಮ್ಮ ನೆಮ್ಮದಿಯ ಗುಟ್ಟು ಹೇಳುವ ಮೂಲಕ ಕೆಲವು ನಟಿಯರಿಗೆ ಟಾಂಗ್  ನೀಡುವ ಕೆಲಸವನ್ನೂ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕನ್ನಡದ ಖ್ಯಾತ ನಟನಿಗೆ 'ವಾರಣಾಸಿ' ಚಿತ್ರದಲ್ಲಿ ಅವಕಾಶ ಕೊಟ್ಟ ರಾಜಮೌಳಿ: ಯಾರು ಆ ಸ್ಟಾರ್?
Karna Serial: ವೀಕ್ಷಕರು ಬೇಡ ಅಂದದ್ದೇ ಆಗೋಯ್ತು! ತೇಜಸ್​ ಎದುರೇ ನಡೆದು ಹೋಯ್ತಾ ಕರ್ಣ- ನಿತ್ಯಾಳ ಮದುವೆ?