Daily Horoscope: ವೃಷಭಕ್ಕೆ ಸುಳ್ಳಿನಿಂದ ಸಂಕಷ್ಟ, ವೃಶ್ಚಿಕಕ್ಕೆ ಸ್ಥಳ ಬದಲಾವಣೆ

By Suvarna NewsFirst Published Apr 23, 2022, 5:00 AM IST
Highlights

23 ಏಪ್ರಿಲ್ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಿಥುನ ರಾಶಿಗೆ ಉತ್ಸಾಹದ ದಿನ

ಮೇಷ(Aries): ಕೆಲವೊಂದು ವಿಷಯಕ್ಕೆ ಮೌನ ಒಳಿತಾದರೆ ಮತ್ತೆ ಕೆಲವಕ್ಕೆ ಮಾತೇ ಬೇಕು. ನಿಮ್ಮ ವಿರೋಧಿಗಳಿಗೆ ಖಡಕ್ ಮಾತಿನ ಪ್ರತ್ಯುತ್ತರ ನೀಡಿ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಹೊಸ ವ್ಯಕ್ತಿಗಳೊಂದಿಗೆ ಸಂಬಂಧ ಏರ್ಪಡಬಹುದು. ಶನಿ ಸ್ಮರಣೆ ಮಾಡಿ. 

ವೃಷಭ(Taurus): ಉದಾಸೀನತೆ ಮತ್ತು ಸುಳ್ಳು ಹೇಳುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಬೇಕಾಗುತ್ತದೆ. ನೆನಪುಗಳು ಕಾಡುತ್ತವೆ. ಪ್ರೇಮವೈಫಲ್ಯದ ನೋವು ಸತಾಯಿಸುತ್ತದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗಲಿದೆ. ಕಪ್ಪು ವಸ್ತ್ರ ದಾನ ಮಾಡಿ.

Latest Videos

ಮಿಥುನ(Gemini): ಇಂದು ಇಡೀ ದಿನ ಉತ್ಸಾಹದಿಂದ ತುಂಬಿರಲಿದೆ. ನೀವು ಕಷ್ಟ ಪಟ್ಟು ಮಾಡಿದ ಕೆಲಸಗಳಿಗೆ ಫಲ ದೊರಕಲಿದೆ. ಮನೆ ಅಥವಾ ಕಾರು ಖರೀದಿಸಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕರಿ ಎಳ್ಳು, ಎಳ್ಳೆಣ್ಣೆ ದಾನ ಮಾಡಿ.

ಕಟಕ(Cancer): ವಿದ್ಯಾರ್ಥಿಗಳಿಗೆ ಮಾನಸಿಕ ತುಮುಲಗಳು ಕಾಡಬಹುದು. ಪೋಷಕರ ಸಹಕಾರ ಪಡೆಯಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ನೀವು ಮಾಡಿರುವ ಹೂಡಿಕೆಯಿಂದ ಲಾಭಗಳು ದೊರೆಯಲಿವೆ. ಮಾತಿನಲ್ಲಿ ಪ್ರೀತಿ, ಸೌಜನ್ಯವಿರಲಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ.

ಸಿಂಹ(Leo): ಪ್ರೇಮ ಜೀವನ ಚೆನ್ನಾಗಿರುತ್ತದೆ. ಮದುವೆ ಮಾತುಕತೆ ನಡೆಯಬಹುದು. ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಜಮೀನು, ಕಟ್ಟಡ ಕಾಮಗಾರಿ ವಿಷಯದಲ್ಲಿ ವಿಶೇಷ ಯಶಸ್ಸು ಲಭಿಸಲಿದೆ. ಅನಗತ್ಯ ವಾದಗಳಲ್ಲಿ ಭಾಗವಹಿಸಬೇಡಿ. ಮನೆ ದೇವರಲ್ಲಿ ಪ್ರಾರ್ಥಿಸಿ. 

Vastu Tips: ಈ ದಿಕ್ಕಿನಲ್ಲಿ ಗೋಡೆ ಗಡಿಯಾರವಿದ್ದರೆ ಸಂಪತ್ತನ್ನು ಆಕರ್ಷಿಸುತ್ತದೆ!

ಕನ್ಯಾ(Virgo): ನಿಮ್ಮ ಜೊತೆಯಿರುವವರ ಮೋಸ ಬಯಲಾಗಲಿದೆ.  ವಿದೇಶದ ಸಂಪರ್ಕಗಳು ಲಾಭಕಾರಿಯಾಗಲಿವೆ. ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಇನ್ನೊಬ್ಬರ ವಿಚಾರದಲ್ಲಿ ಹೆಚ್ಚೆಚ್ಚು ಮೂಗು ತೂರಿಸೋದು ಬೇಡ. ಶಿವ ಧ್ಯಾನ ಮಾಡಿ. 

