ಬೀಡಿ ಕಟ್ಟಿ ಜೀವನ ಸಾಗಿಸ್ತಿದ್ದಾರೆ ಸಾಗರದ ಈ ಮಾಜಿ ಸಂಸದ!

Published : Mar 30, 2019, 12:19 PM ISTUpdated : Mar 30, 2019, 01:23 PM IST
ಬೀಡಿ ಕಟ್ಟಿ ಜೀವನ ಸಾಗಿಸ್ತಿದ್ದಾರೆ ಸಾಗರದ ಈ ಮಾಜಿ ಸಂಸದ!

ಸಾರಾಂಶ

ಬೀಡಿ ಕಟ್ಟಿ ಜೀವನ ಸಾಗಿಸ್ತಿದ್ದಾರೆ ಈ ಮಾಜಿ ಸಂಸದ| ವ್ಯಾಸಂಗ ನಡೆಸುತ್ತಿದ್ದ ಇವರು ಸಂಸದರಾಗಿದ್ದೇ ರೋಚಕ ಕಥೆ| ಮೋಟಾರು ವಾಹನ ಬೇಡ, ಸೈಕಲ್ ಸಾಕು ಎನ್ನುವ ಸರಳ ಸಜ್ಜನ!

ಭೋಪಾಲ್[ಮಾ.30]: ಸಂಸದ ಅಥವಾ ಮಾಜಿ ಸಂಸದ ಎಂಬ ಪದ ಕೇಳುತ್ತಿದ್ದಂತೆಯೇ ಓರ್ವ ಸಂಪತ್ತು ಹೊಂದಿರುವ, ಐಷಾರಾಮಿ ಜೀವನ ಸಾಗಿಸುವ ವ್ಯಕ್ತಿಯ ಚಿತ್ರಣ ಮನದಲ್ಲಿ ಮೂಡುತ್ತದೆ. ಆದರೆ ಮಧ್ಯಪ್ರದೇಶದ ಬುಂದೇಲ್ ಖಂಡ್ ನಲ್ಲಿ ಮಾಜಿ ಸಂಸದರೊಬ್ಬರು ಇದಕ್ಕೆ ತದ್ವಿರುದ್ಧ ಎಂಬಂತೆ ಜೀವನ ಸಾಗಿಸುತ್ತಿದ್ದಾರೆ. ಸೈಕಲ್ ಓಡಿಸಿಕೊಂಡು ಪ್ರಯಾಣಿಸುವ ಇವರು ಸಮಯ ಸಿಕ್ಕರೆ ಬೀಡಿ ಕಟ್ಟುತ್ತಾರೆ. 'ಸೈಕಲ್ ವಾಲಾ ನೇತಾಜಿ[ಸೈಕಲ್ ಓಡಿಸುವ ನಾಯಕ]' ಎಂದೇ ಹೆಸರುವಾಸಿಯಾಗಿರುವ ಈ ಮಾಜಿ ಸಂಸದ ಯಾರು? ಇಲ್ಲಿದೆ ವಿವರ

25,000 ರು. ಚಿಲ್ಲರೆ ತಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ಮಧ್ಯಪ್ರದೇಶದ ಸಾಗರ ನಗರದ ಪುಖ್ಯಾವು ಟೋರಿ ಇಲಾಖೆಯ ಶಂಕರಿ ಗಲ್ಲಿಯ ಸಾಮಾನ್ಯ ಮನೆಯಲ್ಲಿ ವಾಸಿಸುತ್ತಿರುವ ಮಾಜಿ ಸಂಸದ ರಾಮ್ ಸಿಂಗ್ ಅಹಿರ್ವಾರ್ ತತ್ವಶಾಸ್ತ್ರ ಪದವೀಧರ ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. 1967ರಲ್ಲಿ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಹಿರ್ವಾರ್ ಜಯಶಾಲಿಯಾಗಿದ್ದರು. 82 ವರ್ಷ ದಾಟಿರುವ ಈ ಮಾಜಿ ಸಂಸದ ಇಂದಿಗೂ ದಿನಂ ಪ್ರತಿ ಹಲವಾರು ಕಿ.ಮೀ ಸೈಕಲ್ ತುಳಿದುಕೊಂಡೇ ಪ್ರಯಾಣಿಸುತ್ತಾರೆ ಹಾಗೂ ತನ್ನವರನ್ನು ಭೇಟಿಯಾಗುತ್ತಾರೆ. ಅವರ ಬಳಿ ಯಾವುದೇ ಮೋಟಾರು ವಾಹನಗಳಿಲ್ಲ.

ಸಿಗದ ಟಿಕೆಟ್: ಕಚೇರಿಯ 300 ಕುರ್ಚಿಗಳನ್ನೇ ಹೊತ್ತೊಯ್ದ ಕೈ ಶಾಸಕ!

