ನಾಮಪತ್ರ ಮರೆತು ಬಂದು ಡೀಸಿ ಮುಂದೆ ಅಭ್ಯರ್ಥಿ ಪೇಚು!

Published : Apr 02, 2019, 09:29 AM IST
ನಾಮಪತ್ರ ಮರೆತು ಬಂದು ಡೀಸಿ ಮುಂದೆ ಅಭ್ಯರ್ಥಿ ಪೇಚು!

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ| ನಾಮಿನೇಷನ್ ಪತ್ರ ಮನೆಯಲ್ಲೇ ಮರೆತು ಬಂದ ಅಭ್ಯರ್ಥಿ!

ಧಾರ​ವಾಡ[ಏ.02]: ಧಾರವಾಡ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಯೊಬ್ಬರು ನಾಮಪತ್ರವನ್ನೇ ಮರೆತು ಚುನಾವಣಾಧಿಕಾರಿಗಳ ಮುಂದೆ ಹೋಗಿ ಪೇಚಿಗೀಡಾದ ಅಪರೂಪದ ಪ್ರಸಂಗ ಸೋಮವಾರ ನಡೆದಿದೆ.

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಮಲ್ಲಿಕಾರ್ಜುನ ಬಾಳನಗೌಡ್ರ ಸೋಮ​ವಾರ ನಾಮಪತ್ರ ಇಲ್ಲದೇ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಚುನಾವಣಾಧಿಕಾರಿ ಬಳಿ ತೆರಳಿದರು. ಹತ್ತಾರು ಜನರ ಮೆರ​ವ​ಣಿ​ಗೆ ಮುಗಿಸಿ, ಕೈ ಬೀಸುತ್ತಾ ಒಳ ಬಂದ ಬಾಳ​ನ​ಗೌ​ಡರಿಗೆ ನಾಮಪತ್ರ ತಂದಿಲ್ಲ ಎಂಬುದೂ ಮರೆತು ಹೋಗಿತ್ತು.

ಚುನಾವಣಾಧಿಕಾರಿಗಳ ಮುಂದೆ ಹೋಗಿ ನಿಂತಾಗಿತ್ತು. ಆಗ ಚುನಾ​ವ​ಣಾ​ಧಿ​ಕಾ​ರಿ​ಗಳು ನಾಮ​ಪತ್ರ ಎಲ್ಲಿ ಎಂದು ಪ್ರಶ್ನಿಸಿದಾಗಲೇ ನಾಮಪತ್ರ ಬಿಟ್ಟು ಬಂದದ್ದು ಅರಿವಾಗಿದೆ. ಆಗ ಎಚ್ಚೆತ್ತು ಸಹ​ಚ​ರ​ನಿಗೆ ನಾಮ​ಪತ್ರ ತರಲು ಹೇಳಿದರು. ಆದರೆ, ಆತ ಬರಲು ತಡ ಮಾಡಿ​ದ್ದ​ರಿಂದ ತಾವೇ ಹೊರ ಹೋಗಿ ನಾಮ​ಪತ್ರ ತಂದು ಕೊನೇ ಕ್ಷಣ​ದಲ್ಲಿ ಸಲ್ಲಿ​ಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!