ತುಲಾ(Libra): ವಿಲಾಸೀ ಜೀವನಕ್ಕಾಗಿ ಹೆಚ್ಚಿನ ಧನವ್ಯಯ ಮಾಡುವಿರಿ. ಏಜೆಂಟರು, ಗುತ್ತಿಗೆದಾರರಿಗೆ ಲಾಭ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಯಾರಾದರೂ ಹಾಳು ಮಾಡಲು ಪ್ರಯತ್ನಿಸಬಹುದು. ಆದ್ದರಿಂದ ಎಚ್ಚರಿಕೆಯಿಂದಿರಿ. ಆಂಜನೇಯ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಸ್ಥಳ ಬದಲಾವಣೆ ಆಗಬಹುದು. ಸುಳ್ಳು ಹೇಳುವವರ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಮಾನಮರ್ಯಾದೆ ವಿಷಯದಲ್ಲಿ ಹೆಚ್ಚು ಜತನ ವಹಿಸಬೇಕಾಗುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಕೈಗೊಂಡ ಪ್ರಯಾಣ ಫಲಪ್ರದವಾಗುವುದು. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ.

ನಿಮ್ಮ ಮುಖದ ಮಚ್ಚೆಗಳು ನಿಮ್ಮ ಬಗ್ಗೆ ಏನು ಹೇಳ್ತಿವೆ ಗೊತ್ತಾ?

ಧನುಸ್ಸು(Sagittarius): ವಿದೇಶ ಪ್ರವಾಸ ಅಥವಾ ತೀರ್ಥಕ್ಷೇತ್ರಕ್ಕೆ ಹೋಗುವುದರಿಂದ ಮನಸ್ಸಿಗೆ ನೆಮ್ಮದಿ. ನ್ಯಾಯಾಲಯದ ಪ್ರಕರಣಗಳನ್ನು ಹೊರಗೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಸಾಲ ನೀಡಬೇಡಿ. ಅನಗತ್ಯ ಪ್ರಯಾಣವು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಶನಿ ಸ್ಮರಣೆ ಮಾಡಿ. 

ಮಕರ(Capricorn): ಹಣ ಹಾಗೂ ವೃತ್ತಿ ವಿಚಾರದಲ್ಲಿ ಗುಟ್ಟುಗಳನ್ನು ಯಾರೊಂದಿಗೂ ಬಿಟ್ಟು ಕೊಡಬೇಡಿ. ಕುಟುಂಬದ ಹಿರಿಯ ಸದಸ್ಯರು ಮತ್ತು ವಿಶೇಷವಾಗಿ ಅಣ್ಣನ ಬೆಂಬಲ ಇರುತ್ತದೆ. ನೀವು ತುಂಬಾ ಪ್ರೀತಿಸುವ ಜನರಿಗೆ ಸಾಧ್ಯವಾದಷ್ಟು ಹೆಚ್ಚಿನ ಸಮಯ ನೀಡಿ. ಶಿವ ಧ್ಯಾನ ಮಾಡಿ. 

ಕುಂಭ(Aquarius): ಹಣದ ನಷ್ಟ ಉಂಟಾಗಬಹುದು. ನಿಮ್ಮ ಶತ್ರುಗಳು ನಿಮ್ಮ ಯಶಸ್ಸನ್ನು ಹಾಳುಗೆಡವಲು ಪ್ರಯತ್ನಿಸಬಹುದು. ನಿಮ್ಮ ಆತಂಕ, ಭಯ, ಗೊಂದಲಗಳು ನಿಮ್ಮ ಯಶಸ್ಸಿನ ದಾರಿಗೆ ಅಡ್ಡಿಯಾಗಲು ಬಿಡಬೇಡಿ. ಅವನ್ನು ಗೆಲ್ಲಲು ಪ್ರಯತ್ನಿಸಿ. ಕುಲದೇವರ ಸ್ಮರಣೆ ಮಾಡಿ. 

ಮೀನ(Pisces): ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಗಂಭೀರ ಕಾಯಿಲೆಗಳಿದ್ದಲ್ಲಿ, ಅವುಗಳ ಚಿಕಿತ್ಸೆ ಕಡೆ ಹೆಚ್ಚಿನ ಗಮನ ವಹಿಸಲೇಬೇಕು. ಭಯ ಇಲ್ಲವೇ ದುರಾಸೆ ಕಾರಣಕ್ಕೆ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಆಂಜನೇಯ ಸ್ಮರಣೆ ಮಾಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!