'ನನಗೆ ಯಾವತ್ತಿಗೂ ಮೋಟಾರು ವಾಹನ ಬೇಕೆಂದು ಅನಿಸಲಿಲ್ಲ, ಅಗತ್ಯವೂ ಬೀಳಲಿಲ್ಲ ಹೀಗಾಗಿ ಖರೀದಿಸಲಿಲ್ಲ' ಎಂಬುವುದು ಮಾಜಿ ಸಂಸದರ ಮಾತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಪಾರ್ಶ್ವವಾಯುಗೀಡಾದ ಅಹಿರ್ವಾಲ್ ಮಾತನಾಡುವ ಸಂದರ್ಭದಲ್ಲಿ ತೊದಲುತ್ತಾರೆ. ಹೀಗಿದ್ದರೂ ಸೈಕಲ್ ಮಾತ್ರ ಇನ್ನೂ ಬಿಟ್ಟಿಲ್ಲ. ಸಮಯ ಸಿಕ್ಕಾಗ ಬೀಡಿ ಕಟ್ಟುವುದನ್ನೂ ಮಾಡುತ್ತಾರೆ.

ಇಷ್ಟೇ ಅಲ್ಲ ರಾಮ್ ಸಿಂಗ್ ತಮ್ಮ ಸಂಸದರ ಪಿಂಚಣಿ ಪಡೆಯಲೂ ಸಮಸ್ಯೆಗಳನ್ನೆದುರಿಸಿದ್ದರು. ಈ ಬಗ್ಗೆ ತಮ್ಮ ನೋವು ವ್ಯಕ್ತಪಡಿಸಿರುವ ಅವರು '2005ರಿಂದ ಬಹಳಷ್ಟು ಪ್ರಯತ್ನಗಳ ಬಳಿಕ ನನಗೆ ಸೇರಬೇಕಾಗಿದ್ದ ಸಂಸದರ ಪಿಂಚಣಿಯ ಮೊತ್ತ ಬರಲು ಆರಂಭವಾಯಿತು. ಪಿಂಚಣಿ ಪಡೆಯಲು ಹಲವಾರು ವರ್ಷಗಳವರೆಗೆ ಸಂಘರ್ಷ ನಡೆಸಿದ್ದೇನೆ' ಎಂದಿದ್ದಾರೆ. ರಾಮ್ ಸಿಂಗ್ ರವರಿಗೆ 82 ವರ್ಷ ದಾಟಿದ್ದರೂ ಇಂದಿಗೂ ಅತ್ಯಂತ ಸಕ್ರಿಯರಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ಹಾಗೂ ರಾಜ್ಯದಲ್ಲೂ ಸುಮಾರು 15 ವರ್ಷಗಳವರೆಗೆ ಬಿಜೆಪಿ ಸರ್ಕಾರವಿತ್ತು ಹೀಗಿದ್ದರೂ ಈ ಪಕ್ಷ ತಮಗೆ ಯಾವುದೇ ಮಹತ್ವ ನೀಡಿಲ್ಲ ಎಂಬ ಅಸಮಾಧಾನ ರಾಮ್ ಸಿಂಗ್ ತೋರ್ಪಡಿಸಿದ್ದಾರೆ.

ಬಿಜೆಪಿ ತೊರೆದು ಚೌಕಿದಾರನಿಗೆ ರಾಜೀನಾಮೆ ಪತ್ರ ಕೊಟ್ಟ ಸಂಸದ!

ರಾಜಕೀಯದಲ್ಲಾದ ಈ ಬದಲಾವಣೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಮ್ ಸಿಂಗ್ ತಾವು ಸಂಸದರಾಗಿದ್ದು ಹೇಗೆ ಎಂಬುವುದನ್ನು ತಿಳಿಸಿದ್ದಾರೆ. 'ನಾನು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೆ ಹಾಗೂ ಜೀವನೋಪಾಯಕ್ಕಾಗಿ ಬೀಡಿ ಕಟ್ಟುತ್ತಿದ್ದೆ. ಹೀಗಿರುವಾಗಲೇ ಸಾಗರ ಸಂಸದೀಯ ಕ್ಷೇತ್ರದಿಂದ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು ಹಾಗೂ ನಾನು ಜಯಗಳಿಸಿದೆ' ಎಂದಿದ್ದಾರೆ ರಾಮ್ ಸಿಂಗ್.

ಇತರ ನಾಯಕರಿಗಿಂತ ಭಿನ್ನ:

ರಾಮ್ ಸಿಂಗ್ ಕುರಿತಾಗಿ ಮಾತನಾಡಿರುವ ಅವರ ನೆರೆ ಮನೆಯ ಗೋವಿಂದ್ 'ರಾಮ್ ಸಿಂಗ್ ಇತರ ರಾಜಕೀಯ ನಾಯಕರಿಗಿಂತ ವಿಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ವರೊಬ್ಬ ಸಜ್ಜನ, ಸರಳ ಹಾಗೂ ನೇರ ಸ್ವಭಾವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಅವರು ಸಂಸದರಾಗಿದ್ದರು ಎಂದು ಅನಿಸುವುದಿಲ್ಲ ಅಂತಹ ಸರಳ ಜೀವನ ನಡೆಸುತ್ತಾರೆ. ಸೈಕಲ್ ತುಳಿಯುತ್ತಾರೆ ಬೀಡಿ ಕಟ್ಟುತ್ತಾರೆ. ಸಂಸದರಾಗಿದ್ದವರು ಹೀಗೆ ಜೀವನ ನಡೆಸುತ್ತಾರೆ ಎಂದು ಅಚ್ಚರಿಯಾಗುತ್ತದೆ' ಎಂದಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!