Daily Horoscope: ಮೇಷಕ್ಕೆ ಶತ್ರುಕಾಟ, ಕನ್ಯಾ ರಾಶಿಗೆ ಒಂಟಿತನ

By Suvarna NewsFirst Published Apr 21, 2022, 5:05 AM IST
Highlights

21 ಏಪ್ರಿಲ್ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಗಿಂದು ಪ್ರೇಮ ವೈಫಲ್ಯ

ಮೇಷ(Aries): ಮನೆ ನವೀಕರಣ ಕಾರ್ಯಗಳು ನಡೆಯಬಹುದು. ಅಕ್ಕಪಕ್ಕದವರು ನಿಮ್ಮ ಏಳ್ಗೆ ಸಹಿಸದೆ ಕುತಂತ್ರ ಮಾಡಬಹುದು. ಈ ಬಗ್ಗೆ ಎಚ್ಚರ ವಹಿಸಿ. ವೃತ್ತಿಯಲ್ಲಿ ಏಕಾಗ್ರತೆ ನಿಲ್ಲದೆ ಕಷ್ಟವಾಗುವುದು. ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ರಾಯರ ಮಠಕ್ಕೆ ಭೇಟಿ ನೀಡಿ. 

ವೃಷಭ(Taurus): ಮನೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಹೊಸ ವಸ್ತುಗಳ ಖರೀದಿ ಮಾಡುವಿರಿ. ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳುವಲ್ಲಿ ಹೈರಾಣಾಗುವಿರಿ. ಅಲಂಕಾರಿಕ ವಸ್ತುಗಳು, ಕೃಷಿ, ಪಶು, ಹೈನು ವ್ಯವಹಾರಗಳಿಂದ ಅಧಿಕ ಲಾಭ. ಗೌರವ ವೃದ್ಧಿಯಾಗಲಿದೆ. ವಿಷ್ಣು ಸಹಸ್ರನಾಮ ಪಠಿಸಿ. 

Latest Videos

ಮಿಥುನ(Gemini): ಮಾತುಗಳು ಓಘದಲ್ಲಿ ಹೊರ ಬಂದು ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಬಹುದು. ದೊಡ್ಡ ಯೋಜನೆಗಳಿಗೆ ಸಾಲ ದೊರೆಯಲಿದೆ. ಮಕ್ಕಳಿಗೆ ದೈಹಿಕ ಶಿಕ್ಷೆ ನೀಡದಿರಿ. ಅವರನ್ನು ಕಾಡುತ್ತಿರುವ ಸಮಸ್ಯೆ ಏನು ಎಂದು ಸಮಾಧಾನದಲ್ಲಿ ವಿಚಾರಿಸಿ. ರಾಮ ನಾಮ ಧ್ಯಾನ ಮಾಡಿ.

ಕಟಕ(Cancer): ನಿಮ್ಮ ಹಿತವಾದ ಮಾತುಗಳು ಇನ್ನೊಬ್ಬರ ಮನಸ್ಸಿನಲ್ಲಿ ಸ್ಪೂರ್ತಿ ತುಂಬಲಿವೆ. ಹವಾಮಾನ ಬದಲಾವಣೆಯಿಂದ ಆರೋಗ್ಯ ಸಮಸ್ಯೆಯ ಸಾಧ್ಯತೆ ಇರುತ್ತದೆ. ಸ್ನೇಹಿತವರ್ಗದವರ ಆಮಿಷಗಳಿಗೆ ಬಲಿಯಾಗಿ ಬೇಡದ ಚಟ ರೂಢಿಸಿಕೊಳ್ಳಬೇಡಿ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. 

ಹೆಚ್ಚು divorceಗೊಳಗಾಗೋರು ಇದೇ ನಕ್ಷತ್ರದಲ್ಲಿ ಹುಟ್ಟಿದವರು!

ಸಿಂಹ(Leo): ತಮ್ಮ ಸಮಸ್ಯೆ ಹೇಳಿಕೊಂಡು ಬಂದವರಿಗೆ ನಿಮ್ಮಿಂದಾದಷ್ಟು ನೆರವಾಗುವಿರಿ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಲಾಭ ಪಡೆಯುತ್ತೀರಿ. ಜೀರ್ಣಕ್ರಿಯೆ ಸಮಸ್ಯೆಗಳು ಕಾಡಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ವ್ಯಯ ಮಾಡುವಿರಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ.

ಕನ್ಯಾ(Virgo): ನಿಮ್ಮದಲ್ಲದ ಸಮಸ್ಯೆ ನಿಮಗೆ ಅಡ್ಡಿಯಾಗುವ ಸಮಸ್ಯೆ ಇದೆ. ಒಂಟಿತನ ಕಾಡಬಹುದು. ಹೊಸ ಹೊಸ ಕಲಿಕಾ ತಂಡಗಳಿಗೆ ಸೇರಿಕೊಳ್ಳಿ. ಕುಟುಂಬದಲ್ಲಿ ವಿವಾಹದ ಮಾತುಕತೆ ನಡೆಯಬಹುದು. ಮಾನಸಿಕ ಚಂಚಲತೆ, ದ್ವಂದ್ವಗಳು ಕಾಡುವುವು. ಇಷ್ಟ ದೇವರಲ್ಲಿ ಪ್ರಾರ್ಥಿಸಿ. 

