Daily Horoscope: ವೃಷಭಕ್ಕೆ ವಾಹನ ಲಾಭ, ಮಕರಕ್ಕೆ ಲಾಭವಿದ್ದರೂ ಅಶಾಂತಿ ತಪ್ಪದು..

By Suvarna NewsFirst Published Apr 28, 2022, 5:06 AM IST
Highlights

28 ಏಪ್ರಿಲ್ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೀನಕ್ಕೆ ಉತ್ತಮ ದಿನ

ಮೇಷ(Aries): ನಿಮ್ಮ ಮನದಿಂಗಿತ ಕೈಗೂಡುವುದು. ಉದ್ಯೋಗ ಸ್ಥಳದಲ್ಲಿ ಹೊಸ ಸ್ನೇಹಿತರು ಸಿಗುವ ಜೊತೆಗೆ, ಕೆಲಸವನ್ನು ಹುಮ್ಮಸ್ಸಿನಲ್ಲಿ ಮಾಡಲಿದ್ದೀರಿ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ನಿಮ್ಮ ಹಾಸ್ಯಪ್ರಜ್ಞೆ ನಿಮ್ಮನ್ನು ಕಾಪಾಡಲಿದೆ. ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯಿರಿ. 

ವೃಷಭ(Taurus): ಹೊಸ ವಾಹನ, ಒಡವೆ ಖರೀದಿಸುವಿರಿ. ಭೌತಿಕ ಸುಖಕ್ಕಾಗಿ ಸಾಕಷ್ಟು ವ್ಯಯಿಸಿದರೂ ಅವೆಲ್ಲವೂ ಬದುಕನ್ನು ಸುಲಭಗೊಳಿಸುವುದರಿಂದ ಖರ್ಚು ಭಯ ಹುಟ್ಟಿಸುವುದಿಲ್ಲ. ಹಲ್ಲು ನೋವು ಕಾಡುವುದು. ಕುಟುಂಬದಲ್ಲಿ ಸಂತೋಷ ಇರಲಿದೆ. ವಿಷ್ಣು ಸಹಸ್ರನಾಮ ಹೇಳಿ.

Latest Videos

ಮಿಥುನ(Gemini): ಹೊಸ ಜವಾಬ್ದಾರಿಗಳು ಹೆಗಲಿಗೇರಲಿವೆ. ಗಣ್ಯರ ಸಹಕಾರ ಬಲವಿರುತ್ತದೆ. ಸಂಸಾರ ಜೀವನ ನೀರಸವಾಗಿದ್ದರೆ ಅದನ್ನು ವಿಶೇಷವಾಗಿಸಲು ನೀವೇ ಪ್ರಯತ್ನ ಹಾಕಿ. ಮನಸ್ಸಿನಲ್ಲಿ ಯಾವುದೋ ಗೊಂದಲವಿದ್ದರೆ ಮನೆ ಹಿರಿಯರ ಬಳಿ ಆ ಬಗ್ಗೆ ಮಾತನಾಡಿ. ವಿಷ್ಣು ಸಹಸ್ರನಾಮ ಹೇಳಿ.

ಕಟಕ(Cancer): ಹೊಸ ಯೋಜನೆಗೆ ಕುಟುಂಬ ಸದಸ್ಯರ ಸಹಕಾರ ದೊರೆಯುವುದು. ಸ್ನೇಹಿತರು ನಿಮ್ಮ ಗುಟ್ಟನ್ನು ರಟ್ಟು ಮಾಡಿ ನಂಬಿಕೆ ಕಳೆದುಕೊಳ್ಳುವರು. ಹಣದ ವಿಷಯದಲ್ಲಿ ಮೋಸ ಹೋಗಬಹುದು, ಎಚ್ಚರ. ನಿಮ್ಮ ಕರ್ತವ್ಯ ಪ್ರಜ್ಞೆಯಿಂದಲೇ ಲಾಭ ಪಡೆಯುವಿರಿ. ಲಕ್ಷ್ಮೀ ವೆಂಕಟೇಶ್ವರ ಧ್ಯಾನ ಮಾಡಿ. 

ಸಿಂಹ(Leo): ಸಹೋದರಿಯ ಮನಸ್ಥಿತಿಯಿಂದಾಗಿ ಸಮಸ್ಯೆಯು ಬಿಡಿಸಲಾರದ ಕಗ್ಗಂಟಾಗಿ ಕೂರುವುದು. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಫಲ, ಹೂಡಿಕೆ ಮಾಡಬೇಡಿ. ಕ್ರೀಡಾ ಚಟುವಟಿಕೆಗಳು ಸಂತಸ ತರಲಿವೆ. ಕೆಲಸದ ಭಾರ ಕೊಂಚ ಕಡಿಮೆಯಾಗಲಿದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕನ್ಯಾ(Virgo): ಸಾಕಷ್ಟು ಸತಾಯಿಸುತ್ತಿದ್ದ ಹಣ ಸುಲಭವಾಗಿ ಕೈ ಸೇರಲಿದೆ. ಉದ್ಯೋಗದಲ್ಲಿ ಉನ್ನತಿ ಹೊಂದುವಿರಿ. ಬಹಳ ತಾಳ್ಮೆಯನ್ನು ಒಗ್ಗೂಡಿಸಿಕೊಳ್ಳಲು ಪ್ರಯತ್ನಿಸಿ. ಯಾವುದೇ ಸನ್ನಿವೇಶಕ್ಕೂ ತಕ್ಷಣ ಪ್ರತಿಕ್ರಿಯಿಸಬೇಡಿ. ನಿಶ್ಶಕ್ತಿ ಕಾಡಲಿದೆ. ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಹೇಳಿಕೊಳ್ಳಿ.

