Daily Horoscope: ಅಕ್ಷಯ ತೃತೀಯದ ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ..

By Suvarna NewsFirst Published May 3, 2022, 5:00 AM IST
Highlights

3 ಮೇ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಗೆ ವಾಹನ ಖರೀದಿಯ ಸಂತಸ

ಮೇಷ(Aries): ದುಬಾರಿ ವಸ್ತುಗಳ ಖರೀದಿ ಮನೆಯಲ್ಲಿ ಸಂತಸ ತರುವುದು. ಕುಟುಂಬ ಸೌಖ್ಯವಿರುವುದು. ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಿ. ರಾತ್ರಿ ಕಂಡ ಬಾವಿಗೆ ಹಗಲು ಬೀಳಬೇಡಿ. ಬೇಗ ಹಣ ಮಾಡುವ ಆಮಿಶಕ್ಕೆ ಬಲಿಯಾಗಬೇಡಿ. ಆಂಜನೇಯನಿಗೆ ಕೆಂಪು ಹೂವು ಅರ್ಪಿಸಿ.

ವೃಷಭ(Taurus): ಸ್ವಾರ್ಥಕ್ಕಾಗಿ ಮನೆಯವರ ಭಾವನೆಗಳನ್ನು ಕಡೆಗಣಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ತಂದೆಯ ಜೊತೆಗಿನ ಮುನಿಸು ಶಮನಕ್ಕೆ ಪ್ರಯತ್ನಿಸಿ. ಉದ್ಯೋಗದಲ್ಲಿ ಕೊಂಚ ಕಿರಿಕಿರಿ ಇರಲಿದೆ. ಚಿನ್ನ ಖರೀದಿ ಮಾಡುವಿರಿ. ಭಜರಂಗ ಬಾಣ ಹೇಳಿಕೊಳ್ಳಿ. 

Latest Videos

ಮಿಥುನ(Gemini): ಸ್ನೇಹಿತರ ಸಹಕಾರ ಸಿಗಲಿದೆ. ನಿಮ್ಮ ಪ್ರೀತಿ, ಪ್ರಣಯ ಜೀವನ ಸುಮಧುರವಾಗಲಿದೆ. ಶ್ರಮವಿಲ್ಲದೆ ಯಾವುದೂ ಬರಲಾರದು. ಅದೃಷ್ಟದ ಬಲದಿಂದ ಬಂದರೂ ಅದನ್ನು ಉಳಿಸಿಕೊಳ್ಳಲಾದರೂ ಶ್ರಮ ಹಾಕಲೇಬೇಕು. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ಕಟಕ(Cancer): ಗೆಳೆಯರ ಬಳಗದಿಂದ ಸಿಹಿ ಸುದ್ದಿ ಕೇಳುವಿರಿ. ಪ್ರೀತಿ ಪ್ರೇಮದ ವಿಚಾರಗಳು ಬಿಡಿಸಲಾರದ ಕಗ್ಗಂಟಾಗಬಹುದು.  ಸಾಲದಿಂದ ಮುಕ್ತರಾಗುವ ಮಾರ್ಗಗಳ ಬಗ್ಗೆ ಯೋಚಿಸಿ. ಇಲ್ಲದಿದ್ದಲ್ಲಿ ದುಡಿದದ್ದೆಲ್ಲ ಸಾಲ ತೀರಿಸಲೇ ಹೋಗುತ್ತವೆ. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ.

ಸಿಂಹ(Leo): ಮಕ್ಕಳ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುವಿರಿ. ಸಹೋದರಿಯ ವಿವಾಹ ವಿಷಯ ತಲೆನೋವಾಗಲಿದೆ. ಅವಿವಾಹಿತರು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಉತ್ತಮ ಸಂಬಂಧವೇ ಸಿಗಲಿದೆ. ಕಚೇರಿ ಕೆಲಸಗಳಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಆಂಜನೇಯನಿಗೆ ಕುಂಕುಮ ಅರ್ಪಿಸಿ. 

ಕನ್ಯಾ(Virgo): ಪತ್ನಿಯ ಸಾಮರ್ಥ್ಯದ ಮೇಲೆಯೇ ಹೊಟ್ಟೆಕಿಚ್ಚು ಪಡಬೇಡಿ. ಬದಲಿಗೆ ಹೆಮ್ಮೆ ಪಡಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕೆಲಸಕ್ಕೆ ಸಂಬಂಧಿಸಿ ಹೊಸ ಅವಕಾಶಗಳು ಬರುತ್ತವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ರಾಮ ನಾಮ ಜಪ ಮಾಡಿ. 