ತುಲಾ(Libra): ನಿಮ್ಮ ಅನುಭವ, ಉತ್ಸಾಹವೇ ಪ್ರೇರಕ ಶಕ್ತಿಯಾಗಿ ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಪ್ರಗತಿ, ಮೆಚ್ಚುಗೆ ಸಿಗಲಿದೆ. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ಕೃಷ್ಣನಿಗೆ ತುಳಸಿ ಅರ್ಪಿಸಿ.

ವೃಶ್ಚಿಕ(Scorpio): ಪ್ರೇಮ ವಿವಾಹಗಳಿಗೆ ಹಿನ್ನಡೆ, ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ನಿರುದ್ಯೋಗಿಗಳು ಸುಮ್ಮನೆ ಕುಳಿತಲ್ಲೇ ಕೆಲಸ ಹುಡುಕಿ ಬರಲೆಂದು ಕಾಯಬೇಡಿ. ಸಾಧ್ಯವಾದಷ್ಟು ಪ್ರಯತ್ನ ಹಾಕಿ. ನಿಮ್ಮ ಗುರು ಹಿರಿಯರ ಸ್ಮರಣೆ ಮಾಡಿ. 

ಇದು ವೈಶಾಖ ಮಾಸ, ಪುಣ್ಯ ಪ್ರಾಪ್ತಿಗೆ ಮಾಡಿ ಈ ಕೆಲಸ!

ಧನುಸ್ಸು(Sagittarius): ಆಫೀಸ್‌ನಲ್ಲಿ ಕೆಲಸ ಕಾರ್ಯಗಳಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವಿರಿ. ಹೊಸತನದ ಚೈತನ್ಯ ನಿಮ್ಮೆಲ್ಲ ಕೆಲಸದಲ್ಲಿ ಉತ್ತಮ ಫಲವನ್ನೇ ನೀಡುವುದು. ಮೈ ಕೈ ನೋವಿನಂಥ ಸಮಸ್ಯೆಗಳು ಕಿರಿ ಕಿರಿ ತರಬಹುದು. ಗುರು ರಾಘವೇಂದ್ರ ಸ್ವಾಮಿಯ ಸ್ಮರಣೆ ಮಾಡಿ. 

ಮಕರ(Capricorn): ವಾಹನ ಬಿಡಿ ಭಾಗಗಳ ವ್ಯಾಪಾರ, ಲೋಹದ ವ್ಯಾಪಾರ, ವಸ್ತ್ರ, ವಾಹನ ವ್ಯಾಪಾರದಲ್ಲಿ ಲಾಭವಿರಲಿದೆ. ಶೈಕ್ಷಣಿಕ ರಂಗದಲ್ಲಿ, ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ವಿಷ್ಣುವಿನ ಪೂಜೆ ಮಾಡಿ.

ಕುಂಭ(Aquarius): ವಿರೋಧಿಗಳ ತಂಟೆ ತಕರಾರುಗಳಿಂದ ಪಾರಾಗಿ ಮನಸ್ಸಿಗೆ ನೆಮ್ಮದಿ ದೊರೆಯುವುದು. ಋಣಾತ್ಮಕ ಚಿಂತನೆಗಳು ಹತ್ತಿರ ಬಾರದಂತೆ ಎಚ್ಚರಿಕೆ ವಹಿಸಿ. ಸಣ್ಣ ಹೆಜ್ಜೆಗಳನ್ನೂ ಆತ್ಮವಿಶ್ವಾಸದಿಂದಲೇ ಇಡಿ. ಲಕ್ಷ್ಮೀ ವೆಂಕಟೇಶ್ವರ ಧ್ಯಾನ ಮಾಡಿ. 

ಮೀನ(Pisces): ಹಣದ ವಿಚಾರದಲ್ಲಿ ಸಮಸ್ಯೆಗಳು ಹೆಚ್ಚಾಗಲಿವೆ. ನಿಮ್ಮ ಉಳಿತಾಯ ಯೋಜನೆ ಸರಿ ಮಾಡಿಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆಯಾಗುತ್ತದೆ. ಸರಿಯಾದ ಕಡೆ ಹೂಡಿಕೆ ಮಾಡಲು ತಜ್ಞರ ಸಲಹೆ ಪಡೆಯಿರಿ. ಹೋಟೆಲ್ ವ್ಯವಹಾರದಲ್ಲಿ ಹೆಚ್ಚಿನ ಲಾಭ, ರಾಘವೇಂದ್ರ ಅಷ್ಟೋತ್ತರ ಪಠಿಸಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!