ತುಲಾ(Libra): ಅಣ್ಣ ತಮ್ಮಂದಿರ ತಕರಾರು ಅಂತ್ಯ ಕಾಣುವುದು. ಮನೆ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ. ಸಂಗಾತಿಯಿಂದ ನೀವು ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ಸುಸ್ತಿಗೆ ದೈಹಿಕವಾಗಿ ಪೋಷಕಾಂಶಗಳ ಕೊರತೆ ಕಾರಣವಿರಬಹುದು. ಐರನ್, ವಿಟಮಿನ್ ಕೊರತೆಯನ್ನು ನೀಗಿಸಿಕೊಳ್ಳುವತ್ತ ಗಮನ ಹರಿಸಿ. ರಾಯರ ಮಠಕ್ಕೆ ಭೇಟಿ ನೀಡಿ. 

ವೃಶ್ಚಿಕ(Scorpio): ಸರಿಯಾದ ನಿರ್ಧಾರ ತೆಗೆದುಕೊಂಡರೆ ಇದುವರೆಗಿನ ಮಾನಸಿಕ ಯಾತನೆಗೆ ಮುಕ್ತಿ ಸಿಗಲಿದೆ. ನಿರ್ಧಾರ ತೆಗೆದುಕೊಳ್ಳಲು ತಡ ಮಾಡಿ ಸಮಯ ವ್ಯರ್ಥ ಮಾಡಿ. ನಿಮ್ಮ ಅಭಿಪ್ರಾಯ, ಇಷ್ಟಕಷ್ಟಗಳಂತೆ ಇತರರದೂ ಇರುತ್ತದೆ ಎಂದು ನಂಬಿ ಅದನ್ನು ಗೌರವಿಸಿ. ರಾಮ ಧ್ಯಾನ ಮಾಡಿ. 

ವರ್ಷದ ಮೊದಲ ಸೂರ್ಯಗ್ರಹಣ : ಸಮಯ, ಸ್ಥಳ, ಪರಿಣಾಮ ತಿಳಿಯಿರಿ

ಧನುಸ್ಸು(Sagittarius): ಕೋಪ ನಿಯಂತ್ರಿಸಲು ಪ್ರಯತ್ನಿಸಿ. ಸೋಮಾರಿತನ ಬೇಡ. ಲಸದಲ್ಲಿ ಕಲಿಯಲು ಸಹಾಯ ಮಾಡುವ ಮತ್ತು ಮಾರ್ಗದರ್ಶನ ನೀಡುವ ಒಳ್ಳೆಯ ಜನರೊಂದಿಗೆ ನೀವು ಸಂಪರ್ಕವನ್ನು ಸ್ಥಾಪಿಸಿಕೊಳ್ಳಿ. ವಿಷ್ಣುವಿನ ಸ್ಮರಣೆ ಮಾಡಿ.

ಮಕರ(Capricorn): ಉದ್ಯೋಗ ಸ್ಥಳದಲ್ಲಿ ಅಶಾಂತಿ ತಲೆದೋರುವುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಚಿನ್ನ ಮತ್ತು ಬೆಳ್ಳಿಯನ್ನು ವ್ಯಾಪಾರ ಮಾಡುವವರು ಅಪಾರ ಆರ್ಥಿಕ ಲಾಭಗಳನ್ನು ಪಡೆಯಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ. ಗೋ ಗ್ರಾಸ ನೀಡಿ.

ಕುಂಭ(Aquarius): ಹೊಸ ಮನೆಯ ಕೆಲಸ ಹೊಸ ಹುರುಪು ತರಲಿದೆ. ಚಿನ್ನ ಖರೀದಿಸಲಿರುವಿರಿ. ಕಾರ್ಯಕ್ಷೇತ್ರದ ಬದಲಾವಣೆ ಕೊಂಚ ಚಿಂತೆ ತರುವುದು. ಕಣ್ಣಿನ ಸಮಸ್ಯೆಗಳು ಕಾಡಬಹುದು. ನಿರ್ಲಕ್ಷಿಸಬೇಡಿ. ಮಕ್ಕಳ ಕಡೆ ಹೆಚ್ಚಿನ ನಿಗಾ ವಹಿಸಿ.  ಬಡವರಿಗೆ ಆಹಾರ ನೀಡಿ. 

Chanakya Neeti: ಯಶಸ್ಸಿಗೆ ಪಾಲಿಸಿ ಈ ಐದು ಸೂತ್ರ

ಮೀನ(Pisces): ಬ್ಯಾಂಕ್ ಕೆಲಸಗಳು ನೆರವೇರಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ದಿನವಾಗಿದೆ. ಸಾಲದ ಹಣ ಮರು ಪಾವತಿಯಾಗುವುದು. ಕುಟುಂಬದಲ್ಲಿ ನಿಮ್ಮಿಂದಾಗಿ ಉತ್ತಮ ಕಾರ್ಯಗಳು ಜರುಗಬಹುದು. ವಿಷ್ಣು ಸಹಸ್ರನಾಮ ಪಠಿಸಿ. 

click me!