ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ: ಒಂದು 'ಟೀಂ'ಇತ್ತು ಹತ್ರ!

By Bindushree NFirst Published Apr 26, 2019, 11:48 AM IST
Highlights

ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ| ನಾಮಪತ್ರ ಸಲ್ಲಿಕೆ ವೆಳೆ ಎನ್‌ಡಿಎ ನಾಯಕರ ದಂಡು| ಪ್ರಧಾನಿ ಮೋದಿಗೆ ಸಾಥ್ ನೀಡಿದ ಪ್ರಮುಖ ನಾಯಕರು| ವಾರಾಣಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ| ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತು| ಕೆಸರಲ್ಲಿ ಕಮಲ ಅರಳಿಸುವುದು ಹೇಗೆಂದು ನನಗೆ ಗೊತ್ತು ಎಂದ ಪ್ರಧಾನಿ| ಮೋದಿ ನಾಮಪತ್ರ ಸಲ್ಲಿಕೆಗೆ ಸೂಚಕರಾಗಿ ಪ್ರಮುಖರ ಸಹಿ|

ವಾರಾಣಸಿ(ಏ.26): ನಿನ್ನೆಯಷ್ಟೇ(ಏ.25) ಸ್ವಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

: PM Narendra Modi files nomination from Varanasi parliamentary constituency. pic.twitter.com/ym9x2gCYYG

— ANI UP (@ANINewsUP)

: PM Narendra Modi files nomination from Varanasi parliamentary constituency. pic.twitter.com/V0RX2otJUv

— ANI UP (@ANINewsUP)

ವಾರಾಣಸಿಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರಧಾನಿ, ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೋದಿ ಅವರನ್ನು ಬೆಂಬಲಿಸಿ ಎನ್‌ಡಿಎ ನಾಯಕರ ದಂಡೇ ನೆರೆದಿದ್ದು ವಿಶೇಷ.

Varanasi: Prime Minister Narendra Modi arrives at Collectorate office to file his nomination from Varanasi parliamentary constituency, meets NDA leaders present there pic.twitter.com/WlPYiobUIP

— ANI UP (@ANINewsUP)

ಮೋದಿ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದ ಪ್ರಮುಖರು:

ಬಿಹಾರ ಸಿಎಂ ನಿತೀಶ್ ಕುಮಾರ್

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ

ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್

ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್

ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಡ್ನವೀಸ್

ಅಸ್ಸಾಂ ಸಿಎಂ ಸೊರ್ಬಾನಂದ್ ಸೋನೊವಾಲ್

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ಕೇಂದ್ರ ಸಚಿವ ನಿತಿನ್ ಗಡ್ಕರಿ

ಕೇಂದ್ರ ಸಚಿವ ಪಿಯೂಷ್ ಗೋಯಲ್

ಬಿಜೆಪಿ ಸಂಸದೆ ಹೇಮಾ ಮಾಲಿನಿ

ಬಿಜೆಪಿ ನಾಯಕಿ ಹೇಮಾ ಮಾಲಿನಿ

: PM Narendra Modi meets NDA leaders at Collectorate office ahead of filing his nomination from Varanasi parliamentary constituency. pic.twitter.com/xVfO9kovHP

— ANI UP (@ANINewsUP)

ಮೋದಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದವರು:

ಡಾ. ಅನ್ನಪೂರ್ಣ ಶುಕ್ಲಾ

ಡಾ. ಜಗದೀಶ್ ಗುಪ್ತಾ

ಡೋಮರಾಜ್ ಜಗದೀಶ್

ಇದಕ್ಕೂ ವಾರಾಣಸಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿನ್ನೆಯ ರೋಡ್ ಶೋನಲ್ಲಿ ನಿಮ್ಮ ಶ್ರಮವನ್ನು ಕಂಡಿದ್ದು, ಇಡೀ ವಾರಾಣಸಿ ನಗರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

PM Modi to BJP workers at their meet in Varanasi: Kis party se kaun umeedwar hai, kripa karke yeh charcha mat karen, har umeedwar sammaniye hai, woh bhi loktantra ko mazboot banane ke liye maidan mein aya hai, woh humara dushman nahi hai. pic.twitter.com/GvirdM34tD

— ANI UP (@ANINewsUP)

ಇದೇ ಮೊದಲ ಬಾರಿಗೆ ದೇಶದಲ್ಲಿ ಬಿಜೆಪಿ ಪರ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಅಲೆ ಎದ್ದಿದ್ದು, ದೇಶ ನಿರ್ಮಾಣ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು.

ಪಕ್ಷ ಅಥವಾ ನನ್ನ ಪರ ಯಾರೇ ಏನೇ ಅವಮಾನ ಮಾಡಿದರೂ ಅದನ್ನು ನೇರವಾಗಿ ನನಗೆ ತಿಳಿಸಿ, ಕೆಸರಲ್ಲಿ ಕಮಲ ಅರಳಿಸುವುದು ಹೇಗೆಂದು ನನಗೆ ಗೊತ್ತಿದೆ ಎಂದು ಪ್ರಧಾನಿ ಮೋದಿ ಈ ವೇಳೆ ಕಾರ್ಯಕರ್ತರನ್ನು ಹುರಿದುಂಬಿಸಿದರು.

Prime Minister Narendra Modi offered prayers at Kaal Bhairav Temple in Varanasi; leaves for Collectorate office to file his nomination. pic.twitter.com/4sn4pGR6o0

— ANI UP (@ANINewsUP)

ಬಳಿಕ ಕಾಳಭೈರವೇಶ್ವರ್ ದೇವಸ್ಥಾನಕ್ಕೆ ತೆರಳಿದ ಪ್ರಧಾನಿ ಮೋದಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23ರಂದು ಎರಡನೇ ಹಮತದ ಮತದಾನ ಮಯಕ್ತಾಯ ಕಂಡಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!