ತುಲಾ(Libra): ಕೆಲವು ವಸ್ತು ನಷ್ಟದಿಂದ ಆದಾಯ ನಷ್ಟವಾಗುವುದು. ಬೆಳೆಗಳು ಅಂದುಕೊಂಡಷ್ಟು ಆದಾಯ ತರದೇ ಹೋಗಬಹುದು. ಹೊಸ ತಂತ್ರಜ್ಞಾನ ಕುರಿತು ಜ್ಞಾನವನ್ನು ಪಡೆಯುವ ಬಯಕೆ ಇರುತ್ತದೆ. ವಾಹನ ಖರೀದಿಯಿಂದ ಸಂತಸ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Ramadan Festival ಭರ್ಜರಿ ವ್ಯಾಪಾರ ಕಾಣ್ತಿರೋ ಭಟ್ಕಳದ ರಂಜಾನ್ ಮಾರ್ಕೆಟ್

ವೃಶ್ಚಿಕ(Scorpio): ಬ್ಯಾಂಕ್‌ ಕೆಲಸಗಳು ವಿಳಂಬವಾಗುತ್ತವೆ. ಮನಸ್ಸಿಗೆ ಬೇಸರ ಉಂಟಾಗುತ್ತವೆ. ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಏನೇ ಸಮಸ್ಯೆ ಆದರೂ ಕೆಲಸದಲ್ಲಿ ಮುಂದುವರಿಯುತ್ತೀರಿ. ಕೆಲಸದ ಒತ್ತಡ ಹೆಚ್ಚಾಗಬಹುದು. ಭಜರಂಗ ಬಾಣ ಹೇಳಿಕೊಳ್ಳಿ.

ಧನುಸ್ಸು(Sagittarius): ಖರ್ಚುಗಳು ಹೆಚ್ಚಲಿವೆ. ಕೆಲಸವೂ ಕೂಡಾ. ಉದ್ಯೋಗದಲ್ಲಿ ಓಡಾಟ, ಆದರೆ ಅಭಿವೃದ್ಧಿ ಇರಲಿದೆ. ಸಂಗಾತಿಯಿಂದ ಅನುಕೂಲವಾಗಲಿದೆ. ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ನೀವು ಬಯಸಿದ್ದೆಲ್ಲ ತಾನಾಗೇ ದೊರಕುತ್ತದೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ಮಕರ(Capricorn): ಸಾಕಷ್ಟು ನೋವುಗಳನ್ನು ಅನುಭವಿಸಿದ್ದೀರಿ. ಇದು ನಿಮ್ಮ ಮನೋಬಲ ಹೆಚ್ಚಿಸಿದೆ. ಈಗ ಮತ್ತೆ ಕಂಗೆಟ್ಟು ಕೂರಲು ಮನಸ್ಸಿಗೆ ಬಿಡಬೇಡಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಸಕಾರಾತ್ಮಕವಾಗಿ ದಿನ ಕಳೆಯಿರಿ. ಆಂಜನೇಯ ಸ್ಮರಣೆ ಮಾಡಿ. 

ಕುಂಭ(Aquarius): ಹೊಸ ಪರಿಚಯಗಳು ಸ್ನೇಹಕ್ಕೆ ತಿರುಗಿ ಸಂತಸವಾಗುತ್ತದೆ. ಮಾತಿನ ಮೇಲೆ ಹಿಡಿತ ಇರಲಿ. ಉತ್ಸಾಹದ ಭರದಲ್ಲಿ ಏನೇನೋ ಮಾತಾಡಿ ನಂತರ ತೆಪ್ಪಗಿರಬೇಕಿತ್ತು ಎಂದು ಕೊರಗಿದರೆ ಪ್ರಯೋಜನವಿಲ್ಲ. ಕೆಂಪು ಧಾನ್ಯ ದಾನ ಮಾಡಿ. 

Basava Jayanti 2022 ಯಾವಾಗ? ಆಚರಣೆ ಹೇಗೆ? ಮಹತ್ವವೇನು?

ಮೀನ(Pisces): ನಿಮ್ಮ ಒಳ್ಳೆಯ ರೀತಿಯ ಮಾತುಗಳು ಇನ್ನೊಬ್ಬರಲ್ಲಿ ತಪ್ಪು ಕಲ್ಪನೆ ಮೂಡಿಸಬಹುದು. ಯಾರಿಗೋ ಕೊಟ್ಟ ಸಾಲ ಹಿಂದಿರುಗದೆ ದುಡ್ಡಿನ ಸಮಸ್ಯೆ ಕಂಗೆಡಿಸಬಹುದು. ಈ ವಿಷಯಕ್ಕೆ ಜಗಳವೂ ಆಗಬಹುದು. ಕೆಂಪು ವಸ್ತ್ರ ದಾನ ಮಾಡಿ. 

click me!